KN/Kannada Main Page: Difference between revisions

(Created page with "1 Category:Participating Languages - Main Pages Category:Participating Languages - Templates __NOTOC__ __NOEDITSECTION__ <div id="mainba...")
 
(Vanibot #0042: Pads main pages after having upgraded MediaWiki)
 
Line 2: Line 2:
[[Category:Participating Languages - Main Pages]]
[[Category:Participating Languages - Main Pages]]
[[Category:Participating Languages - Templates]]
[[Category:Participating Languages - Templates]]
[[Category:Participating Languages - Main Pages - translated]]
[[Category:Indian Languages]]
[[Category:Asian Languages]]
__NOTOC__  __NOEDITSECTION__
__NOTOC__  __NOEDITSECTION__
<div id="mainbanner">Vanipedia &mdash; the essence of Vedic knowledge</div><br>
 
[[image:Kannada MainPage Banner.jpg|1225px|center]]
[[image:Kannada MainPage Banner.jpg|1225px|center]]


<div id="mainlinks">
<div id="mainlinks">
[[{{FULLPAGENAME}}#What is Vanipedia|What is Vanipedia]] -
[[{{FULLPAGENAME}}#What is Vanipedia|ವಾಣಿಪೀಡಿಯ ಎಂದರೇನು?]] -
[[{{FULLPAGENAME}}#Random Video Clips from Srila Prabhupada|Random Video Clips from Srila Prabhupada]] -
[[{{FULLPAGENAME}}#Random Video Clips from Srila Prabhupada|ಶ್ರೀಲ ಪ್ರಭುಪಾದರ ವೀಡಿಯೋ ತುಣುಕುಗಳು]] -
[[{{FULLPAGENAME}}#Links to the Content in English|Links to the Content in English]] -
[[{{FULLPAGENAME}}#Links to the Content in Kannada|ಕನ್ನಡದಲ್ಲಿನ ವಿಷಯಕ್ಕೆ ಲಿಂಕ್‌ಗಳು]] -
[[{{FULLPAGENAME}}#Random Audio Clips from Srila Prabhupada|Random Audio Clips from Srila Prabhupada]] -
[[{{FULLPAGENAME}}#Random Audio Clips from Srila Prabhupada|ಶ್ರೀಲ ಪ್ರಭುಪಾದರಿಂದ  ಆಡಿಯೋ ತುಣುಕುಗಳು]] -
<br />
<br />
[[{{FULLPAGENAME}}#Collaborate With Us|Collaborate With Us]] -
[[{{FULLPAGENAME}}#Collaborate With Us|ನಮ್ಮೊಂದಿಗೆ ಸಹಕರಿಸಿ]] -
[[{{FULLPAGENAME}}#Vanipedia's Manifesto|Vanipedia's Manifesto]] -  
[[{{FULLPAGENAME}}#Vanipedia's Manifesto|ವಾಣಿಪೀಡಿಯದ ಪ್ರಣಾಳಿಕೆ]] -  
[[{{FULLPAGENAME}}#Random Slokas from Bhagavad-gita As It Is|Random Slokas from Bhagavad-gita As It Is]] -  
[[{{FULLPAGENAME}}#Random Slokas from Bhagavad-gita As It Is|ಭಗವದ್ಗೀತೆ ಯಥಾ ರೂಪದಿಂದ ಆರಿಸಿದ ಕೆಲವು ಶ್ಲೋಕಗಳು]] -  
[[{{FULLPAGENAME}}#Other resources|Other resources]]
[[{{FULLPAGENAME}}#Other resources|ಇತರ ಸಂಪನ್ಮೂಲಗಳು]]
</div>
</div>


Line 22: Line 25:
|class="MainPageBG" style="width:50%; border:1px solid #cedff2; background:#f5faff; vertical-align:top; color:#000;"|
|class="MainPageBG" style="width:50%; border:1px solid #cedff2; background:#f5faff; vertical-align:top; color:#000;"|
{|id="mp-left" width="100%" cellpadding="2" cellspacing="18" style="vertical-align:left; background:#f5faff;"
{|id="mp-left" width="100%" cellpadding="2" cellspacing="18" style="vertical-align:left; background:#f5faff;"
! <h2 id="mp-tfa-h2" style="margin:0; background:#cedff2; font-size:120%; font-weight:bold; border-radius: 1em; border:1px solid #a3b0bf; text-align:center; color:#000; padding:0.2em 0.4em;">What is Vanipedia</h2>
! <h2 id="mp-tfa-h2" style="margin:2; background:#cedff2; font-size:120%; font-weight:bold; border-radius: 1em; border:1px solid #a3b0bf; text-align:center; color:#000; padding:0.2em 0.4em;">ವಾಣಿಪೀಡಿಯ ಎಂದರೇನು?</h2>
|-
|-
|style="color:#000;"| <div id="mp-tfa">
|style="color:#000; padding:1em 1em; padding:1em 1em;"| <div id="mp-tfa">
{{KN/Kannada Main Page - What is Vanipedia}}
{{KN/Kannada Main Page - What is Vanipedia}}
</div>  
</div>  
|-
|-
! <h2 id="mp-tfa-h2" style="margin:0; background:#cedff2; font-size:120%; font-weight:bold; border-radius: 1em; border:1px solid #a3b0bf; text-align:center; color:#000; padding:0.2em 0.4em;">Links to the Content in English</h2>
! <h2 id="mp-tfa-h2" style="margin:2; background:#cedff2; font-size:120%; font-weight:bold; border-radius: 1em; border:1px solid #a3b0bf; text-align:center; color:#000; padding:0.2em 0.4em;">ಕನ್ನಡದಲ್ಲಿನ ವಿಷಯಕ್ಕೆ ಲಿಂಕ್‌ಗಳು</h2>
|-
|-
|style="color:#000;"| <div id="mp-tfa">
|style="color:#000; padding:1em 1em; padding:1em 1em;"| <div id="mp-tfa">
{{KN/Kannada Main Page - Links to the Content in English}}
{{KN/Kannada Main Page - Links to the Content in Kannada}}
</div>  
</div>  
|-
|-
! <h2 id="mp-tfa-h2" style="margin:0; background:#cedff2; font-size:120%; font-weight:bold; border-radius: 1em; border:1px solid #a3b0bf; text-align:center; color:#000; padding:0.2em 0.4em;">Collaborate With Us</h2>
! <h2 id="mp-tfa-h2" style="margin:2; background:#cedff2; font-size:120%; font-weight:bold; border-radius: 1em; border:1px solid #a3b0bf; text-align:center; color:#000; padding:0.2em 0.4em;">ನಮ್ಮೊಂದಿಗೆ ಸಹಕರಿಸಿ</h2>
|-
|-
|style="color:#000;"| <div id="mp-tfa">
|style="color:#000; padding:1em 1em; padding:1em 1em;"| <div id="mp-tfa">
{{KN/Kannada Main Page - Collaborate With Us}}
{{KN/Kannada Main Page - Collaborate With Us}}
</div>  
</div>  
|-
|-
! <h2 id="mp-tfa-h2" style="margin:0; background:#cedff2; font-size:120%; font-weight:bold; border-radius: 1em; border:1px solid #a3b0bf; text-align:center; color:#000; padding:0.2em 0.4em;">Random Slokas from Bhagavad-gita As It Is</h2>
! <h2 id="mp-tfa-h2" style="margin:2; background:#cedff2; font-size:120%; font-weight:bold; border-radius: 1em; border:1px solid #a3b0bf; text-align:center; color:#000; padding:0.2em 0.4em;">ಭಗವದ್ಗೀತೆ ಯಥಾ ರೂಪದಿಂದ ಆರಿಸಿದ ಕೆಲವು ಶ್ಲೋಕಗಳು</h2>
|-
|-
|style="color:#000;"| <div id="mp-tfa">
|style="color:#000; padding:1em 1em; padding:1em 1em;"| <div id="mp-tfa">
{{Master Main Page - Random Slokas from Bhagavad-gita As It Is}}
{{Master Main Page - Random Slokas from Bhagavad-gita As It Is}}
</div>  
</div>  
Line 53: Line 56:
| class="MainPageBG" style="width:55%; border:1px solid #cef2e0; background:#f5fffa; vertical-align:top;"|
| class="MainPageBG" style="width:55%; border:1px solid #cef2e0; background:#f5fffa; vertical-align:top;"|
{|id="mp-right" width="100%" cellpadding="2" cellspacing="18" style="vertical-align:top; background:#f5fffa;"
{|id="mp-right" width="100%" cellpadding="2" cellspacing="18" style="vertical-align:top; background:#f5fffa;"
! <h2 id="mp-itn-h2" style="margin:0; background:#cef2e0; font-size:120%; font-weight:bold; border-radius: 1em; border:1px solid #a3bfb1; text-align:center; color:#000; padding:0.2em 0.4em;">Random Video Clips from Srila Prabhupada</h2>
! <h2 id="mp-itn-h2" style="margin:2; background:#cef2e0; font-size:120%; font-weight:bold; border-radius: 1em; border:1px solid #a3bfb1; text-align:center; color:#000; padding:0.2em 0.4em;">ಶ್ರೀಲ ಪ್ರಭುಪಾದರ ವೀಡಿಯೋ ತುಣುಕುಗಳು</h2>
|-
|-
|style="color:#000;"| <div id="mp-itn">
|style="color:#000; padding:1em 1em; padding:1em 1em;"| <div id="mp-itn">
{{Master Main Page - Random Video Clips from Srila Prabhupada}}
{{Master Main Page - Random Video Clips from Srila Prabhupada}}
</div>
</div>
|-
|-
! <h2 id="mp-itn-h2" style="margin:0; background:#cef2e0; font-size:120%; font-weight:bold; border-radius: 1em; border:1px solid #a3bfb1; text-align:center; color:#000; padding:0.2em 0.4em;">Random Audio Clips from Srila Prabhupada</h2>
! <h2 id="mp-itn-h2" style="margin:1; background:#cef2e0; font-size:120%; font-weight:bold; border-radius: 1em; border:1px solid #a3bfb1; text-align:center; color:#000; padding:0.2em 0.4em;">ಶ್ರೀಲ ಪ್ರಭುಪಾದರಿಂದ  ಆಡಿಯೋ ತುಣುಕುಗಳು</h2>
|-
|-
|style="color:#000;"| <div id="mp-itn">
|style="color:#000; padding:1em 1em; padding:1em 1em;"| <div id="mp-itn">
{{Master Main Page - Random Audio Clips from Srila Prabhupada}}
{{KN/Kannada Main Page - Random Audio Clips from Srila Prabhupada}}
</div>
</div>
|-
|-
! <h2 id="mp-itn-h2" style="margin:0; background:#cef2e0; font-size:120%; font-weight:bold; border-radius: 1em; border:1px solid #a3bfb1; text-align:center; color:#000; padding:0.2em 0.4em;">Vanipedia's Manifesto</h2>
! <h2 id="mp-itn-h2" style="margin:2; background:#cef2e0; font-size:120%; font-weight:bold; border-radius: 1em; border:1px solid #a3bfb1; text-align:center; color:#000; padding:0.2em 0.4em;">ವಾಣಿಪೀಡಿಯದ ಪ್ರಣಾಳಿಕೆ</h2>
|-
|-
|style="color:#000;"| <div id="mp-itn">
|style="color:#000; padding:1em 1em; padding:1em 1em;"| <div id="mp-itn">
{{KN/Kannada Main Page - Vanipedia's Manifesto}}
{{KN/Kannada Main Page - Vanipedia's Manifesto}}
</div>
</div>
Line 74: Line 77:




==<div style="text-align: center; direction: ltr; margin-left: 1em;">Other resources </div> <!---------- Other resources ----------> ==
==<div style="text-align: center; direction: ltr; margin-left: 1em;">ಇತರ ಸಂಪನ್ಮೂಲಗಳು </div> <!---------- Other resources ----------> ==
<div class="maincenter">
<div class="maincenter">
'''Vanipedia websites:'''
'''Vanipedia websites:'''

Latest revision as of 18:33, 20 December 2020


ವಾಣಿಪೀಡಿಯ ಎಂದರೇನು?

ವಾಣಿಪೀಡಿಯಾ ಎಂಬುದು ಶ್ರೀಲ ಪ್ರಭುಪಾದರ (ವಾಣಿ) ಪದಗಳ ಕ್ರಿಯಾತ್ಮಕ ವಿಶ್ವಕೋಶವಾಗಿದೆ. ಸಹಯೋಗದ ಮೂಲಕ, ನಾವು ಶ್ರೀಲ ಪ್ರಭುಪಾದರ ಬೋಧನೆಗಳನ್ನು ವಿವಿಧ ದೃಷ್ಟಿಕೋನಗಳಿಂದ ಅನ್ವೇಷಿಸುತ್ತೇವೆ ಮತ್ತು ಸಮಗ್ರವಾಗಿ ಸಂಗ್ರಹಿಸುತ್ತೇವೆ, ಮತ್ತು ಅವುಗಳನ್ನು ಸುಲಭವಾಗಿ ಪಡೆಯುವ ಹಾಗು ಅರ್ಥವಾಗುವ ರೀತಿಯಲ್ಲಿ ಪ್ರಸ್ತುತಪಡಿಸುತ್ತೇವೆ. ಎಲ್ಲರ ಅನುಕೂಲಕ್ಕಾಗಿ, ಕೃಷ್ಣ ಪ್ರಜ್ಞೆಯ ವಿಜ್ಞಾನವನ್ನು ಜಗತ್ತಿಗೆ ಬೋಧಿಸಲು ಮತ್ತು ಕಲಿಸಲು ನಿರಂತರ, ವಿಶ್ವಾದ್ಯಂತ ವೇದಿಕೆಯನ್ನು ಶ್ರೀಲ ಪ್ರಭುಪಾದರಿಗೆ ನೀಡಲು ಅವರ ಡಿಜಿಟಲ್ ಬೋಧನೆಗಳ ಸಾಟಿಯಿಲ್ಲದ ಭಂಡಾರವನ್ನು ನಾವು ನಿರ್ಮಿಸುತ್ತಿದ್ದೇವೆ.

ವಾಣಿಪೀಡಿಯಾ ಯೋಜನೆಯು ಜಾಗತಿಕ ಬಹುಭಾಷಾ ಸಹಯೋಗದ ಪ್ರಯತ್ನವಾಗಿದ್ದು, ಶ್ರೀಲ ಪ್ರಭುಪಾದರ ಅನೇಕ ಭಕ್ತರು ವಿವಿಧ ರೀತಿಯಲ್ಲಿ ಭಾಗವಹಿಸಲು ಮುಂದೆ ಬರುತ್ತಿರುವುದರಿಂದ ಯಶಸ್ವಿಯಾಗುತ್ತಿದೆ. ಪ್ರತಿಯೊಂದು ಭಾಷೆಯೂ ಅಭಿವೃದ್ಧಿಯ ವಿವಿಧ ಹಂತಗಳಲ್ಲಿದೆ. ನವೆಂಬರ್ 2027ರಲ್ಲಿ ಅವ 50ನೇ ಪುಣ್ಯತಿಥಿಯಂದು ಅರ್ಪಣೆಯಾಗಿ, ಶ್ರೀಲ ಪ್ರಭುಪಾದರ ರೆಕಾರ್ಡ್ ಮಾಡಿದ ಎಲ್ಲಾ ಉಪನ್ಯಾಸಗಳು ಮತ್ತು ಸಂಭಾಷಣೆಗಳನ್ನು, ಮತ್ತು ಅವರ ಪತ್ರಗಳನ್ನು ಕನಿಷ್ಠ 16 ಭಾಷೆಗಳಲ್ಲಿ, ಮತ್ತು 32 ಭಾಷೆಗಳಲ್ಲಿ ಕನಿಷ್ಠ ಶೇಕಡ 25ರಷ್ಟು, ಅನುವಾದಿಸಲು ನಾವು ಬಯಸುತ್ತೇವೆ. ಈ ಭಾಷೆಗಳಲ್ಲಿ ಕನ್ನಡ ಭಾಷೆಯೂ ಒಂದು ಇರುತ್ತದೆಯೇ?

ಕನ್ನಡದಲ್ಲಿನ ವಿಷಯಕ್ಕೆ ಲಿಂಕ್‌ಗಳು

ವಾಣಿಪೀಡಿಯಾದಲ್ಲಿ ಈಗ ಲಭ್ಯವಿರುವ ಕನ್ನಡದ ವಿಷಯಗಳ ಎಲ್ಲ ಲಿಂಕ್ಗಳು ಇಲ್ಲಿವೆ:

ಕನ್ನಡದಲ್ಲಿ ಭಗವದ್ಗೀತೆಯ ಪರಿಚಯ

ಕನ್ನಡ ಹಾರ್ಡ್-ಕೋಡೆಡ್ ಉಪಶೀರ್ಷಿಕೆಗಳೊಂದಿಗೆ ಶ್ರೀಲ ಪ್ರಭುಪಾದರ ಎಲ್ಲಾ 1080 ವೀಡಿಯೊಗಳನ್ನು ಇಲ್ಲಿ ನೀವು ಕಾಣಬಹುದು.

ನೆಕ್ಟರ್ ಡ್ರಾಪ್ಸ, ಶ್ರೀಲ ಪ್ರಭುಪಾದರ ಉಪನ್ಯಾಸಗಳು, ಸಂಭಾಷಣೆಗಳು, ಮತ್ತು ಮುಂಜಾನೆ ನಡಿಗೆಯ ಕಿರು ಆಯ್ದ ಭಾಗಗಳಾಗಿವೆ. ಈ ಸಣ್ಣ (90 ಸೆಕೆಂಡುಗಳಿಗಿಂತ ಕಡಿಮೆ) ಆಡಿಯೊ ತುಣುಕುಗಳು ತುಂಬಾ ಶಕ್ತಿಯುತವಾಗಿದ್ದು, ನಿಮ್ಮ ಆತ್ಮವನ್ನು ಪ್ರಬುದ್ಧಗೊಳಿಸುತ್ತದೆ, ಹಾಗು ಅದನ್ನು ಶಾಂತಿ ಮತ್ತು ಸಂತೋಷದಿಂದ ತುಂಬುತ್ತದೆ!

ಶ್ರೀಲ ಪ್ರಭುಪಾದರ ಉಪನ್ಯಾಸ ಪುಟಗಳು, ಪ್ರತಿಲೇಖನ ಮತ್ತು ವೀಡಿಯೊಗಳೊಂದಿಗೆ.

ಈ ಪ್ರಣಾಳಿಕೆ ವಾಣಿಪೀಡಿಯದ ಧ್ಯೇಯದ ವಿವರಣೆಯಾಗಿದೆ.

ಶ್ರೀಲ ಪ್ರಭುಪಾದ: ಇಸ್ಕಾನ್ ಸ್ಥಾಪನಾಚಾರ್ಯ – ಜಿ.ಬಿ.ಸಿ / ಆಡಳಿತ ಆಯೋಗದ ಸಂಸ್ಥಾಪನಾಪತ್ರ

ನಮ್ಮೊಂದಿಗೆ ಸಹಕರಿಸಿ

"This section is your call to action - an open invitation to join the mission of building Vanipedia - can be newsy - can be updated regularly."

ಭಗವದ್ಗೀತೆ ಯಥಾ ರೂಪದಿಂದ ಆರಿಸಿದ ಕೆಲವು ಶ್ಲೋಕಗಳು

Bhagavad-gita 7.3

मनुष्याणां सहस्रेषु कश्चिद्यतति सिद्धये ।
यततामपि सिद्धानां कश्चिन्मां वेत्ति तत्त्वतः ॥३॥
manuṣyāṇāṁ sahasreṣu
kaścid yatati siddhaye
yatatām api siddhānāṁ
kaścin māṁ vetti tattvataḥ

SYNONYMS

manuṣyāṇām—of men; sahasreṣu—out of many thousands; kaścit—someone; yatati—endeavors; siddhaye—for perfection; yatatām—of those so endeavoring; api—indeed; siddhānām—of those who have achieved perfection; kaścit—someone; mām—Me; vetti—does know; tattvataḥ—in fact.

TRANSLATION

Out of many thousands among men, one may endeavor for perfection, and of those who have achieved perfection, hardly one knows Me in truth.

PURPORT

There are various grades of men, and out of many thousands one may be sufficiently interested in transcendental realization to try to know what is the self, what is the body, and what is the Absolute Truth. Generally mankind is simply engaged in the animal propensities, namely eating, sleeping, defending and mating, and hardly anyone is interested in transcendental knowledge. The first six chapters of the Gītā are meant for those who are interested in transcendental knowledge, in understanding the self, the Superself and the process of realization by jñāna-yoga, dhyāna-yoga, and discrimination of the self from matter. However, Kṛṣṇa can only be known by persons who are in Kṛṣṇa consciousness. Other transcendentalists may achieve impersonal Brahman realization, for this is easier than understanding Kṛṣṇa. Kṛṣṇa is the Supreme Person, but at the same time He is beyond the knowledge of Brahman and Paramātmā. The yogīs and jñānīs are confused in their attempts to understand Kṛṣṇa, although the greatest of the impersonalists, Śrīpāda Śaṅkarācārya, has admitted in his Gītā commentary that Kṛṣṇa is the Supreme Personality of Godhead. But his followers do not accept Kṛṣṇa as such, for it is very difficult to know Kṛṣṇa, even though one has transcendental realization of impersonal Brahman.

Kṛṣṇa is the Supreme Personality of Godhead, the cause of all causes, the primeval Lord Govinda. Īśvaraḥ paramaḥ kṛṣṇaḥ sac-cid-ānanda-vigrahaḥ anādir ādir govindaḥ sarva-kāraṇa-kāraṇam. It is very difficult for the nondevotees to know Him. Although nondevotees declare that the path of bhakti or devotional service is very easy, they cannot practice it. If the path of bhakti is so easy, as the nondevotee class of men proclaim, then why do they take up the difficult path? Actually the path of bhakti is not easy. The so-called path of bhakti practiced by unauthorized persons without knowledge of bhakti may be easy, but when it is practiced factually according to the rules and regulations, the speculative scholars and philosophers fall away from the path. Śrīla Rūpa Gosvāmī writes in his Bhakti-rasāmṛta-sindhu:

śruti-smṛti-purāṇādi-pañcarātra-vidhiṁ vinā
aikāntikī harer bhaktir utpātāyaiva kalpate.

"Devotional service of the Lord that ignores the authorized Vedic literatures like the Upaniṣads, Purāṇas, Nārada-pañcarātra, etc., is simply an unnecessary disturbance in society."

It is not possible for the Brahman realized impersonalist or the Paramātmā realized yogī to understand Kṛṣṇa, the Supreme Personality of Godhead as the son of mother Yaśodā or the charioteer of Arjuna. Even the great demigods are sometimes confused about Kṛṣṇa: "muhyanti yat sūrayaḥ," "māṁ tu veda na kaścana." "No one knows Me as I am," the Lord says. And if one does know Him, then "sa mahātmā sudurlabhaḥ." "Such a great soul is very rare." Therefore unless one practices devotional service to the Lord, he cannot know Kṛṣṇa as He is (tattvataḥ), even though one is a great scholar or philosopher. Only the pure devotees can know something of the inconceivable transcendental qualities in Kṛṣṇa, in the cause of all causes, in His omnipotence and opulence, and in His wealth, fame, strength, beauty, knowledge and renunciation, because Kṛṣṇa is benevolently inclined to His devotees. He is the last word in Brahman realization, and the devotees alone can realize Him as He is. Therefore it is said:

ataḥ śrī-kṛṣṇa-nāmādi na bhaved grāhyam indriyāiḥ
sevonmukhe hi jihvādau svayam eva sphuraty adaḥ

"No one can understand Kṛṣṇa as He is by the blunt material senses. But He reveals Himself to the devotees, being pleased with them for their transcendental loving service unto Him." (Padma Purāṇa)


ಶ್ರೀಲ ಪ್ರಭುಪಾದರ ವೀಡಿಯೋ ತುಣುಕುಗಳು


ಶ್ರೀಲ ಪ್ರಭುಪಾದರಿಂದ ಆಡಿಯೋ ತುಣುಕುಗಳು


KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ವಿರಾಟರೂಪ ಹೇಗೆ ಬಂದಿತು, ಬ್ರಹ್ಮ ಹೇಗೆ ಸೃಷ್ಠಿಯಾದರು ಹಾಗು ಬ್ರಹ್ಮನಿಂದ ಋಷಿಗಳು ಹೇಗೆ ಸೃಷ್ಠಿಯಾದರು, ಹೇಗೆ ಜನಸಂಖ್ಯೆ ಕ್ರಮೇಣವಾಗಿ ಬೆಳೆಯಿತು, ಎಂಬುದನ್ನು ಶ್ರೀಮದ್ ಭಾಗವತದಲ್ಲಿ ಸೊಗಸಾಗಿ ವರ್ಣಿಸಲಾಗಿದೆ. ಈ ವರ್ಣನೆಗಳಿವೆ. ಆದ್ದರಿಂದ ಅವನೇ ಮೂಲ. ಜ್ನಮಾದಿ ಅಸ್ಯ ಯತಃ ( ಶ್ರೀ.ಭಾ 1.1.1). ವೇದಾಂತ ಸೂತ್ರದಲ್ಲಿ ಹೇಳಿರುವಹಾಗೆ ಎಲ್ಲವೂ ಅವನಿಂದ ಹೊರಹೊಮ್ಮುತ್ತಿದೆ.
670102 - ಉಪನ್ಯಾಸ BG 10.02-3 - ನ್ಯೂ ಯಾರ್ಕ್



ವಾಣಿಪೀಡಿಯದ ಪ್ರಣಾಳಿಕೆ

↓ Scroll down to read more...

ಪರಿಚಯ

ಶ್ರೀಲಾ ಪ್ರಭುಪಾದರು ತಮ್ಮ ಬೋಧನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಆದ್ದರಿಂದ ವಾಣಿಪೀಡಿಯಾ ಅವರ ಪುಸ್ತಕಗಳು, ರೆಕಾರ್ಡ್ ಮಾಡಿದ ಉಪನ್ಯಾಸಗಳು ಮತ್ತು ಸಂಭಾಷಣೆಗಳು, ಪತ್ರಗಳು ಇತ್ಯಾದಿಗಳನ್ನು ಒಳಗೊಂಡಿರುವ ಅವರ ಕಾರ್ಯಕ್ಷೇತ್ರಕ್ಕೆ ಮಾತ್ರ ಮೀಸಲಾಗಿರುತ್ತದೆ. ಪೂರ್ಣಗೊಂಡಾಗ, ಅಧಿಕೃತ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಬಯಸುವ ಲಕ್ಷಾಂತರ ಜನರು ಶ್ರೀಲ ಪ್ರಭುಪಾದರ ಬೋಧನೆಗಳಿಂದ ಉತ್ತರಗಳನ್ನು ಮತ್ತು ಸ್ಫೂರ್ತಿಯನ್ನು ಪಡೆಯುವ, ಹಾಗು ವಿಶ್ವಕೋಶದ ಸ್ವರೂಪದಲ್ಲಿ ಸಾಧ್ಯವಾದಷ್ಟು ಭಾಷೆಗಳಲ್ಲಿ ಪ್ರಸ್ತುತಪಡಿಸಲಾಗುವ, ಒಂದು ಪವಿತ್ರ ಸ್ಥಳವನ್ನು ನೀಡುವ ವಾಣಿಪೀಡಿಯ ವಿಶ್ವದಲ್ಲೇ ಮೊಟ್ಟಮೊದಲನೇಯ ವಾಣಿ-ಮಂದಿರವಾಗಿರುತ್ತದೆ.

ವಾಣಿಪೀಡಿಯಾದ ದೃಷ್ಟಿ ಹೇಳಿಕೆ

ಶ್ರೀಲ ಪ್ರಭುಪಾದರ ಬಹುಭಾಷಾ ವಾಣಿ-ಉಪಸ್ಥಿತಿಯನ್ನು ಆಹ್ವಾನಿಸಲು ಮತ್ತು ಸಂಪೂರ್ಣವಾಗಿ ಪ್ರಕಟಿಸಲು ಸಹಕರಿಸುವುದು, ಹೀಗೆ ಲಕ್ಷಾಂತರ ಜನರಿಗೆ ಕೃಷ್ಣ ಪ್ರಜ್ಞೆಯ ವಿಜ್ಞಾನವನ್ನು ಜೀವಿಸಲು, ಮತ್ತು ಮಾನವ ಸಮಾಜವನ್ನು ಪುನಃ ಆಧ್ಯಾತ್ಮಿಕಗೊಳಿಸಲು ಭಗವಾನ್ ಚೈತನ್ಯ ಮಹಾಪ್ರಭುಗಳ ಸಂಕೀರ್ತನ ಚಳುವಳಿಗೆ ಸಹಾಯ ಮಾಡಲು ಅನುಕೂಲವಾಗಿಸುವುದು.

ಸಹಯೋಗ

ಶ್ರೀಲ ಪ್ರಭುಪಾದರ ಬೋಧನೆಗಳನ್ನು ಸಭೆಯಂತೆ ಸಂಕಲಿಸುವ ಮತ್ತು ಶ್ರದ್ಧೆಯಿಂದ ಭಾಷಾಂತರಿಸುವ ಸಾವಿರಾರು ಭಕ್ತರ ಸಾಮೂಹಿಕ ಸಹಯೋಗದ ಪ್ರಯತ್ನದಿಂದ ಮಾತ್ರ ವಾಣಿಪೀಡಿಯಾದಲ್ಲಿ ಸ್ಪಷ್ಟವಾಗಿ ಸೂಚಿಸಿರುವ ಮಟ್ಟಕ್ಕೆ ವಿಶ್ವಕೋಶವನ್ನು ನಿರ್ಮಿಸುವುದು ಸಾಧ್ಯ.

ಶ್ರೀಲಾ ಪ್ರಭುಪಾದರ ಎಲ್ಲಾ ಪುಸ್ತಕಗಳ, ಉಪನ್ಯಾಸಗಳ, ಸಂಭಾಷಣೆಗಳ, ಮತ್ತು ಪತ್ರಗಳ ಅನುವಾದವನ್ನು 2027ರ ನವೆಂಬರ್ ವೇಳೆಗೆ ವಾಣಿಪೀಡಿಯಾದಲ್ಲಿ ಕನಿಷ್ಠ 16 ಭಾಷೆಗಳಲ್ಲಿ ಪೂರ್ಣಗೊಳಿಸಲು, ಮತ್ತು ಕೆಲವು ಪ್ರಾತಿನಿಧ್ಯದೊಂದಿಗೆ ಕನಿಷ್ಠ 108 ಭಾಷೆಗಳನ್ನು ತಲುಪಲು ನಾವು ಬಯಸುತ್ತೇವೆ.

ಅಕ್ಟೋಬರ್ 2017ರ ಹೊತ್ತಿಗೆ ಪೂರ್ಣ ಬೈಬಲ್ ಅನ್ನು 670 ಭಾಷೆಗಳಿಗೆ ಅನುವಾದಿಸಲಾಗಿದೆ, ನ್ಯೂ ಟೆಸ್ಟಮೆಂಟ್ ಅನ್ನು 1,521 ಭಾಷೆಗಳಿಗೆ, ಮತ್ತು ಬೈಬಲ್ ಭಾಗಗಳನ್ನು ಅಥವಾ ಕಥೆಗಳನ್ನು 1,121 ಇತರ ಭಾಷೆಗಳಿಗೆ ಅನುವಾದಿಸಲಾಗಿದೆ. ಶ್ರೀಲ ಪ್ರಭುಪಾದರ ಬೋಧನೆಗಳ ಸಂಬಂಧದಲ್ಲಿ, ನಮ್ಮ ಈ ಅಂಕಿಅಂಶಗಳು ಬಹಳ ಅತಿಯಾಗಿ ಕಂಡದರೂ, ಕ್ರೈಸ್ತರು ತಮ್ಮ ಬೋಧನೆಗಳನ್ನು ಜಾಗತಿಕವಾಗಿ ಹರಡಲು ಮಾಡುತ್ತಿರುವ ಪ್ರಯತ್ನಗಳಿಗೆ ಹೋಲಿಸಿದರೆ ಮಹತ್ವಾಕಾಂಕ್ಷೆಯಲ್ಲ ಎಂದು ತೋರಿಸುತ್ತದೆ.

ಸಂಪೂರ್ಣ ಮಾನವಕುಲದ ಅನುಕೂಲಕ್ಕಾಗಿ ವೆಬ್ನಲ್ಲಿ ಶ್ರೀಲ ಪ್ರಭುಪಾದರ ಬಹುಭಾಷಾ ವಾಣಿ-ಉಪಸ್ಥಿತಿಯನ್ನು ಆಹ್ವಾನಿಸುವ ಮತ್ತು ಸಂಪೂರ್ಣವಾಗಿ ಪ್ರಕಟಿಸುವ ಈ ಉದಾತ್ತ ಪ್ರಯತ್ನದಲ್ಲಿ ನಮ್ಮೊಂದಿಗೆ ಸೇರಲು ನಾವು ಎಲ್ಲಾ ಭಕ್ತರನ್ನು ಆಹ್ವಾನಿಸುತ್ತೇವೆ.

ಆವಾಹನೆ

1965 ರಲ್ಲಿ ಶ್ರೀಲ ಪ್ರಭುಪಾದರು ಅಮೆರಿಕಕ್ಕೆ ಆಹ್ವಾನಿಸದೆ ಬಂದರು. ಅವರ ಅದ್ಭುತವಾದ ವಾಪು ಉಪಸ್ಥಿತಿಯ ದಿನಗಳು 1977ರಲ್ಲಿ ಕೊನೆಗೊಂಡಿದ್ದರೂ ಸಹ, ಅವರು ತಮ್ಮ ವಾಣಿಯಲ್ಲಿ ಇನ್ನೂ ಅಸ್ತಿತ್ವದಲ್ಲಿದ್ದಾರೆ, ಮತ್ತು ಈ ಉಪಸ್ಥಿತಿಯನ್ನೇ ನಾವು ಈಗ ಆಹ್ವಾನಿಸಬೇಕು. ಶ್ರೀಲ ಪ್ರಭುಪಾದರನ್ನು ಯಾಚಿಸಿದರೆ ಮಾತ್ರ ಅವರು ಪ್ರಕಟವಾಗುತ್ತಾರೆ. ಅವರನ್ನು ನಮ್ಮ ನಡುವೆ ಹೊಂದಬೇಕೆಂಬ ನಮ್ಮ ತೀವ್ರ ಆಸೆಯೇ ಅವರು ಕಾಣಿಸಿಕೊಳ್ಳುವುದಕ್ಕೆ ಮುಖ್ಯ ಆಧಾರವಾಗಿದೆ.

ಪೂರ್ಣವಾಗಿ ಪ್ರಕಟವಾಗುವುದು

ನಮ್ಮ ಮುಂದೆ ಶ್ರೀಲ ಪ್ರಭುಪಾದರ ಭಾಗಶಃ ಉಪಸ್ಥಿತಿಯನ್ನು ನಾವು ಬಯಸುವುದಿಲ್ಲ. ನಾವು ಅವರ ಪೂರ್ಣ ವಾಣಿ-ಉಪಸ್ಥಿತಿಯನ್ನು ಬಯಸುತ್ತೇವೆ. ಅವರ ರೆಕಾರ್ಡ್ ಮಾಡಿದ ಎಲ್ಲಾ ಬೋಧನೆಗಳನ್ನು ಸಂಪೂರ್ಣವಾಗಿ ಸಂಕಲಿಸಬೇಕು, ಮತ್ತು ಅನೇಕ ಭಾಷೆಗಳಿಗೆ ಅನುವಾದಿಸಬೇಕು. ಈ ಗ್ರಹದ ಭವಿಷ್ಯದ ಪೀಳಿಗೆಗೆ ಇದು ನಮ್ಮ ಅರ್ಪಣೆಯಾಗಿದೆ - ಶ್ರೀಲ ಪ್ರಭುಪಾದರ ಬೋಧನೆಗಳ ಸಂಪೂರ್ಣ ಆಶ್ರಯ.

ವಾಣಿ-ಉಪಸ್ಥಿತಿ

ಶ್ರೀಲಾ ಪ್ರಭುಪಾದರ ಪೂರ್ಣ ವಾಣಿ ಉಪಸ್ಥಿತಿಯು ಎರಡು ಹಂತಗಳಲ್ಲಿ ಕಾಣಿಸುತ್ತದೆ. ಮೊದಲ - ಮತ್ತು ಸುಲಭ ಹಂತ - ಶ್ರೀಲ ಪ್ರಭುಪಾದರ ಎಲ್ಲಾ ಬೋಧನೆಗಳನ್ನು ಎಲ್ಲಾ ಭಾಷೆಗಳಲ್ಲಿ ಸಂಕಲಿಸುವುದು ಮತ್ತು ಅನುವಾದಿಸುವುದು. ಎರಡನೆಯದು - ಮತ್ತು ಹೆಚ್ಚು ಕಷ್ಟಕರವಾದ ಹಂತ - ಅವರ ಬೋಧನೆಗಳನ್ನು ಕೋಟ್ಯಾಂತರ ಜನರು ಸಂಪೂರ್ಣವಾಗಿ ಜೀವಿಸುವುದು.

ಅಧ್ಯಯನದ ವಿಭಿನ್ನ ಮಾರ್ಗಗಳು

  • ಇಲ್ಲಿಯವರೆಗೆ, ನಮ್ಮ ಸಂಶೋಧನೆಯಲ್ಲಿ, ಶ್ರೀಲ ಪ್ರಭುಪಾದರು ಭಕ್ತರಿಗೆ ತಮ್ಮ ಪುಸ್ತಕಗಳನ್ನು ಓದುವಂತೆ ಸೂಚನೆ ನೀಡಿರುವ 60 ವಿಭಿನ್ನ ಮಾರ್ಗಗಳು ಇವೆ ಎಂದು ನಾವು ಕಂಡುಕೊಂಡಿದ್ದೇವೆ.
  • ಶ್ರೀಲಾ ಪ್ರಭುಪಾದರ ಪುಸ್ತಕಗಳನ್ನು ಈ ವಿಭಿನ್ನ ಮಾರ್ಗಗಳು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಸಂಯೋಜಿಸಬಹುದು.ಅಧ್ಯಯನದ ವಿಷಯಾಧಾರಿತ ವಿಧಾನವನ್ನು ಅನುಸರಿಸಿ, ಮತ್ತು ಅವುಗಳನ್ನು ಸಂಕಲಿಸುವ ಮೂಲಕ ಶ್ರೀಲ ಪ್ರಭುಪಾದರು ಪ್ರಸ್ತುತಪಡಿಸುತ್ತಿರುವ ಪ್ರತಿಯೊಂದು ಪದ, ನುಡಿಗಟ್ಟು, ಪರಿಕಲ್ಪನೆ ಅಥವಾ ವ್ಯಕ್ತಿತ್ವದ ಅರ್ಥಗಳ ಆಳವಾದ ಮಹತ್ವವನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಅವರ ಬೋಧನೆಗಳು ನಿಸ್ಸಂದೇಹವಾಗಿ ನಮ್ಮ ಜೀವನ ಮತ್ತು ಆತ್ಮ, ಮತ್ತು ನಾವು ಅವುಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡುವುದು ನಾವು ಶ್ರೀಲ ಪ್ರಭುಪಾದರ ಉಪಸ್ಥಿತಿಯನ್ನು ಅನೇಕ ಆಳವಾದ ರೀತಿಯಲ್ಲಿ ಗ್ರಹಿಸಬಹುದು ಮತ್ತು ಅನುಭವಿಸಬಹುದು.

ಹತ್ತು ಮಿಲಿಯನ್ ಆಚಾರ್ಯರು

  • ನಿಮಗೆ ಈಗ ಹತ್ತು ಸಾವಿರ ಸಿಕ್ಕಿದೆ ಎಂದು ಭಾವಿಸೋಣ. ನಾವು ಲಕ್ಷಕ್ಕೆ ವಿಸ್ತರಿಸುತ್ತೇವೆ. ಅದು ಅಗತ್ಯವಿದೆ. ನಂತರ ಲಕ್ಷದಿಂದ ಮಿಲಿಯನ್, ಮತ್ತು ಮಿಲಿಯನ್ ನಿಂದ ಹತ್ತು ಮಿಲಿಯನ್. ಆದ್ದರಿಂದ ಆಚಾರ್ಯರ ಕೊರತೆ ಇರುವುದಿಲ್ಲ, ಮತ್ತು ಜನರು ಕೃಷ್ಣ ಪ್ರಜ್ಞೆಯನ್ನು ಬಹಳ ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಆದ್ದರಿಂದ ಆ ಸಂಘಟನೆಯನ್ನು ಮಾಡಿ. ತಪ್ಪಾಗಿ ಉಬ್ಬಿಕೊಳ್ಳಬೇಡಿ. ಆಚಾರ್ಯರ ಬೋಧನೆಯನ್ನು ಅನುಸರಿಸಿ ಪರಿಪೂರ್ಣ, ಪ್ರಬುದ್ಧರಾಗಲು ಪ್ರಯತ್ನಿಸಿ. ಆಗ ಮಾಯೆಯ ವಿರುದ್ಧ ಹೋರಾಡುವುದು ತುಂಬಾ ಸುಲಭ. ಹೌದು. ಆಚಾರ್ಯರು, ಅವರು ಮಾಯಾ ಚಟುವಟಿಕೆಗಳ ವಿರುದ್ಧ ಯುದ್ಧ ಘೋಷಿಸುತ್ತಾರೆ. – ಏಪ್ರಿಲ್ 6, 1975 ರಂದು ಶ್ರೀ ಚೈತನ್ಯ-ಚೆರಿತಾಮೃತ ಕುರಿತು ಶ್ರೀಲ ಪ್ರಭುಪಾದ ಉಪನ್ಯಾಸ

ಕಾಮೆಂಟ್

ಶ್ರೀಲಾ ಪ್ರಭುಪಾದರ ಈ ದೃಷ್ಟಿ ಹೇಳಿಕೆಯು ಸ್ವತಃ ಹೇಳುತ್ತದೆ - ಜನರು ಕೃಷ್ಣ ಪ್ರಜ್ಞೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಪರಿಪೂರ್ಣ ಯೋಜನೆ. ಶ್ರೀಲಾ ಪ್ರಭುಪಾದರ ಹತ್ತು ಮಿಲಿಯನ್ ಅಧಿಕಾರ ಹೊಂದಿರುವ ಸಿಕ್ಷಾ-ಶಿಷ್ಯರು ನಮ್ಮ ಸಂಸ್ಥಾಪಕ-ಅಕಾರ್ಯ ಅವರ ಬೋಧನೆಗಳನ್ನು ವಿನಮ್ರವಾಗಿ ಜೀವಿಸುತ್ತಿದ್ದಾರೆ, ಮತ್ತು ಪರಿಪೂರ್ಣತೆ ಹಾಗು ಪ್ರಬುದ್ಧತೆಗಾಗಿ ಯಾವಾಗಲೂ ಪ್ರಯತ್ನಿಸುತ್ತಾರೆ. ಶ್ರೀಲಾ ಪ್ರಭುಪಾದರು ಸ್ಪಷ್ಟವಾಗಿ ಹೇಳುವಂತೆ "ಆ ಸಂಘಟನೆಯನ್ನು ಮಾಡಿ." ಈ ಕನಸನ್ನು ನಿಜವಾಗಿಸಲು ವಾಣಿಪೀಡಿಯಾ ಉತ್ಸಾಹದಿಂದ ಸಹಾಯ ಮಾಡುತ್ತಿದೆ.

ಕೃಷ್ಣ ಪ್ರಜ್ಞೆಯ ವಿಜ್ಞಾನ

ಭಗವದ್ಗೀತೆಯ ಒಂಬತ್ತನೇ ಅಧ್ಯಾಯದಲ್ಲಿ ಕೃಷ್ಣ ಪ್ರಜ್ಞೆಯ ಈ ವಿಜ್ಞಾನವನ್ನು ಎಲ್ಲಾ ಜ್ಞಾನದ ರಾಜ, ಎಲ್ಲಾ ಗೌಪ್ಯ ವಸ್ತುಗಳ ರಾಜ ಮತ್ತು ಆಧ್ಯಾತ್ಮಿಕ ಸಾಕ್ಷಾತ್ಕಾರದ ಸರ್ವೋಚ್ಚ ವಿಜ್ಞಾನ ಎಂದು ಕರೆಯಲಾಗುತ್ತದೆ. ಕೃಷ್ಣ ಪ್ರಜ್ಞೆ ಒಂದು ದಿವ್ಯ ವಿಜ್ಞಾನವಾಗಿದ್ದು, ದೇವರಿಗೆ ಸೇವೆ ಸಲ್ಲಿಸಲು ಸಿದ್ಧವಾಗಿರುವ ಒಬ್ಬ ಪ್ರಾಮಾಣಿಕ ಭಕ್ತನಿಗೆ ಇದನ್ನು ಬಹಿರಂಗಪಡಿಸಬಹುದು. ಕೃಷ್ಣ ಪ್ರಜ್ಞೆಯನ್ನು ಶುಷ್ಕ ವಾದಗಳಿಂದ ಅಥವಾ ಶೈಕ್ಷಣಿಕ ಅರ್ಹತೆಗಳಿಂದ ಸಾಧಿಸಲಾಗುವುದಿಲ್ಲ. ಕೃಷ್ಣ ಪ್ರಜ್ಞೆ ಹಿಂದೂ, ಕ್ರಿಶ್ಚಿಯನ್, ಬೌದ್ಧ ಅಥವಾ ಇಸ್ಲಾಂ ಧರ್ಮದಂತಹ ನಂಬಿಕೆಯಲ್ಲ, ಆದರೆ ಅದು ವಿಜ್ಞಾನವಾಗಿದೆ. ಶ್ರೀಲಾ ಪ್ರಭುಪಾದರ ಪುಸ್ತಕಗಳನ್ನು ಯಾರಾದರೂ ಎಚ್ಚರಿಕೆಯಿಂದ ಓದಿದರೆ ಅವರು ಕೃಷ್ಣ ಪ್ರಜ್ಞೆಯ ಉನ್ನತ ವಿಜ್ಞಾನವನ್ನು ಅರಿತುಕೊಳ್ಳುತ್ತಾರೆ, ಮತ್ತು ಅವರ ನಿಜವಾದ ಕಲ್ಯಾಣ ಪ್ರಯೋಜನವಾಗಿ ಎಲ್ಲ ವ್ಯಕ್ತಿಗಳಿಗೂ ಅದೇ ರೀತಿ ಹರಡಲು ಹೆಚ್ಚು ಪ್ರೇರಿತರಾಗುತ್ತಾರೆ.

ಚೈತನ್ಯ ಮಹಾಪ್ರಭುಗಳ ಸಂಕೀರ್ತನ ಚಳವಳಿ

ಭಗವಾನ್ ಶ್ರೀ ಚೈತನ್ಯ ಮಹಾಪ್ರಭು ಸಂಕೀರ್ತನ ಚಳವಳಿಯ ತಂದೆ ಮತ್ತು ಉದ್ಘಾಟನಾಕಾರ. ಸಂಕೀರ್ತನ ಆಂದೋಲನಕ್ಕಾಗಿ ತನ್ನ ಜೀವನ, ಹಣ, ಬುದ್ಧಿವಂತಿಕೆ ಮತ್ತು ಪದಗಳನ್ನು ತ್ಯಾಗ ಮಾಡುವ ಮೂಲಕ ಆತನನ್ನು ಆರಾಧಿಸುವವನು ಭಗವಂತನಿಂದ ಗುರುತಿಸಲ್ಪಟ್ಟಿದ್ದಾನೆ, ಮತ್ತು ಅವನ ಆಶೀರ್ವಾದವನ್ನು ಪಡೆಯುತ್ತಾನೆ. ಉಳಿದವರೆಲ್ಲರೂ ಮೂರ್ಖರು ಎಂದು ಹೇಳಬಹುದು, ಏಕೆಂದರೆ ಮನುಷ್ಯನು ತನ್ನ ಶಕ್ತಿಯನ್ನು ಅನ್ವಯಿಸಬಹುದಾದ ಎಲ್ಲಾ ತ್ಯಾಗಗಳಲ್ಲಿ, ಸಂಕೀರ್ತನ ಆಂದೋಲನಕ್ಕಾಗಿ ಮಾಡಿದ ತ್ಯಾಗವು ಅತ್ಯಂತ ಅದ್ಭುತವಾಗಿದೆ. ಇಡೀ ಕೃಷ್ಣ ಪ್ರಜ್ಞೆ ಆಂದೋಲನವು ಶ್ರೀ ಚೈತನ್ಯ ಮಹಾಪ್ರಭು ಉದ್ಘಾಟಿಸಿದ ಸಂಕೀರ್ತನ ಚಳವಳಿಯ ತತ್ವಗಳನ್ನು ಆಧರಿಸಿದೆ. ಆದ್ದರಿಂದ ಸಂಕೀರ್ತನ ಚಳವಳಿಯ ಮಾಧ್ಯಮದ ಮೂಲಕ ದೇವೋತ್ತಮ ಪರಮ ಪರುಷನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವವನು ಎಲ್ಲವನ್ನೂ ಪರಿಪೂರ್ಣವಾಗಿ ತಿಳಿದಿದ್ದಾನೆ. ಅವನು ಸುಮೇಧಸ್, ಅಪಾರ ಬುದ್ಧಿವಂತಿಕೆ ಹೊಂದಿರುವ ವ್ಯಕ್ತಿ.

ಮಾನವ ಸಮಾಜವನ್ನು ಮರು ಆಧ್ಯಾತ್ಮಿಕಗೊಳಿಸುವುದು

ಮಾನವ ಸಮಾಜ, ಪ್ರಸ್ತುತ ಕ್ಷಣದಲ್ಲಿ, ವಿಸ್ಮರಣೆಯ ಕತ್ತಲೆಯಲ್ಲಿಲ್ಲ. ಇದು ಇಡೀ ವಿಶ್ವದಾದ್ಯಂತ ವಸ್ತು ಸೌಕರ್ಯಗಳು, ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಶೀಘ್ರ ಪ್ರಗತಿಯನ್ನು ಸಾಧಿಸಿದೆ. ಆದರೆ ಸಾಮಾಜಿಕ ದೇಹದಲ್ಲಿ ಎಲ್ಲೋ ಒಂದು ಬಾಧೆ ಇದೆ, ಮತ್ತು ಆದ್ದರಿಂದ ಕಡಿಮೆ-ಮಹತ್ವದ ವಿಷಯಗಳಿಗೂ ದೊಡ್ಡ ಪ್ರಮಾಣದ ಜಗಳಗಳಿವೆ. ಒಂದು ಸಾಮುದಾಯಿಕ ಗುರಿಗಾಗಿ ಶಾಂತಿ, ಸ್ನೇಹ ಮತ್ತು ಸಮೃದ್ಧಿಯಲ್ಲಿ ಮಾನವೀಯತೆಯು ಹೇಗೆ ಒಂದಾಗಬಹುದು ಎಂಬುದರ ಬಗ್ಗೆ ಸುಳಿವು ನೀಡುವ ಅವಶ್ಯಕತೆಯಿದೆ. ಶ್ರೀಮದ್-ಭಾಗವತಂ ಈ ಅಗತ್ಯವನ್ನು ತುಂಬುತ್ತದೆ, ಏಕೆಂದರೆ ಇದು ಇಡೀ ಮಾನವ ಸಮಾಜದ ಮರು ಆಧ್ಯಾತ್ಮಿಕೀಕರಣಕ್ಕಾಗಿ ಒಂದು ಸಾಂಸ್ಕೃತಿಕ ಪ್ರಸ್ತುತಿಯಾಗಿದೆ. ಜನಸಾಮಾನ್ಯರು, ಸಾಮಾನ್ಯವಾಗಿ, ಆಧುನಿಕ ರಾಜಕಾರಣಿಗಳು ಮತ್ತು ಜನರ ನಾಯಕರ ಕೈಯಲ್ಲಿರುವ ಸಾಧನಗಳಾಗಿವೆ. ನಾಯಕರ ಹೃದಯದ ಬದಲಾವಣೆ ಮಾತ್ರ ಇದ್ದರೆ, ಖಂಡಿತವಾಗಿಯೂ ವಿಶ್ವದ ವಾತಾವರಣದಲ್ಲಿ ಆಮೂಲಾಗ್ರ ಬದಲಾವಣೆ ಕಂಡುಬರುತ್ತದೆ.

ನಿಜವಾದ ಶಿಕ್ಷಣದ ಗುರಿ ಆತ್ಮ ಸಾಕ್ಷಾತ್ಕಾರ, ಆತ್ಮದ ಆಧ್ಯಾತ್ಮಿಕ ಮೌಲ್ಯಗಳ ಸಾಕ್ಷಾತ್ಕಾರವಾಗಿರಬೇಕು. ಪ್ರಪಂಚದ ಎಲ್ಲಾ ಚಟುವಟಿಕೆಗಳನ್ನು ಆಧ್ಯಾತ್ಮಿಕಗೊಳಿಸಲು ಪ್ರತಿಯೊಬ್ಬರೂ ಸಹಾಯ ಮಾಡಬೇಕು. ಅಂತಹ ಚಟುವಟಿಕೆಗಳಿಂದ, ನಿರ್ವಾಹಕ, ಮತ್ತು ನಿರ್ವಹಿಸಿದ ಕೆಲಸ, ಎರಡೂ ಆಧ್ಯಾತ್ಮಿಕತೆಯಿಂದ ಉತ್ತೇಜಿತವಾಗಿ ಭೌತಿಕ ಪ್ರಕೃತಿಯ ತ್ರಿಗುಣಗಳನ್ನು ಮೀರಿಸುತ್ತದೆ.

ವಾಣಿಪೀಡಿಯದ ಯೋಜನಾ ಹೇಳಿಕೆ

  • ಶ್ರೀಲ ಪ್ರಭುಪಾದರಿಗೆ ಪ್ರಪಂಚದ ಎಲ್ಲಾ ಭಾಷೆಗಳಲ್ಲಿ ಕೃಷ್ಣ ಪ್ರಜ್ಞೆಯ ವಿಜ್ಞಾನವನ್ನು ಬೋಧಿಸಲು, ಶಿಕ್ಷಣ ನೀಡಲು, ಮತ್ತು ತರಬೇತಿ ನೀಡಲು ನಿರಂತರ, ವಿಶ್ವಾದ್ಯಂತ ವೇದಿಕೆಯನ್ನು ನೀಡುವುದು.
  • ಶ್ರೀಲ ಪ್ರಭುಪಾದರ ಬೋಧನೆಗಳನ್ನು ಬಹು ದೃಷ್ಟಿ ಕೋನಗಳಿಂದ ಪರಿಶೋಧಿಸಲು, ಅನ್ವೇಷಿಸಲು, ಮತ್ತು ಸಮಗ್ರವಾಗಿ ಸಂಕಲಿಸಲು.
  • ಶ್ರೀಲ ಪ್ರಭುಪಾದರ ವಾಣಿಯನ್ನು ಸುಲಭವಾಗಿ ಪಡೆಯುವ ಮತ್ತು ಅರ್ಥವಾಗುವ ರೀತಿಯಲ್ಲಿ ಪ್ರಸ್ತುತಪಡಿಸುವುದು.
  • ಶ್ರೀಲ ಪ್ರಭುಪಾದರ ವಾಣಿಯನ್ನು ಆಧರಿಸಿ ಅನೇಕ ಸಾಮಯಿಕ ಪುಸ್ತಕಗಳನ್ನು ಬರೆಯಲು ಅನುಕೂಲವಾಗುವಂತೆ ಸಮಗ್ರ ವಿಷಯಾಧಾರಿತ ಸಂಶೋಧನೆಯ ಭಂಡಾರವನ್ನು ನೀಡಲು.
  • ಶ್ರೀಲಾ ಪ್ರಭುಪಾದರ ವಾಣಿಗೆ ಸಂಭಂದಿತ ವಿವಿಧ ಶೈಕ್ಷಣಿಕ ಉಪಕ್ರಮಗಳಿಗೆ ಪಠ್ಯಕ್ರಮದ ಸಂಪನ್ಮೂಲಗಳನ್ನು ನೀಡುವುದು.
  • ಶ್ರೀಲಾ ಪ್ರಭುಪಾದರ ಪ್ರಾಮಾಣಿಕ ಅನುಯಾಯಿಗಳಲ್ಲಿ ವೈಯಕ್ತಿಕ ಮಾರ್ಗದರ್ಶನಕ್ಕಾಗಿ, ಮತ್ತು ಎಲ್ಲಾ ಹಂತಗಳಲ್ಲಿ ಅವರನ್ನು ಪ್ರತಿನಿಧಿಸಲು ಸಾಕಷ್ಟು ಕಲಿತವರಾಗಲು, ಶ್ರೀಲ ಪ್ರಭುಪಾದರ ವಾಣಿಯನ್ನು ಸಂಪರ್ಕಿಸುವ ಅವಶ್ಯಕತೆಯ ಬಗ್ಗೆ ನಿಸ್ಸಂದಿಗ್ಧವಾದ ತಿಳುವಳಿಕೆಯನ್ನು ಮೂಡಿಸುವುದು.
  • ಮೇಲಿನ ಎಲ್ಲವನ್ನು ಸಾಧಿಸುವ ದೃಷ್ಟಿಯಿಂದ ಜಾಗತಿಕವಾಗಿ ಸಹಕರಿಸಲು ಎಲ್ಲಾ ರಾಷ್ಟ್ರಗಳಿಂದ ಶ್ರೀಲ ಪ್ರಭುಪಾದರ ಅನುಯಾಯಿಗಳನ್ನು ಆಕರ್ಷಿಸುವುದು.

ವ್ಯಾಣಿಪೀಡಿಯಾವನ್ನು ನಿರ್ಮಿಸಲು ನಮ್ಮನ್ನು ಪ್ರೇರೇಪಿಸುವುದು ಏನು?

  • ನಾವು ಇದನ್ನು ಸ್ವೀಕರಿಸುತ್ತೇವೆ:
  • ಶ್ರೀಲ ಪ್ರಭುಪಾದರು ಪರಿಶುದ್ಧ ಭಕ್ತರಾಗಿದ್ದು, ಭಗವಂತನ ಪ್ರೀತಿಯ ಭಕ್ತಿಸೇವೆಯಲ್ಲಿ ಜೀವಾತ್ಮಗಳನ್ನು ತೊಡಗಿಸಲು ಭಗವಾನ್ ಶ್ರೀ ಕೃಷ್ಣನಿಂದ ನೇರವಾಗಿ ಅಧಿಕಾರ ಪಡೆದವರು. ಈ ಸಬಲೀಕರಣವು ಅವರ ಬೋಧನೆಗಳಲ್ಲಿ ಕಂಡುಬರುವ ಪರಮ ಸತ್ಯದ ಸಾಟಿಯಿಲ್ಲದ ಪ್ರಕಟಣೆಯಿಂದ ಸಾಬೀತಾಗಿದೆ.
  • ಶ್ರೀಲ ಪ್ರಭುಪಾದರಿಗಿಂತ ಈ ಆಧುನಿಕ ಕಾಲದಲ್ಲಿ ವೈಷ್ಣವ ತತ್ತ್ವಶಾಸ್ತ್ರದ ಮಹಾನ್ ಪ್ರತಿಪಾದಕರು, ಮತ್ತು ಸಮಕಾಲೀನ ಜಗತ್ತನ್ನು ಯಥಾರ್ಥವಾಗಿ ವಿವರಿಸುವ ಶ್ರೇಷ್ಠ ಸಾಮಾಜಿಕ ವಿಮರ್ಶಕರು ಇನ್ನೊಬ್ಬರಿಲ್ಲ.
  • ಶ್ರೀಲ ಪ್ರಭುಪಾದರ ಬೋಧನೆಗಳು ಅವರ ಲಕ್ಷಾಂತರ ಅನುಯಾಯಿಗಳಿಗೆ, ಮತ್ತು ಭವಿಷ್ಯದ ಪೀಳಿಗೆಗೆ, ಪ್ರಧಾನ ಆಶ್ರಯವಾಗಲಿದೆ.
  • ಶ್ರೀಲ ಪ್ರಭುಪಾದರು ತಮ್ಮ ಬೋಧನೆಗಳನ್ನು ಸಮೃದ್ಧವಾಗಿ ವಿತರಿಸಬೇಕು, ಮತ್ತು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಬಯಸಿದ್ದರು.
  • ಶ್ರೀಲ ಪ್ರಭುಪಾದರ ಬೋಧನೆಗಳಿಗೆ ವಿಷಯಾಧಾರಿತ ವಿಧಾನವು ಅದರೊಳಗಿನ ಸತ್ಯಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯನ್ನು ಬಹಳವಾಗಿ ಹೆಚ್ಚಿಸುತ್ತದೆ, ಮತ್ತು ಪ್ರತಿಯೊಂದು ದೃಷ್ಟಿಕೋನದಿಂದಲೂ ಅವರ ಬೋಧನೆಗಳನ್ನು ಪರಿಶೋಧಿಸಲು, ಅನ್ವೇಷಿಸಲು, ಮತ್ತು ಸಂಪೂರ್ಣವಾಗಿ ಸಂಕಲಿಸುವಲ್ಲಿ ಅಪಾರ ಮೌಲ್ಯವಿದೆ.
  • ಶ್ರೀಲ ಪ್ರಭುಪಾದರ ಎಲ್ಲಾ ಬೋಧನೆಗಳನ್ನು ನಿರ್ದಿಷ್ಟ ಭಾಷೆಗೆ ಭಾಷಾಂತರಿಸುವುದು, ಶ್ರೀಲ ಪ್ರಭುಪಾದರನ್ನು ಆ ಭಾಷೆಗಳು ಮಾತನಾಡುವ ಸ್ಥಳಗಳಲ್ಲಿ ಶಾಶ್ವತವಾಗಿ ವಾಸಿಸಲು ಆಹ್ವಾನಿಸಿದಂತೆಯೇ.
  • ಅವರ ದೈಹಿಕ ಅನುಪಸ್ಥಿತಿಯಲ್ಲಿ, ಶ್ರೀಲ ಪ್ರಭುಪಾದರಿಗೆ ಈ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಅನೇಕ ವಾಣಿ-ಸೇವಕರು ಬೇಕಾಗುತ್ತಾರೆ.

ಹೀಗಾಗಿ, ಶ್ರೀಲ ಪ್ರಭುಪಾದರ ಬೋಧನೆಗಳಲ್ಲಿ ಕಂಡುಬರುವ ಪರಿಪೂರ್ಣ ಜ್ಞಾನ ಮತ್ತು ಸಾಕ್ಷಾತ್ಕಾರಗಳ ಸಮೃದ್ಧ ವಿತರಣೆ ಮತ್ತು ಸರಿಯಾದ ತಿಳುವಳಿಕೆಯನ್ನು ಸುಗಮಗೊಳಿಸಲು ನಿಜವಾದ ಕ್ರಿಯಾತ್ಮಕ ವೇದಿಕೆಯನ್ನು ರಚಿಸಲು ನಾವು ಬದ್ಧರಾಗಿದ್ದೇವೆ, ಆದ್ದರಿಂದ ಅವರು ಸಂತೋಷದಿಂದ ಕಾರ್ಯನಿರ್ವಹಿಸಬಹುದು. ಅದು ತುಂಬಾ ಸರಳವಾಗಿದೆ. ವಾಣಿಪೀಡಿಯಾದ ಪೂರ್ಣಗೊಳಿಸುವಿಕೆಯಿಂದ ನಮ್ಮನ್ನು ಬೇರ್ಪಡಿಸುವ ಏಕೈಕ ವಿಷಯವೆಂದರೆ ಸಮಯ, ಮತ್ತು ಈ ದೃಷ್ಟಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಭಕ್ತರು ಇನ್ನೂ ನೀಡಬೇಕಾಗಿರುವ ವಾಣಿಸೇವೆಯ ಅನೇಕ ಪವಿತ್ರ ಗಂಟೆಗಳ ಸಮಯ.

ನನ್ನ ಗುರು ಮಹಾರಾಜರು ಆದೇಶಿಸಿದ ಕರ್ತವ್ಯದ ವಿಷಯವಾಗಿ ನಾನು ಸಲ್ಲಿಸಲು ಪ್ರಯತ್ನಿಸುತ್ತಿರುವ ನನ್ನ ವಿನಮ್ರ ಸೇವೆಯನ್ನು ಶ್ಲಾಘಿಸಿದ್ದಕ್ಕಾಗಿ, ನಿಮಗೆ ತುಂಬಾ ಧನ್ಯವಾದಗಳು. ನನ್ನ ಎಲ್ಲಾ ಶಿಷ್ಯರು ಸಹಕಾರದಿಂದ ಕೆಲಸ ಮಾಡುವಂತೆ ನಾನು ವಿನಂತಿಸುತ್ತೇನೆ, ಮತ್ತು ನಮ್ಮ ಯೋಜನೆ ನಿಸ್ಸಂದೇಹವಾಗಿ ಮುಂದುವರಿಯುತ್ತದೆ ಎಂದು ನನಗೆ ಖಾತ್ರಿಯಿದೆ. – ತಮಲಾ ಕೃಷ್ಣ ದಾಸ್ (ಜಿಬಿಸಿ) ಗೆ ಶ್ರೀಲ ಪ್ರಭುಪಾದರ ಪತ್ರ - 14 ಆಗಸ್ಟ್, 1971

ಶ್ರೀಲ ಪ್ರಭುಪಾದರ ಮೂರು ಸಹಜ ಸ್ಥಾನಗಳು

ಶ್ರೀಲ ಪ್ರಭುಪಾದರ ಬೋಧನೆಗಳ ಪಾದಾರವಿಂದಗಳಲ್ಲಿ ಆಶ್ರಯ ಪಡೆಯುವ ಸಂಸ್ಕೃತಿಯನ್ನು ಅರಿತುಕೊಳ್ಳಲು, ಶ್ರೀಲ ಪ್ರಭುಪಾದರ ಈ ಮೂರು ಸ್ಥಾನಗಳು ಅವರ ಎಲ್ಲಾ ಅನುಯಾಯಿಗಳ ಹೃದಯದಲ್ಲಿ ಜಾಗೃತಗೊಂಡಾಗ ಮಾತ್ರ ಸಾಧ್ಯವಾಗುತ್ತದೆ.

ಶ್ರೀಲ ಪ್ರಭುಪಾದರು ನಮ್ಮ ಸರ್ವೋಚ್ಚ ಶಿಕ್ಷಾ-ಗುರು

  • ಶ್ರೀಲ ಪ್ರಭುಪಾದರ ಅನುಯಾಯಿಗಳೆಲ್ಲರೂ ಅವರ ಬೋಧನೆಗಳಲ್ಲಿ ಅವರ ಉಪಸ್ಥಿತಿ ಮತ್ತು ಆಶ್ರಯವನ್ನು ಅನುಭವಿಸಬಹುದು ಎಂದು ನಾವು ಒಪ್ಪಿಕೊಳ್ಳುತ್ತೇವೆ - ಪ್ರತ್ಯೇಕವಾಗಿ ಮತ್ತು ಪರಸ್ಪರ ಚರ್ಚಿಸುವಾಗ.
  • ನಮ್ಮ ಮಾರ್ಗದರ್ಶಕ-ಆತ್ಮಸಾಕ್ಷಿಯಂತೆ ಶ್ರೀಲ ಪ್ರಭುಪಾದರೊಂದಿಗೆ ನಾವು ಬದುಕಲು ಕಲಿಯುವುದರ ಮೂಲಕ ನಮ್ಮನ್ನು ನಾವೇ ಶುದ್ಧೀಕರಿಸುತ್ತೇವೆ, ಮತ್ತು ಅವರೊಂದಿಗೆ ದೃಡವಾದ ಸಂಬಂಧವನ್ನು ಸ್ಥಾಪಿಸುತ್ತೇವೆ.
  • ಶ್ರೀಲ ಪ್ರಭುಪಾದರಿಂದ ಅಗಲಿಕೆಯ ಭಾವನೆ ಹೊಂದಿರುವ ಭಕ್ತರನ್ನು, ಅವರ ವಾಣಿಯಲ್ಲಿ ಅವರ ಉಪಸ್ಥಿತಿಯನ್ನು ಮತ್ತು ಸಾಂತ್ವನವನ್ನು ಪಡೆಯಲು ಸಮಯ ತೆಗೆದುಕೊಳ್ಳಿ ಎಂದು ನಾವು ಪ್ರೋತ್ಸಾಹಿಸುತ್ತೇವೆ.
  • ಶ್ರೀಲ ಪ್ರಭುಪಾದರ ಸಹಾನುಭೂತಿಯನ್ನು ಅವರ ಎಲ್ಲಾ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತೇವೆ, ಅವರ ಪರಂಪರೆಯಲ್ಲಿ ದೀಕ್ಷೆ ತೆಗೆದುಕೊಳ್ಳುವವರು, ಮತ್ತು ಅವರನ್ನು ವಿವಿಧ ಸಾಮರ್ಥ್ಯಗಳಲ್ಲಿ ಅನುಸರಿಸುವವರು ಸೇರಿದಂತೆ.
  • ಶ್ರೀಲ ಪ್ರಭುಪಾದರು ನಮ್ಮ ಸರ್ವೋಚ್ಚ ಶಿಕ್ಷಾ-ಗುರುಗಳು ಎಂಬ ಸತ್ಯದ ಬಗ್ಗೆ, ಮತ್ತು ಅವರೊಂದಿಗೆ ನಮ್ಮ ಪ್ರತ್ಯೇಕ ಶಿಕ್ಷಾ ಸಂಬಂಧವನ್ನು ನಾವು ಭಕ್ತರಿಗೆ ತಿಳಿಸುತ್ತೇವೆ.
  • ಶ್ರೀಲ ಪ್ರಭುಪಾದರ ಪರಂಪರೆಯನ್ನು ಸತತ ತಲೆಮಾರುಗಳಾದ್ಯಂತ ಎತ್ತಿಹಿಡಿಯಲು ನಾವು ಶಿಕ್ಷಾ-ಸಶಕ್ತ ಶಿಷ್ಯರ ಅನುಕ್ರಮವನ್ನು ಸ್ಥಾಪಿಸುತ್ತೇವೆ.

ಶ್ರೀಲ ಪ್ರಭುಪಾದರು ಇಸ್ಕಾನಿನ ಸ್ಥಾಪನಾಚಾರ್ಯ

  • ಇಸ್ಕಾನ್ ಸದಸ್ಯರನ್ನು ಶ್ರೀಲ ಪ್ರಭುಪಾದರ ಸಂಪರ್ಕದಲಿರುಸುವ, ಮತ್ತು ನಿಷ್ಠಾವಂತರಾಗಿರಿಸುವ ಪ್ರಧಾನ ಪ್ರೇರಕ ಶಕ್ತಿ ಅವರ ವಾಣಿ ಎಂದು ನಾವು ಪ್ರಚಾರ ಮಾಡುತ್ತೇವೆ, ಮತ್ತು ಅದ್ದರಿಂದ, ಈಗ ಮತ್ತು ಭವಿಷ್ಯದಲ್ಲಿ, ಅವರ ಆಂದೋಲನವನ್ನು ಅವರು ಬಯಸಿದ ಎಲ್ಲವನ್ನೂ ಮಾಡಲು ಪ್ರೇರಣೆ, ಉತ್ಸಾಹ ಮತ್ತು ದೃಡ ನಿಶ್ಚಯವನ್ನು ಪಡೆಯುತ್ತೇವೆ.
  • ಶ್ರೀಲ ಪ್ರಭುಪಾದರ ಬೋಧನೆಗಳು ಮತ್ತು ಅವರ ಉಪದೇಶ ತಂತ್ರಗಳ ಮೇಲೆ ಕೇಂದ್ರೀಕರಿಸಿರುವ ವೈಷ್ಣವ-ಬ್ರಾಹ್ಮಣ ಮಾನದಂಡಗಳ ಸುಸ್ಥಿರ ಅಭಿವೃದ್ಧಿಯನ್ನು ನಾವು ಪ್ರೋತ್ಸಾಹಿಸುತ್ತೇವೆ – "ವಾಣಿ-ಸಂಸ್ಕೃತಿ."
  • ಇಸ್ಕಾನ್ನ ಸ್ಥಾಪನಾಚಾರ್ಯರಾಗಿ ಶ್ರೀಲ ಪ್ರಭುಪಾದರ ಸ್ಥಾನ, ಮತ್ತು ಅವರಿಗೆ ಮತ್ತು ಅವರ ಆಂದೋಲನಕ್ಕೆ ನಮ್ಮ ಸೇವೆಯ ಸತ್ಯದ ಬಗ್ಗೆ ನಾವು ಭಕ್ತರಿಗೆ ಶಿಕ್ಷಣ ನೀಡುತ್ತೇವೆ.

ಶ್ರೀಲ ಪ್ರಭುಪಾದರು ಜಗದ್ಗುರುವು

  • ಶ್ರೀಲ ಪ್ರಭುಪಾದರ ಬೋಧನೆಗಳ ಸಮಕಾಲೀನ ಪ್ರಸ್ತುತತೆಯನ್ನು ಪ್ರತಿ ದೇಶದ ಎಲ್ಲ ವಲಯಗಳಲ್ಲಿ ಸ್ಥಾಪಿಸುವ ಮುಖಾಂತರ ಅವರು ಜಗದ್ಗುರು ಎಂಬುವ ಆಧ್ಯಾತ್ಮಿಕ ನಿಲುವಿನ ಪ್ರಾಮುಖ್ಯತೆಯ ಜಾಗತಿಕ ಅರಿವನ್ನು ನಾವು ಹೆಚ್ಚಿಸುತ್ತೇವೆ.
  • ಶ್ರೀಲ ಪ್ರಭುಪಾದರ ಬೋಧನೆಗಳಿಗೆ ಮೆಚ್ಚುಗೆ ಮತ್ತು ಗೌರವದ ಸಂಸ್ಕೃತಿಯನ್ನು ನಾವು ಪ್ರೇರೇಪಿಸುತ್ತೇವೆ, ಇದರ ಪರಿಣಾಮವಾಗಿ ವಿಶ್ವ ಜನಸಂಖ್ಯೆಯಿಂದ ಕೃಷ್ಣ ಪ್ರಜ್ಞೆಯ ಅಭ್ಯಾಸಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇವೆ.
  • ಶ್ರೀಲ ಪ್ರಭುಪಾದರು ಇಡೀ ಜಗತ್ತು ವಾಸಿಸುವಂತಹ ಮನೆಯನ್ನು ನಿರ್ಮಿಸಿದ್ದಾರೆ, ಮತ್ತು ಈ ಮನೆಯನ್ನು ರಕ್ಷಿಸಲು ತಮ್ಮ ವಾಣಿಯನ್ನು ಏಕಕಾಲದಲ್ಲಿ ಅಡಿಪಾಯ ಮತ್ತು ಛಾವಣಿಯಾಗಿ – ಆಧಾರ, ಆಶ್ರಯ – ವಾಗಿ ಸ್ಥಾಪಿಸಿದ್ದಾರೆ, ಎಂಬ ಪ್ರಮೇಯವನ್ನು ನಾವು ಅರಿತುಕೊಂಡಿದ್ದೇವೆ.

ಶ್ರೀಲ ಪ್ರಭುಪಾದರ ಸಹಜ ಸ್ಥಾನವನ್ನು ಸ್ಥಾಪಿಸಲು ಪ್ರಮುಖವಾದದ್ದು

  • ನಮ್ಮ ಇಸ್ಕಾನ್ ಸಮಾಜಕ್ಕೆ ಶ್ರೀಲ ಪ್ರಭುಪಾದರ ಅನುಯಾಯಿಗಳೊಂದಿಗೆ ಮತ್ತು ಅವರ ಚಳವಳಿಯೊಳಗೆ, ಅವರ ಸ್ವಾಭಾವಿಕ ಸ್ಥಾನವನ್ನು ಸುಗಮಗೊಳಿಸಲು ಮತ್ತು ಬೆಳೆಸಲು ಶೈಕ್ಷಣಿಕ ಉಪಕ್ರಮಗಳು, ರಾಜಕೀಯ ನಿರ್ದೇಶನಗಳು ಮತ್ತು ಸಾಮಾಜಿಕ ಸಂಸ್ಕೃತಿಯ ಅಗತ್ಯವಿದೆ. ಅದು ಸ್ವಯಂಚಾಲಿತವಾಗಿ ಅಥವಾ ಆಶಾದಾಯಕ ಚಿಂತನೆಯಿಂದ ಆಗುವುದಿಲ್ಲ. ಅವರ ಶುದ್ಧ ಹೃದಯದ ಭಕ್ತರು ನೀಡುವ ಬುದ್ಧಿವಂತ, ಸಂಘಟಿತ ಮತ್ತು ಸಹಯೋಗದ ಪ್ರಯತ್ನಗಳಿಂದ ಮಾತ್ರ ಅದನ್ನು ಸಾಧಿಸಬಹುದು.
  • ಶ್ರೀಲ ಪ್ರಭುಪಾದರ ಚಳವಳಿಯೊಳಗಿನ ಸಹಜ ಸ್ಥಾನವನ್ನು ಮರೆಮಾಚುವ ಐದು ಪ್ರಮುಖ ಅಡೆತಡೆಗಳು:
  • 1. ಶ್ರೀಲ ಪ್ರಭುಪಾದರ ಬೋಧನೆಗಳ ಬಗ್ಗೆ ಅಜ್ಞಾನ – ಅವರು ಸೂಚನೆಗಳನ್ನು ನೀಡಿದ್ದಾರೆ ಆದರೆ ಅವು ಅಸ್ತಿತ್ವದಲ್ಲಿವೆ ಎಂದು ನಮಗೆ ತಿಳಿದಿಲ್ಲ.
  • 2. ಶ್ರೀಲ ಪ್ರಭುಪಾದರ ಬೋಧನೆಗಳ ಬಗ್ಗೆ ಅಸಡ್ಡೆ – ಸೂಚನೆಗಳು ಅಸ್ತಿತ್ವದಲ್ಲಿವೆ ಎಂದು ನಮಗೆ ತಿಳಿದಿದೆ ಆದರೆ ನಮಗೆ ಅವುಗಳ ಬಗ್ಗೆ ಕಾಳಜಿಯಿಲ್ಲ. ನಾವು ಅವುಗಳನ್ನು ನಿರ್ಲಕ್ಷಿಸುತ್ತೇವೆ.
  • 3. ಶ್ರೀಲ ಪ್ರಭುಪಾದರ ಬೋಧನೆಗಳ ಬಗ್ಗೆ ಅಪಗ್ರಹಿಕೆ – ನಾವು ಅವುಗಳನ್ನು ಪ್ರಾಮಾಣಿಕವಾಗಿ ಅನ್ವಯಿಸುತ್ತೇವೆ ಆದರೆ ನಮ್ಮ ಅತಿಯಾದ ಆತ್ಮವಿಶ್ವಾಸ, ಅಥವಾ ಪ್ರಬುದ್ಧತೆಯ ಕೊರತೆಯಿಂದಾಗಿ, ಅವು ತಪ್ಪಾಗಿ ಅನ್ವಯಿಸಲ್ಪಡುತ್ತವೆ.
  • 4. ಶ್ರೀಲ ಪ್ರಭುಪಾದರ ಬೋಧನೆಗಳ ಬಗ್ಗೆ ನಂಬಿಕೆಯ ಕೊರತೆ – ನಮ್ಮ ಹೃದಯಾಳದಲ್ಲಿ ಸಂಪೂರ್ಣವಾಗಿ ಮನವರಿಕೆಯಾಗಿಲ್ಲ, ಮತ್ತು ಅವುಗಳನ್ನು ಅವಾಸ್ತವಿಕ, "ಆಧುನಿಕ ಜಗತ್ತಿಗೆ" ವಾಸ್ತವಿಕ ಅಥವಾ ಪ್ರಾಯೋಗಿಕವಲ್ಲ ಎಂದು ಭಾವಿಸುತ್ತೇವೆ.
  • 5. ಶ್ರೀಲ ಪ್ರಭುಪಾದರ ಬೋಧನೆಗಳೊಂದಿಗೆ ಸ್ಪರ್ಧೆ – ಪೂರ್ಣ ದೃಡನಿಶ್ಚಯ ಮತ್ತು ಉತ್ಸಾಹದಿಂದ ನಾವು ಶ್ರೀಲ ಪ್ರಭುಪಾದರು ಸೂಚಿಸಿದ್ದಕ್ಕಿಂತ ಸಂಪೂರ್ಣವಾಗಿ ವಿಭಿನ್ನ ದಿಕ್ಕಿನಲ್ಲಿ ಹೋಗುತ್ತೇವೆ, ಮತ್ತು ಹಾಗೆ ಮಾಡುವಾಗ ನಮ್ಮೊಂದಿಗೆ ಹೋಗಲು ಇತರರ ಮೇಲೆ ಪ್ರಭಾವ ಬೀರುತ್ತೇವೆ.

ಕಾಮೆಂಟ್

ಶ್ರೀಲ ಪ್ರಭುಪಾದರ ಬೋಧನೆಗಳ ಜೊತೆ ನಮ್ಮ ಸಂಬಂಧವನ್ನು ಪೋಷಿಸುವ, ಮತ್ತು ನಮ್ಮ ಜ್ಞಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸಮಗ್ರ, ರಚನಾತ್ಮಕ ಶೈಕ್ಷಣಿಕ ಮತ್ತು ತರಬೇತಿ ಕಾರ್ಯಕ್ರಮಗಳ ಪರಿಚಯದೊಂದಿಗೆ ಈ ಅಡೆತಡೆಗಳನ್ನು ಸುಲಭವಾಗಿ ನಿವಾರಿಸಬಹುದು ಎಂದು ನಾವು ನಂಬುತ್ತೇವೆ. ಶ್ರೀಲ ಪ್ರಭುಪಾದರ ವಾಣಿಯಲ್ಲಿ ಆಳವಾಗಿ ಬೇರೂರಿರುವ ಸಂಸ್ಕೃತಿಯನ್ನು ಸೃಷ್ಟಿಸುವ ಗಂಭೀರ ನಾಯಕತ್ವದ ಬದ್ಧತೆಯಿಂದ ಉತ್ತೇಜನವಾದರೆ ಮಾತ್ರ ಇದು ಯಶಸ್ವಿಯಾಗುತ್ತದೆ. ಶ್ರೀಲ ಪ್ರಭುಪಾದರ ಸಹಜ ಸ್ಥಾನವು ಎಲ್ಲಾ ತಲೆಮಾರಿನ ಭಕ್ತರಿಗೆ ತಂತಾನೆ ಸ್ಪಷ್ಟವಾಗುತ್ತದೆ, ಮತ್ತು ಹಾಗೆಯೇ ಉಳಿಯುತ್ತದೆ.

ಭಕ್ತರು ಅವರ ಕೈಕಾಲುಗಳು, ಇಸ್ಕಾನ್ ಅವರ ದೇಹ, ಮತ್ತು ಅವರ ವಾಣಿ ಅವರ ಆತ್ಮ

  • ನೀವೆಲ್ಲರೂ ನನ್ನ ದೇಹದ ಅಂಗಗಳು. ನೀವು ಸಹಕರಿಸದಿದ್ದರೆ, ನನ್ನ ಜೀವನವು ನಿಷ್ಪ್ರಯೋಜಕವಾಗಿರುತ್ತದೆ. ಇಂದ್ರಿಯಗಳು ಮತ್ತು ಪ್ರಾಣವು ಪರಸ್ಪರ ಸಂಬಂಧ ಹೊಂದಿವೆ. ಪ್ರಾಣವಿಲ್ಲದೆ ಇಂದ್ರಿಯಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ, ಮತ್ತು ಇಂದ್ರಿಯಳಿಲ್ಲದೆ ಪ್ರಾಣವು ನಿಷ್ಕ್ರಿಯವಾಗಿರುತ್ತದೆ. – ಬಹ್ಮಾನಂದ ದಾಸ (ಟಿಪಿ) ರವರಿಗೆ ಶ್ರೀಲ ಪ್ರಭುಪಾದರ ಪತ್ರ, 17 ಜುಲೈ 1968





  • ನಾವು ಏನು ಮಾಡುತ್ತಿದ್ದರೂ, ಅದು ಶ್ರೀಕೃಷ್ಣನಿಂದ ಪ್ರಾರಂಭವಾಗಿ ನಮ್ಮವರೆಗು ಪರಂಪರಾ ವ್ಯವಸ್ಥೆಯಲ್ಲಿ ಬಂದಿದೆ ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಬೇಕು. ಆದ್ದರಿಂದ, ನಮ್ಮ ಪ್ರೀತಿಯ ಮನೋಭಾವವು ದೈಹಿಕ ಪ್ರಾತಿನಿಧ್ಯಕ್ಕಿಂತ ಸಂದೇಶದ ಮೇಲೆ ಹೆಚ್ಚು ಇರಬೇಕು. ನಾವು ಸಂದೇಶವನ್ನು ಪ್ರೀತಿಸುವಾಗ, ಮತ್ತು ಆತನ ಸೇವೆ ಮಾಡುವಾಗ, ತಂತಾನೆ ದೈಹಿಕ ಪ್ರಾತಿನಿಧ್ಯಕ್ಕೆ ಭಕ್ತಿ ತೋರಿದಂತೆ. – ಶ್ರೀಲ ಪ್ರಭುಪಾದ ಗೋವಿಂದ ದಾಸಿಗೆ ಬರೆದ ಪತ್ರ, 7 ಏಪ್ರಿಲ್ 1970

ಟಿಪ್ಪಣಿ

ನಾವು ಶ್ರೀಲ ಪ್ರಭುಪಾದರ ಕೈಕಾಲುಗಳು. ಅವರ ಪೂರ್ಣ ತೃಪ್ತಿಗೆ ಅವರೊಂದಿಗೆ ಯಶಸ್ವಿಯಾಗಿ ಸಹಕರಿಸಲು ನಾವು ಅವರೊಂದಿಗೆ ಪ್ರಜ್ಞೆಯಲ್ಲಿ ಒಂದಾಗಬೇಕು. ಈ ಪ್ರೀತಿಯ ಐಕ್ಯತೆಯು ನಾವು ಅವನ ವಾನಿಯಲ್ಲಿ ಸಂಪೂರ್ಣವಾಗಿ ಲೀನವಾಗುವುದರಿಂದ, ಮನವರಿಕೆಯಾಗುವುದರಿಂದ, ಮತ್ತು ಅಭ್ಯಾಸ ಮಾಡುವುದರಿಂದ ಬೆಳೆಯುತ್ತದೆ. ಪ್ರತಿಯೊಬ್ಬರೂ ಶ್ರೀಲ ಪ್ರಭುಪಾದರ ಬೋಧನೆಗಳನ್ನು ಒಟ್ಟುಗೂಡಿಸುವುದು, ಮತ್ತು ಅವರ ಕೃಷ್ಣ ಪ್ರಜ್ಞೆ ಆಂದೋಲನಕ್ಕಾಗಿ ನಾವು ಮಾಡುವ ಎಲ್ಲದರ ಕೇಂದ್ರದಲ್ಲಿ ಧೈರ್ಯದಿಂದ ಇಡುವುದು ನಮ್ಮ ಸಮಗ್ರ ಯಶಸ್ಸಿನ ತಂತ್ರವಾಗಿದೆ. ಈ ರೀತಿಯಾಗಿ, ಶ್ರೀಲ ಪ್ರಭುಪಾದರ ಭಕ್ತರು ವೈಯಕ್ತಿಕವಾಗಿ, ಮತ್ತು ತಮ್ಮ ಸೇವೆಗಳಲ್ಲಿ, ಅಭಿವೃದ್ಧಿ ಹೊಂದಬಹುದು. ಇಸ್ಕಾನ್ ಅನ್ನು ಘನ ದೇಹವನ್ನಾಗಿ ಮಾಡಲು, ಮತ್ತು ಜಗತ್ತನ್ನು ಸಂಪೂರ್ಣ ವಿಪತ್ತಿನಿಂದ ರಕ್ಷಿಸುವ ಶ್ರೀಲ ಪ್ರಭುಪಾದರ ಬಯಕೆಯನ್ನು ಪೂರೈಸಬಲ್ಲರು. ಭಕ್ತರು ಗೆಲ್ಲುತ್ತಾರೆ, ಜಿ.ಬಿ.ಸಿ ಗೆಲ್ಲುತ್ತದೆ, ಇಸ್ಕಾನ್ ಗೆಲ್ಲುತ್ತದೆ, ಜಗತ್ತು ಗೆಲ್ಲುತ್ತದೆ, ಶ್ರೀಲ ಪ್ರಭುಪಾದರು ಗೆಲ್ಲುತ್ತಾರೆ, ಮತ್ತು ಚೈತನ್ಯ ಮಹಾಪ್ರಭು ಗೆಲ್ಲುತ್ತಾರೆ. ಯಾರು ಸೋತವರು ಇರುವುದಿಲ್ಲ.

ಪರಂಪರೆಯ ಬೋಧನೆಗಳನ್ನು ವಿತರಿಸುವುದು

1486 ಕೃಷ್ಣ ಪ್ರಜ್ಞೆಯನ್ನು ಜಗತ್ತಿಗೆ ಕಲಿಸುವ ಸಲುವಾಗಿ ಚೈತನ್ಯ ಮಹಾಪ್ರಭು ಆವಿರ್ಭವಿಸಿದರು - 534 ವರ್ಷಗಳ ಹಿಂದೆ

1488 ಕೃಷ್ಣ ಪ್ರಜ್ಞೆಯ ಬಗ್ಗೆ ಪುಸ್ತಕಗಳನ್ನು ಬರೆಯುವ ಸಲುವಾಗಿ ಸನಾತನ ಗೋಸ್ವಾಮಿ ಆವಿರ್ಭವಿಸಿದರು - 532 ವರ್ಷಗಳ ಹಿಂದೆ

1489 ಕೃಷ್ಣ ಪ್ರಜ್ಞೆಯ ಬಗ್ಗೆ ಪುಸ್ತಕಗಳನ್ನು ಬರೆಯುವ ಸಲುವಾಗಿ ರೂಪ ಗೋಸ್ವಾಮಿ ಆವಿರ್ಭವಿಸಿದರು - 531 ವರ್ಷಗಳ ಹಿಂದೆ

1495 ಕೃಷ್ಣ ಪ್ರಜ್ಞೆಯ ಬಗ್ಗೆ ಪುಸ್ತಕಗಳನ್ನು ಬರೆಯುವ ಸಲುವಾಗಿ ರಘುನಾಥ ಗೋಸ್ವಾಮಿ ಆವಿರ್ಭವಿಸಿದರು - 525 ವರ್ಷಗಳ ಹಿಂದೆ

1500 ಯಾಂತ್ರಿಕ ಮುದ್ರಣಾಲಯಗಳು ಯುರೋಪಿನಾದ್ಯಂತ ಪುಸ್ತಕಗಳ ವಿತರಣೆಯಲ್ಲಿ ಕ್ರಾಂತಿಯುಂಟುಮಾಡಲು ಪ್ರಾರಂಭಿಸುತ್ತವೆ - 520 ವರ್ಷಗಳ ಹಿಂದೆ

1513 ಕೃಷ್ಣ ಪ್ರಜ್ಞೆಯ ಬಗ್ಗೆ ಪುಸ್ತಕಗಳನ್ನು ಬರೆಯುವ ಸಲುವಾಗಿ ಜೀವ ಗೋಸ್ವಾಮಿ ಆವಿರ್ಭವಿಸಿದರು - 507 ವರ್ಷಗಳ ಹಿಂದೆ

1834 ಕೃಷ್ಣ ಪ್ರಜ್ಞೆಯ ಬಗ್ಗೆ ಪುಸ್ತಕಗಳನ್ನು ಬರೆಯುವ ಸಲುವಾಗಿ ಭಕ್ತಿವಿನೋದ ಠಾಕುರ ಆವಿರ್ಭವಿಸಿದರು - 186 ವರ್ಷಗಳ ಹಿಂದೆ

1874 ಕೃಷ್ಣ ಪ್ರಜ್ಞೆಯ ಬಗ್ಗೆ ಪುಸ್ತಕಗಳನ್ನು ಬರೆಯುವ ಸಲುವಾಗಿ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಆವಿರ್ಭವಿಸಿದರು - 146 ವರ್ಷಗಳ ಹಿಂದೆ

1896 ಕೃಷ್ಣ ಪ್ರಜ್ಞೆಯ ಬಗ್ಗೆ ಪುಸ್ತಕಗಳನ್ನು ಬರೆಯುವ ಸಲುವಾಗಿ ಶ್ರೀಲ ಪ್ರಭುಪಾದರು ಆವಿರ್ಭವಿಸಿದರು - 124 ವರ್ಷಗಳ ಹಿಂದೆ

1914 ಭಕ್ತಿದ್ಧಾಂತ ಸರಸ್ವತಿ "ಬ್ರಹತ್-ಮೃದಂಗ" ಎಂಬ ವಾಕ್ಯಾಂಶವನ್ನು ರಚಿಸಿದರು - 106 ವರ್ಷಗಳ ಹಿಂದೆ

1922 ಶ್ರೀಲ ಪ್ರಭುಪಾದರು ಮೊದಲ ಬಾರಿಗೆ ಭಕ್ತಿಸಿದ್ಧಾಂತ ಸರಸ್ವತಿಯನ್ನು ಭೇಟಿಯಾಗುತ್ತಾರೆ, ಮತ್ತು ತಕ್ಷಣವೇ ಇಂಗ್ಲಿಷ್ ಭಾಷೆಯಲ್ಲಿ ಬೋಧಿಸಲು ವಿನಂತಿಸಲಾಗುತ್ತದೆ - 98 ವರ್ಷಗಳ ಹಿಂದೆ

1935 ಶ್ರೀಲ ಪ್ರಭುಪಾದರು ಪುಸ್ತಕಗಳನ್ನು ಮುದ್ರಿಸುವ ಆಜ್ಞೆಯನ್ನು ಪಡೆಯುತ್ತಾರೆ - 85 ವರ್ಷಗಳ ಹಿಂದೆ

1944 ಶ್ರೀಲ ಪ್ರಭುಪಾದರು ‘ಬ್ಯಾಕ್ ಟು ಗಾಡ್ ಹೇಡ್’ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ - 76 ವರ್ಷಗಳ ಹಿಂದೆ

1956 ಶ್ರೀಲ ಪ್ರಭುಪಾದರು ಪುಸ್ತಕಗಳನ್ನು ಬರೆಯಲು ವೃಂದಾವನಕ್ಕೆ ತೆರಳುತ್ತಾರೆ - 64 ವರ್ಷಗಳ ಹಿಂದೆ

1962 ಶ್ರೀಲ ಪ್ರಭುಪಾದರು ತಮ್ಮ ಶ್ರೀಮದ್-ಭಾಗವತದ ಮೊದಲ ಸಂಪುಟವನ್ನು ಪ್ರಕಟಿಸಿದರು - 58 ವರ್ಷಗಳ ಹಿಂದೆ

1965 ಶ್ರೀಲ ಪ್ರಭುಪಾದರು ತಮ್ಮ ಪುಸ್ತಕಗಳನ್ನು ವಿತರಿಸಲು ಪಶ್ಚಿಮಕ್ಕೆ ಆಗಮಿಸುತ್ತಾರೆ - 54 ವರ್ಷಗಳ ಹಿಂದೆ

1968 ಶ್ರೀಲ ಪ್ರಭುಪಾದರು ತಮ್ಮ ಸಂಕ್ಷಿಪ್ತ ‘ಭಗವದ್ಗೀತೆ ಯಥಾರೂಪ’ ವನ್ನು ಪ್ರಕಟಿಸಿದರು - 52 ವರ್ಷಗಳ ಹಿಂದೆ

1972 ಶ್ರೀಲ ಪ್ರಭುಪಾದರು ತಮ್ಮ ‘ಭಗವದ್ಗೀತೆ ಯಥಾರೂಪ’ ದ ಪೂರ್ಣ ಆವೃತ್ತಿಯನ್ನು ಪ್ರಕಟಿಸಿದರು - 48 ವರ್ಷಗಳ ಹಿಂದೆ

1972 ಶ್ರೀಲ ಪ್ರಭುಪಾದರು ತಮ್ಮ ಪುಸ್ತಕಗಳನ್ನು ಪ್ರಕಟಿಸಲು ಬಿಬಿಟಿಯನ್ನು ಸ್ಥಾಪಿಸುತ್ತಾರೆ - 48 ವರ್ಷಗಳ ಹಿಂದೆ

1974 ಶ್ರೀಲ ಪ್ರಭುಪಾದರ ಶಿಷ್ಯರು ತಮ್ಮ ಪುಸ್ತಕಗಳ ಗಂಭೀರ ವಿತರಣೆಯನ್ನು ಪ್ರಾರಂಭಿಸುತ್ತಾರೆ - 46 ವರ್ಷಗಳ ಹಿಂದೆ

1975 ಶ್ರೀಲ ಪ್ರಭುಪಾದರು ಶ್ರೀ ತನ್ಯ-ಕ್ಯಾರಿಟಮೃತವನ್ನು ಪೂರ್ಣಗೊಳಿಸಿದ್ದಾರೆ - 45 ವರ್ಷಗಳ ಹಿಂದೆ

1977 ಶ್ರೀಲ ಪ್ರಭುಪಾದರು ಮಾತನಾಡುವುದನ್ನು ನಿಲ್ಲಿಸಿ ತಮ್ಮ ವಾಣಿಯನ್ನು ನಮ್ಮ ಆರೈಕೆಯಲ್ಲಿ ಬಿಡುತ್ತಾರೆ - 43 ವರ್ಷಗಳ ಹಿಂದೆ

1978 ಭಕ್ತಿವೇದಾಂತ ಆರ್ಕೈವ್ಸ್ ಸ್ಥಾಪನೆಯಾಗಿದೆ - 42 ವರ್ಷಗಳ ಹಿಂದೆ

1986 ವಿಶ್ವದ ಡಿಜಿಟಲ್ ಸಂಗ್ರಹವಾಗಿರುವ ವಸ್ತುವು ಪ್ರತಿ ವ್ಯಕ್ತಿಗೆ 1 ಸಿಡಿ-ರಾಮ್ ಆಗಿರುತ್ತದೆ - 34 ವರ್ಷಗಳ ಹಿಂದೆ

1991 ವರ್ಲ್ಡ್ ವೈಡ್ ವೆಬ್ (ಬೃಹತ್- ಬೃಹತ್- ಬೃಹತ್ ಮೃದಂಗ) ಅನ್ನು ಸ್ಥಾಪಿಸಲಾಯಿತು - 29 ವರ್ಷಗಳ ಹಿಂದೆ

1992 ಭಕ್ತಿವೇದಾಂತ ವೇದಬೇಸ್ ಆವೃತ್ತಿ 1.0 ಅನ್ನು ರಚಿಸಲಾಗಿದೆ - 28 ವರ್ಷಗಳ ಹಿಂದೆ

2002 ಡಿಜಿಟಲ್ ಯುಗವು ಆಗಮಿಸುತ್ತದೆ - ವಿಶ್ವಾದ್ಯಂತ ಡಿಜಿಟಲ್ ಸಂಗ್ರಹವು ಅನಲಾಗ್ ಅನ್ನು ಹಿಂದಿಕ್ಕುತ್ತದೆ - 18 ವರ್ಷಗಳ ಹಿಂದೆ

2007 ವಿಶ್ವದ ಡಿಜಿಟಲ್ ಸಂಗ್ರಹವಾಗಿರುವ ವಸ್ತುವು ಪ್ರತಿ ವ್ಯಕ್ತಿಗೆ 61 ಸಿಡಿ-ರಾಮ್ಗಳಷ್ಟಿದೆ, ಅದು 427 ಬಿಲಿಯನ್ ಸಿಡಿ-ರಾಮ್ಗಳನ್ನು ಮಾಡುತ್ತದೆ (ಎಲ್ಲವೂ ತುಂಬಿದೆ). - 13 ವರ್ಷಗಳ ಹಿಂದೆ

2007 ಶ್ರೀಲ ಪ್ರಭುಪಾದರ ವಾಣಿ-ದೇವಾಲಯ, ವಾಣಿಪೀಡಿಯಾ, ವೆಬ್ನಲ್ಲಿ ನಿರ್ಮಾಣ ಪ್ರಾರಂಭವಾಗುತ್ತದೆ - 13 ವರ್ಷಗಳ ಹಿಂದೆ

2010 ಶ್ರೀಲ ಪ್ರಭುಪಾದರ ವಾಪು-ದೇವಾಲಯ, ವೈದಿಕ ತಾರಾಲಯ ಧೇವಸ್ಥಾನ, ಶ್ರೀಧಮಾ ಮಾಯಾಪುರದಲ್ಲಿ ನಿರ್ಮಾಣವಾಗಲು ಪ್ರಾರಂಭವಾಗುತ್ತದೆ - 10 ವರ್ಷಗಳ ಹಿಂದೆ

2012 ವಾಣಿಪೀಡಿಯಾ 1,906,753 ಉಲ್ಲೇಖಗಳು, 108,971 ಪುಟಗಳು, ಮತ್ತು 13,946 ವಿಭಾಗಗಳನ್ನು ತಲುಪಿದೆ - 8 ವರ್ಷಗಳ ಹಿಂದೆ

2013 ಶ್ರೀಲ ಪ್ರಭುಪಾದರ 500,000,000 ಪುಸ್ತಕಗಳನ್ನು, ಅಂದರೆ ಪ್ರತಿ ದಿನ ಸರಾಸರಿ 28,538 ಪುಸ್ತಕಗಳು, 48 ವರ್ಷಗಳಲ್ಲಿ ಇಸ್ಕಾನ್ ಭಕ್ತರು ವಿತರಿಸಿದ್ದಾರೆ - 7 ವರ್ಷಗಳ ಹಿಂದೆ

2019 ಗೌರ ಪೂರ್ಣಿಮಾ ದಿನ, 7.15 ಮಧ್ಯ-ಯುರೋಪಿಯನ್ ಸಮಯ, ಶ್ರೀಲ ಪ್ರಭುಪಾದರ ವಾಣಿ-ಉಪಸ್ಥಿತಿಯನ್ನು ಆಹ್ವಾನಿಸಲು, ಮತ್ತು ಸಂಪೂರ್ಣವಾಗಿ ಪ್ರಕಟಿಸಲು ಭಕ್ತರನ್ನು ಒಟ್ಟಾಗಿ ಸಹಕರಿಸಲು ಆಹ್ವಾನಿಸಿದ 11ನೇ ವಾರ್ಷಿಕೋತ್ಸವವನ್ನು ವಾಣಿಪೀಡಿಯಾ ಆಚರಿಸಿತು. ವಾಣಿಪೀಡಿಯಾ ಈಗ 45,588 ವಿಭಾಗಗಳು, 282,297 ಪುಟಗಳು, ಹಾಗು 2,100,000ಕ್ಕೂ ಹೆಚ್ಚು ಉಲ್ಲೇಖಗಳನ್ನು 93 ಭಾಷೆಗಳಲ್ಲಿ ಪ್ರಸ್ತುತಪಡಿಸಿದೆ. 295,000 ಗಂಟೆಗಳಿಗಿಂತ ಹೆಚ್ಚು ವಾಣಿಸೇವವನ್ನು ಪ್ರದರ್ಶಿಸಿದ 1,220 ಕ್ಕೂ ಹೆಚ್ಚು ಭಕ್ತರು ಇದನ್ನು ಸಾಧಿಸಿದ್ದಾರೆ. ಶ್ರೀಲ ಪ್ರಭುಪಾದರ ವಾಣಿ-ದೇವಾಲಯವನ್ನು ಪೂರ್ಣಗೊಳಿಸಲು ನಾವು ಇನ್ನೂ ಬಹಳ ದೂರ ಸಾಗಬೇಕಾಗಿದೆ, ಆದ್ದರಿಂದ ನಾವು ಈ ಅದ್ಭುತ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಭಕ್ತರನ್ನು ಆಹ್ವಾನಿಸುತ್ತಲೇ ಇದ್ದೇವೆ.

ಟಿಪ್ಪಣಿ

ಶ್ರೀ ಚೈತನ್ಯ ಮಹಾಪ್ರಭುರವರ ಧ್ಯೇಯವು ಆಧುನಿಕ ಕೃಷ್ಣ ಪ್ರಜ್ಞೆ ಚಳುವಳಿಯ ದ್ವಜದ ಅಡಿಯಲ್ಲಿ ಪ್ರಕಟವಾಗುತ್ತಿದೆ. ಭಕ್ತಿ ಸೇವೆ ಸಲ್ಲಿಸಲು ಇದು ಬಹಳ ರೋಮಾಂಚಕಾರಿ ಸಮಯ.

ಅಂತಾರಾಷ್ಟ್ರಿಯ ಕೃಷ್ಣ ಪ್ರಜ್ಞೆ ಸಂಘದ ಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರು ತಮ್ಮ ಅನುವಾದಗಳು, ಭಕ್ತಿವೇದಾಂತ ಭಾವಾರ್ಥಗಳು, ಉಪನ್ಯಾಸಗಳು, ಸಂಭಾಷಣೆಗಳು, ಮತ್ತು ಪತ್ರಗಳ ರೂಪದಲ್ಲಿ ಜೀವನವನ್ನು ಬದಲಾಯಿಸುವ ವಿದ್ಯಮಾನವನ್ನು ವಿಶ್ವ ವೇದಿಕೆಗೆ ತಂದಿದ್ದಾರೆ. ಇಡೀ ಮಾನವ ಸಮಾಜದ ಮರು ಆಧ್ಯಾತ್ಮೀಕರಣದ ಕೀಲಿಯು ಇಲ್ಲಿದೆ.

ವಾಣಿ, ವೈಯಕ್ತಿಕ ಒಡನಾಟ, ಮತ್ತು ವಿಯೋಗದಲ್ಲಿ ಸೇವೆ - ಉಲ್ಲೇಖಗಳು

  • ನನ್ನ ಗುರು ಮಹಾರಾಜರು 1936ರಲ್ಲಿ, ದೈವಾಧೀನರಾದರು, ಮತ್ತು ನಾನು ಈ ಆಂದೋಲನವನ್ನು 1965ರಲ್ಲಿ ಪ್ರಾರಂಭಿಸಿದೆ, ಮೂವತ್ತು ವರ್ಷಗಳ ನಂತರ. ನಂತರ? ನಾನು ಗುರುವಿನ ಅನುಗ್ರಹವನ್ನು ಪಡೆಯುತ್ತಿದ್ದೇನೆ. ಇದು ವಾಣಿ. ಗುರುವಿನ ದೈಹಿಕ ಅನುಪಸ್ಥಿತಿಯಲ್ಲೂ ನೀವು ವಾಣಿಯನ್ನು ಅನುಸರಿಸಿದರೆ ನಿಮಗೆ ಸಹಾಯ ಸಿಗುತ್ತದೆ. – ಶ್ರೀಲ ಪ್ರಭುಪಾದ ಮುಂಜಾನೆಯ ನಡಿಗೆ ಸಂಭಾಷಣೆ, 21 ಜುಲೈ 1975


  • ಆಧ್ಯಾತ್ಮಿಕ ಗುರುವಿನ ದೈಹಿಕ ಅನುಪಸ್ಥಿತಿಯಲ್ಲಿ ವಾಣಿಸೇವಾ ಹೆಚ್ಚು ಮುಖ್ಯವಾಗಿದೆ. ನನ್ನ ಆಧ್ಯಾತ್ಮಿಕ ಗುರು, ಸರಸ್ವತಿ ಗೋಸ್ವಾಮಿ ಠಾಕೂರ ದೈಹಿಕವಾಗಿ ಇಲ್ಲದಿರುವಂತೆ ಕಾಣಿಸಬಹುದು, ಆದರೆ ನಾನು ಅವರ ಬೋಧನೆಯನ್ನು ಪೂರೈಸಲು ಪ್ರಯತ್ನಿಸುವುದರಿಂದ ನಾನು ಎಂದಿಗೂ ಅವರಿಂದ ಬೇರ್ಪಟ್ಟಂತೆ ಭಾವಿಸುವುದಿಲ್ಲ. ನೀವೆಲ್ಲರೂ ಈ ಬೋಧನೆಗಳನ್ನು ಪಾಲಿಸಬೇಕು ಎಂದು ನಾನು ಅಪೇಕ್ಷಿಸುತ್ತೇನೆ. – ಶ್ರೀಲ ಪ್ರಭುಪಾದ ಕರಂದರ ದಾಸ್ (ಜಿಬಿಸಿ) ಗೆ ಬರೆದ ಪತ್ರ, 22 ಆಗಸ್ಟ್ 1970


  • ಮೊದಲಿನಿಂದಲೂ ನಾನು ನಿರಾಕಾರವಾದಿಗಳ ವಿರುದ್ಧ ಬಲವಾಗಿ ನಿಂತೆ, ಮತ್ತು ನನ್ನ ಎಲ್ಲಾ ಪುಸ್ತಕಗಳು ಈ ವಿಷಯದ ಬಗ್ಗೆ ಒತ್ತಿಹೇಳುತ್ತವೆ. ಆದ್ದರಿಂದ ನನ್ನ ಮೌಖಿಕ ಬೋಧನೆ ಮತ್ತು ನನ್ನ ಪುಸ್ತಕಗಳು ನಿಮ್ಮ ಸೇವೆಯಲ್ಲಿವೆ. ಈಗ ನೀವು ಜಿ.ಬಿ.ಸಿ ರವರು ಅವುಗಳನ್ನು ಸಂಪರ್ಕಿಸಿ ಸ್ಪಷ್ಟ ಮತ್ತು ದೃಡವಾದ ಆಲೋಚನೆಯನ್ನು ಪಡೆದುಕೊಳ್ಳಿ, ಆಗ ಯಾವುದೇ ತೊಂದರೆ ಉಂಟಾಗುವುದಿಲ್ಲ. ಅಜ್ಞಾನದಿಂದ ಗೊಂದಲ ಉಂಟಾಗುತ್ತದೆ; ಎಲ್ಲಿ ಅಜ್ಞಾನವಿಲ್ಲವೋ, ಅಲ್ಲಿ ಗೊಂದಲ ಇಲ್ಲ. – ಶ್ರೀಲ ಪ್ರಭುಪಾದ ಹಯಗ್ರೀವ ದಾಸ್ (ಜಿಬಿಸಿ) ಗೆ ಬರೆದ ಪತ್ರ, 22 ಆಗಸ್ಟ್ 1970


  • ಇಲ್ಲಿಯವರೆಗೆ ಗುರುವಿನೊಂದಿಗಿನ ವೈಯಕ್ತಿಕ ಒಡನಾಟಕ್ಕೆ ಸಂಬಂಧಪಟ್ಟಂತೆ, ನಾನು ನನ್ನ ಗುರು ಮಹಾರಾಜರೊಡನೆ ನಾಲ್ಕು ಅಥವಾ ಐದು ಬಾರಿ ಮಾತ್ರ ಇದ್ದೆ, ಆದರೆ ನಾನು ಅವರ ಒಡನಾಟವನ್ನು ಎಂದಿಗೂ ಬಿಟ್ಟಿಲ್ಲ, ಒಂದು ಕ್ಷಣವೂ ಅಲ್ಲ. ನಾನು ಅವರ ಬೋಧನೆಗಳನ್ನು ಅನುಸರಿಸುತ್ತಿರುವ ಕಾರಣ, ನಾನು ಯಾವುದೇ ವಿಯೋಗವನ್ನು ಅನುಭವಿಸಿಲ್ಲ. – ಶ್ರೀಲ ಪ್ರಭುಪಾದರು ಸತ್ಯಾಧ್ಯಾಯ ದಾಸ್ ರವರಿಗೆ ಬರೆದ ಪತ್ರ, 20 ಫೆಬ್ರವರಿ 1972



  • ದಯವಿಟ್ಟು ವಿಯೋಗದಲ್ಲೂ ಸಂತೋಷವಾಗಿರಿ. ನಾನು 1936ರಿಂದ ನನ್ನ ಗುರು ಮಹಾರಾಜರಿಂದ ಬೇರ್ಪಟ್ಟಿದ್ದೇನೆ ಆದರೆ ನಾನು ಯಾವಾಗಲೂ ಅವರೊಂದಿಗೆ ಇರುತ್ತೇನೆ, ಅವರ ನಿರ್ದೇಶನಕ್ಕೆ ಅನುಗುಣವಾಗಿ ನಾನು ಕೆಲಸ ಮಾಡುತ್ತೇನೆ. ಆದ್ದರಿಂದ ಶ್ರೀಕೃಷ್ಣನನ್ನು ತೃಪ್ತಿಪಡಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಆ ರೀತಿಯಲ್ಲಿ ವಿಯೋಗದ ಭಾವನೆಗಳು ಅತೀಂದ್ರಿಯ ಆನಂದವಾಗಿ ರೂಪಾಂತರಗೊಳ್ಳುತ್ತವೆ. – ಶ್ರೀಲ ಪ್ರಭುಪಾದ ಪತ್ರ ಉದ್ಧ ದಾಸ್ (ಇಸ್ಕಾನ್ ಪ್ರೆಸ್), 3 ಮೇ 1968

ಟಿಪ್ಪಣಿ

ಶ್ರೀಲ ಪ್ರಭುಪಾದರು ಈ ಹೇಳಿಕೆಗಳ ಸರಣಿಯಲ್ಲಿ ಅನೇಕ ಸತ್ಯಗಳನ್ನು ನೀಡುತ್ತಾರೆ.

  • ಶ್ರೀಲ ಪ್ರಭುಪಾದರ ವೈಯಕ್ತಿಕ ಮಾರ್ಗದರ್ಶನ ಯಾವಾಗಲೂ ಇಲ್ಲಿಯೇ ಇರುತ್ತದೆ.
  • ಶ್ರೀಲ ಪ್ರಭುಪಾದರಿಂದ ವಿಯೋಗ ಭಾವನೆಗಳಲ್ಲಿ ನಾವು ಸಂತೋಷವಾಗಿರಬೇಕು.
  • ಶ್ರೀಲ ಪ್ರಭುಪಾದರ ದೈಹಿಕ ಅನುಪಸ್ಥಿತಿಯಲ್ಲಿ ಅವರ ವಾಣಿಸೇವ ಹೆಚ್ಚು ಮುಖ್ಯ.
  • ಶ್ರೀಲ ಪ್ರಭುಪಾದರು ತಮ್ಮ ಗುರು ಮಹಾರಾಜರೊಂದಿಗೆ ಬಹಳ ಕಡಿಮೆ ವೈಯಕ್ತಿಕ ಒಡನಾಟವನ್ನು ಹೊಂದಿದ್ದರು.
  • ಶ್ರೀಲ ಪ್ರಭುಪಾದರ ಮೌಖಿಕ ಸೂಚನೆ, ಹಾಗೆಯೇ ಅವರ ಪುಸ್ತಕಗಳು, ಎಲ್ಲವೂ ನಮ್ಮ ಸೇವೆಯಲ್ಲಿವೆ.
  • ಶ್ರೀಲ ಪ್ರಭುಪಾದರಿಂದ ವಿಯೋಗದ ಭಾವನೆಗಳು ಅತೀಂದ್ರಿಯ ಆನಂದವಾಗಿ ರೂಪಾಂತರಗೊಳ್ಳುತ್ತವೆ.
  • ಶ್ರೀಲ ಪ್ರಭುಪಾದರು ದೈಹಿಕವಾಗಿ ಇಲ್ಲದಿದ್ದಾಗ, ನಾವು ಅವರ ವಾಣಿಯನ್ನು ಅನುಸರಿಸಿದರೆ, ನಾವು ಅವರ ಸಹಾಯವನ್ನು ಪಡೆಯುತ್ತೇವೆ.
  • ಶ್ರೀಲ ಪ್ರಭುಪಾದರು ಭಕ್ತಿಸಿದ್ಧಾಂತ ಸರಸ್ವತಿಯವರ ಒಡನಾಟವನ್ನು ಎಂದಿಗೂ ಬಿಟ್ಟಿರಲಿಲ್ಲ, ಒಂದು ಕ್ಷಣವೂ ಸಹ.
  • ಶ್ರೀಲ ಪ್ರಭುಪಾದರ ಮೌಖಿಕ ಬೋಧನೆಗಳನ್ನು ಮತ್ತು ಪುಸ್ತಕಗಳನ್ನು ಸಮಾಲೋಚಿಸುವ ಮೂಲಕ ನಮಗೆ ಸ್ಪಷ್ಟ ಮತ್ತು ಬಲವಾದ ವಿಚಾರಗಳು ಸಿಗುತ್ತವೆ.
  • ಶ್ರೀಲ ಪ್ರಭುಪಾದರ ಬೋಧನೆಗಳನ್ನು ಅನುಸರಿಸುವ ಮೂಲಕ ವಿಯೋಗದ ಭಾವನೆ ಉಂಟಾಗುವುದಿಲ್ಲ.
  • ಶ್ರೀಲ ಪ್ರಭುಪಾದರು ತಮ್ಮ ಅನುಯಾಯಿಗಳೆಲ್ಲರೂ ಅವರ ಅಧಿಕಾರಯುತ ಶಿಕ್ಷಾ-ಶಿಷ್ಯರಾಗಲು ಈ ಬೋಧನೆಗಳನ್ನು ಪಾಲಿಸಬೇಕೆಂದು ಅಪೇಕ್ಷಿಸುತ್ತಾರೆ.

ಕೃಷ್ಣನ ಸಂದೇಶವನ್ನು ಹರಡಿಸಿಲು ಮಾಧ್ಯಮದ ಬಳಕೆ

  • ಆದ್ದರಿಂದ ಪತ್ರಿಕಾ ಮತ್ತು ಇತರ ಆಧುನಿಕ-ಮಾಧ್ಯಮಗಳ ಮೂಲಕ ನನ್ನ ಪುಸ್ತಕಗಳ ವಿತರಣೆಗಾಗಿ ನಿಮ್ಮ ಸಂಘಟನೆಯೊಂದಿಗೆ ಮುಂದುವರಿಸಿರಿ. ಕೃಷ್ಣ ಖಂಡಿತವಾಗಿಯೂ ನಿಮ್ಮ ಮೇಲೆ ಸಂತಸಗೊಳ್ಳುತ್ತಾನೆ. ಕೃಷ್ಣನ ಬಗ್ಗೆ ಹೇಳಲು ನಾವು ಎಲ್ಲವನ್ನೂ ಬಳಸಬಹುದು - ದೂರದರ್ಶನ, ರೇಡಿಯೋ, ಚಲನಚಿತ್ರಗಳು ಅಥವಾ ಯಾವುದಾದರೂ ಇರಬಹುದು. – ಭಗವಾನ್ ದಾಸ್ (ಜಿಬಿಸಿ) ಗೆ ಶ್ರೀಲ ಪ್ರಭುಪಾದರ ಪತ್ರ, 24 ನವೆಂಬರ್ 1970



  • ನಿಮ್ಮ ಟಿವಿ ಮತ್ತು ರೇಡಿಯೊ ಕಾರ್ಯಕ್ರಮಗಳ ಅದ್ಭುತ ಯಶಸ್ಸಿನ ವರದಿಗಳಿಂದ ನನಗೆ ತುಂಬಾ ಪ್ರೋತ್ಸಾಹವಾಗಿದೆ. ಲಭ್ಯವಿರುವ ಎಲ್ಲಾ ಸಮೂಹ ಮಾಧ್ಯಮಗಳನ್ನು ಬಳಸಿಕೊಂಡು ನಮ್ಮ ಉಪದೇಶ ಕಾರ್ಯಕ್ರಮಗಳನ್ನು ಹೆಚ್ಚಿಸಲು ಸಾಧ್ಯವಾದಷ್ಟು ಪ್ರಯತ್ನಿಸಿ. ನಾವು ಆಧುನಿಕ ವೈಷ್ಣವರು, ಮತ್ತು ಲಭ್ಯವಿರುವ ಎಲ್ಲ ವಿಧಾನಗಳನ್ನು ಬಳಸಿಕೊಂಡು ನಾವು ತೀವ್ರವಾಗಿ ಬೋಧಿಸಬೇಕು. – ಶ್ರೀಲ ಪ್ರಭುಪಾದರು ರೂಪನುಗ ದಾಸ್ (ಜಿಬಿಸಿ) ಗೆ ಬರೆದ ಪತ್ರ, 30 ಡಿಸೆಂಬರ್ 1971


  • ನಾನು ನನ್ನ ಕೋಣೆಯಲ್ಲಿ ಸುಮ್ಮನೆ ಕುಳಿತು ಜಗತ್ತಿನಿಂದ ನೋಡಲ್ಪಡುವಂತೆ, ಮತ್ತು ಪ್ರಪಂಚದೊಂದಿಗೆ ಮಾತನಾಡಲು ಸಾಧ್ಯವಾಗುವಂತೆ ನೀವು ಎಲ್ಲವನ್ನೂ ವ್ಯವಸ್ಥೆ ಮಾಡಲು ಸಾಧ್ಯವಾದರೆ, ನಾನು ಎಂದಿಗೂ ಲಾಸ್ ಏಂಜಲೀಸ್ ಅನ್ನು ಬಿಡುವುದಿಲ್ಲ. ಅದು ನಿಮ್ಮ L.A. ದೇವಾಲಯದ ಪರಿಪೂರ್ಣತೆಯಾಗಿರುತ್ತದೆ. ನಮ್ಮ ಕೃಷ್ಣ ಪ್ರಜ್ಞೆ ಕಾರ್ಯಕ್ರಮದೊಂದಿಗೆ ನಿಮ್ಮ ದೇಶದ ಮಾಧ್ಯಮಗಳನ್ನು ತುಂಬುವ ನಿಮ್ಮ ಪ್ರಸ್ತಾಪದಿಂದ ನಾನು ತುಂಬಾ ಪ್ರೋತ್ಸಾಹಿಸುತ್ತಿದ್ದೇನೆ, ಮತ್ತು ಅದು ನಿಮ್ಮ ಕೈಯಲ್ಲಿ ಪ್ರಾಯೋಗಿಕವಾಗಿ ಆಕಾರ ಪಡೆಯುತ್ತಿದೆ ಎಂದು ನೋಡಿ ಹೆಚ್ಚು ಸಂತೋಷಪಟ್ಟಿದ್ದೇನೆ. - ಶ್ರೀಲ ಪ್ರಭುಪಾದರು ಸಿದ್ಧೇಶ್ವರ್ ದಾಸ್ ಮತ್ತು ಕೃಷ್ಣಕಾಂತಿ ದಾಸ್ ಅವರಿಗೆ ಬರೆದ ಪತ್ರ, 16 ಫೆಬ್ರವರಿ 1972



ಟಿಪ್ಪಣಿ

ಅವರ ಗುರು ಮಹಾರಾಜರ ಹೆಜ್ಜೆಗಳನ್ನು ಅನುಸರಿಸಿ ಶ್ರೀಲ ಪ್ರಭುಪಾದರು ಕೃಷ್ಣನ ಸೇವೆಗಾಗಿ ಎಲ್ಲವನ್ನೂ ತೊಡಗಿಸಿಕೊಳ್ಳುವ ಕಲೆ ತಿಳಿದಿದ್ದರು.

  • ಶ್ರೀಲ ಪ್ರಭುಪಾದರು ಜಗತ್ತು ಅವರನ್ನು ನೋಡಬೇಕು, ಮತ್ತು ಜಗತ್ತಿನೊಂದಿಗೆ ಅವರು ಮಾತನಾಡಬೇಕೆಂದು ಬಯಸುತ್ತಾರೆ.
  • ಶ್ರೀಲ ಪ್ರಭುಪಾದರು ಮಾಧ್ಯಮವನ್ನು ನಮ್ಮ ಕೃಷ್ಣ ಪ್ರಜ್ಞೆ ಕಾರ್ಯಕ್ರಮಗಳನ್ನು ತುಂಬಿಸಲು ಬಯಸುತ್ತಾರೆ.
  • ಶ್ರೀಲ ಪ್ರಭುಪಾದರು ತಮ್ಮ ಪುಸ್ತಕಗಳನ್ನು ಪತ್ರಿಕಾ ಮತ್ತು ಇತರ ಆಧುನಿಕ-ಮಾಧ್ಯಮಗಳ ಮೂಲಕ ವಿತರಿಸಲು ಬಯಸುತ್ತಾರೆ.
  • ಶ್ರೀಲ ಪ್ರಭುಪಾದರು ತಮ್ಮ ಬೋಧನೆಗಳ ವಿಷಯಸೂಚಿ ವಿಶ್ವಕೋಶದ ಯೋಜನೆಯ ಬಗ್ಗೆ ಕೇಳಿ ಸಂತೋಷಪಟ್ಟರು.
  • ಲಭ್ಯವಿರುವ ಎಲ್ಲ ಸಮೂಹ ಮಾಧ್ಯಮಗಳನ್ನು ಬಳಸಿಕೊಂಡು ನಮ್ಮ ಉಪದೇಶ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು ಎಂದು ಶ್ರೀಲ ಪ್ರಭುಪಾದರು ಹೇಳುತ್ತಾರೆ.
  • ಶ್ರೀಲ ಪ್ರಭುಪಾದರು ನಾವು ಆಧುನಿಕ ವೈಷ್ಣವರು, ಮತ್ತು ಲಭ್ಯವಿರುವ ಎಲ್ಲ ವಿಧಾನಗಳನ್ನು ಬಳಸಿಕೊಂಡು ಹುರುಪಿನಿಂದ ಬೋಧಿಸಬೇಕು ಎಂದು ಹೇಳುತ್ತಾರೆ.
  • ಶ್ರೀಲ ಪ್ರಭುಪಾದರು ಕೃಷ್ಣನ ಬಗ್ಗೆ ತಿಳಿಸಲು ನಾವು ಎಲ್ಲವನ್ನೂ ಬಳಸಬಹುದು - ದೂರದರ್ಶನ, ರೇಡಿಯೋ, ಚಲನಚಿತ್ರಗಳು – ಎಲ್ಲವೂ.
  • ನಮ್ಮ ಕೃಷ್ಣ ಪ್ರಜ್ಞೆ ಆಂದೋಲನವನ್ನು ಹರಡಲು ಸಮೂಹ ಮಾಧ್ಯಮಗಳು ಪ್ರಮುಖ ಸಾಧನವಾಗಬಹುದು ಎಂದು ಶ್ರೀಲ ಪ್ರಭುಪಾದರು ಹೇಳುತ್ತಾರೆ.

ಆಧುನಿಕ-ಮಾಧ್ಯಮ, ಆಧುನಿಕ ಅವಕಾಶಗಳು

ಶ್ರೀಲ ಪ್ರಭುಪಾದರಿಗೆ, 1970ರ ದಶಕದಲ್ಲಿ, ಆಧುನಿಕ-ಮಾಧ್ಯಮ ಮತ್ತು ಸಮೂಹ-ಮಾಧ್ಯಮ ಎಂಬ ಪದಗಳು ಮುದ್ರಣಾಲಯ, ರೇಡಿಯೋ, ಟಿವಿ, ಮತ್ತು ಚಲನಚಿತ್ರಗಳನ್ನು ಅರ್ಥೈಸಿದವು. ಅವರು ದೈವಾದೀನರಾದಾಗಿನಿಂದ, ಆಂಡ್ರಾಯ್ಡ್ ಫೋನ್ಗಳು, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಸಂಗ್ರಹಣೆ, ಇ-ಬುಕ್ ಓದುಗರು, ಇ-ಕಾಮರ್ಸ್, ಸಂವಾದಾತ್ಮಕ ಟಿವಿ ಮತ್ತು ಗೇಮಿಂಗ್, ಆನ್ಲೈನ್ ಪ್ರಕಾಶನ, ಪಾಡ್ಕಾಸ್ಟ್ಗಳು ಮತ್ತು ಆರ್ಎಸ್ಎಸ್ ಫೀಡ್ಗಳು, ಸಾಮಾಜಿಕ ಜಾಲತಾಣಗಳು, ಸ್ಟ್ರೀಮಿಂಗ್ ಮಾಧ್ಯಮಗಳು, ಸೇವೆಗಳು, ಟಚ್-ಸ್ಕ್ರೀನ್ ತಂತ್ರಜ್ಞಾನಗಳು, ವೆಬ್ ಆಧಾರಿತ ಸಂವಹನ ಮತ್ತು ವಿತರಣಾ ಸೇವೆಗಳು, ಮತ್ತು ವೈರ್ಲೆಸ್ ತಂತ್ರಜ್ಞಾನಗಳು ಮುಂತಾದವು ಸೇರಿ ಸಮೂಹ ಮಾಧ್ಯಮದ ಭೂದೃಶ್ಯವು ಬಹಳವಾಗಿ ರೂಪಾಂತರಗೊಂಡಿದೆ.

ಶ್ರೀಲ ಪ್ರಭುಪಾದರ ಉದಾಹರಣೆಗೆ ಅನುಗುಣವಾಗಿ ನಾವು 2007ರಿಂದ ಆಧುನಿಕ ಸಮೂಹ ಮಾಧ್ಯಮ ತಂತ್ರಜ್ಞಾನಗಳನ್ನು ಶ್ರೀಲ ಪ್ರಭುಪಾದರ ವಾಣಿಯನ್ನು ಸಂಕಲಿಸಲು, ಸೂಚ್ಯಂಕ ಮಾಡಲು, ವರ್ಗೀಕರಿಸಲು, ಮತ್ತು ವಿತರಿಸಲು ಬಳಸುತ್ತಿದ್ದೇವೆ.

  • ವೆಬ್ನಲ್ಲಿ ಶ್ರೀಲ ಪ್ರಭುಪಾದರ ಬೋಧನೆಗಳ ಗೋಚರತೆ ಹೆಚ್ಚಿಸಲು ಮತ್ತು ಪಡೆಯಲು ಸುಲಭಸಾದ್ಯವಾಗಿಸಲು ಉಚಿತ, ಅಧಿಕೃತ, ಒಂದು-ನಿಲುಗಡೆ ಸಂಪನ್ಮೂಲವನ್ನು ಈ ಕೆಳಗಿನ ವಿಷಯಗಳನ್ನು ಕುರಿತು ನೀಡುವುದು ವ್ಯಾಣಿಪೀಡಿಯಾದ ಗುರಿಯಾಗಿದೆ:
• ಇಸ್ಕಾನ್ ಬೋಧಕರು
• ಇಸ್ಕಾನ್ ನಾಯಕರು ಹಾಗು ವ್ಯವಸ್ಥಾಪಕರು
• ಭಕ್ತಿ ಕೋರ್ಸಗಳನ್ನು ಅಧ್ಯಯನ ಮಾಡುತ್ತಿರುವ ಭಕ್ತರು
• ತಮ್ಮ ಜ್ಞಾನವನ್ನು ಗಾಢವಾಗಿಸಲು ಬಯಸುವ ಭಕ್ತರು
• ಅಂತರ್ಧಾರ್ಮಿಕ ಸಂವಾದಗಳಲ್ಲಿ ಭಾಗಿಯಾಗಿರುವ ಭಕ್ತರು
• ಪಠ್ಯಕ್ರಮದ ಅಭಿವರ್ಧಕರು
• ಶ್ರೀಲ ಪ್ರಭುಪಾದರಿಂದ ವಿಯೋಗ ಅನುಭವಿಸುತ್ತಿರುವ ಭಕ್ತರು
• ಕಾರ್ಯನಿರ್ವಾಹಕ ನಾಯಕರು
• ಶಿಕ್ಷಣ ತಜ್ಞರು
• ಧಾರ್ಮಿಕ ಶಿಕ್ಷಣದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು
• ಲೇಖಕರು
• ಆಧ್ಯಾತ್ಮಿಕತೆಯ ಶೋಧಕರು
• ಪ್ರಸ್ತುತ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿಂತಿಸುವವರು
• ಇತಿಹಾಸಕಾರರು

ಟಿಪ್ಪಣಿ

ಶ್ರೀಲ ಪ್ರಭುಪಾದರ ಬೋಧನೆಗಳನ್ನು ಇಂದು ಜಗತ್ತಿನಲ್ಲಿ ಪಡೆಯಲು ಸುಭಸಾಧ್ಯವಾಗಿಸಲು ಮತ್ತು ಪ್ರಮುಖವಾಗಿಸಲು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಸಹಕಾರಿ ವೆಬ್ ತಂತ್ರಜ್ಞಾನಗಳು ನಮ್ಮ ಹಿಂದಿನ ಎಲ್ಲಾ ಯಶಸ್ಸನ್ನು ಮೀರಿಸುವ ಅವಕಾಶವನ್ನು ಒದಗಿಸುತ್ತದೆ.

ವಾಣಿಸೇವ - ಶ್ರೀಲ ಪ್ರಭುಪಾದರ ವಾಣಿಗೆ ಸೇವೆ ಸಲ್ಲಿಸುವ ಪವಿತ್ರ ಕಾರ್ಯ

ಶ್ರೀಲ ಪ್ರಭುಪಾದರು ನವೆಂಬರ್ 14, 1977 ರಂದು ಶಾಶ್ವತ ಮೌನವನ್ನು ಸ್ವೀಕರಿಸಿದರು, ಆದರೆ ಅವರು ನಮಗೆ ನೀಡಿದ ವಾಣಿ ಎಂದೆಂದಿಗೂ ತಾಜಾವಾಗಿ ಉಳಿದಿದೆ. ಆದಾಗ್ಯೂ, ಈ ಬೋಧನೆಗಳು ಇನ್ನೂ ಶುದ್ಧ ಸ್ಥಿತಿಯಲ್ಲಿಲ್ಲ, ಮತ್ತು ಅವೆಲ್ಲವೂ ಅವರ ಭಕ್ತರಿಗೆ ಸುಲಭವಾಗಿ ಪಡೆಯಲಾಗುತ್ತಿಲ್ಲ. ಶ್ರೀಲ ಪ್ರಭುಪಾದರ ಅನುಯಾಯಿಗಳು ಅವರ ವಾಣಿಯನ್ನು ಸಂರಕ್ಷಿಸುವ, ಮತ್ತು ಎಲ್ಲರಿಗೂ ವಿತರಿಸುವ ಪವಿತ್ರ ಕರ್ತವ್ಯವನ್ನು ಹೊಂದಿದ್ದಾರೆ. ಆದ್ದರಿಂದ ಈ ವಾಣಿಸೇವೆಯನ್ನು ಮಾಡಲು ನಾವು ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ.

ಪ್ರಪಂಚದಾದ್ಯಂತ ನನ್ನ ಕೆಲಸವನ್ನು ಮುಂದುವರಿಸಲು ನಾನು ನೇಮಿಸಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ನೀವೂ ಒಬ್ಬರೆಂದು ಯಾವಾಗಲೂ ನೆನಪಿಡಿ. ನಿಮ್ಮ ಧ್ಯೇಯ ದೊಡ್ಡದಾಗಿದೆ. ಆದ್ದರಿಂದ, ನಾನು ಮಾಡುತ್ತಿರುವುದನ್ನು ಮಾಡುವ ಮೂಲಕ ಈ ಧ್ಯೇಯವನ್ನು ಸಾಧಿಸಲು ನಿಮಗೆ ಶಕ್ತಿಯನ್ನು ನೀಡುವಂತೆ ಕೃಷ್ಣನನ್ನು ಯಾವಾಗಲೂ ಪ್ರಾರ್ಥಿಸಿ. ನನ್ನ ಮೊದಲ ವ್ಯವಹಾರವೆಂದರೆ ಭಕ್ತರಿಗೆ ಸರಿಯಾದ ಜ್ಞಾನವನ್ನು ನೀಡುವುದು, ಮತ್ತು ಅವರನ್ನು ಭಕ್ತಿ ಸೇವೆಯಲ್ಲಿ ತೊಡಗಿಸುವುದು. ಆದ್ದರಿಂದ ಅದು ನಿಮಗೆ ತುಂಬಾ ಕಷ್ಟದ ಕೆಲಸವಲ್ಲ. ನಾನು ನಿಮಗೆ ಎಲ್ಲವನ್ನೂ ನೀಡಿದ್ದೇನೆ. ಪುಸ್ತಕಗಳನ್ನು ಓದಿ ಮತ್ತು ಮಾತನಾಡಿ, ಹಲವಾರು ಹೊಸ ಬೆಳಕುಗಳು ಹೊರಬರುತ್ತವೆ. ನಮ್ಮ ಹತಿರ ಹಲವಾರು ಪುಸ್ತಕಗಳಿವೆ, ಆದ್ದರಿಂದ ನಾವು ಮುಂದಿನ 1,000 ವರ್ಷಗಳವರೆಗೆ ಅದರಿಂದ ಉಪದೇಶವನ್ನು ಮುಂದುವರಿಸುವಷ್ಟು ಸಂಗ್ರಹವಿದೆ. – ಸತ್ಸ್ವರೂಪ ದಾಸ್ (ಜಿಬಿಸಿ) ಗೆ ಶ್ರೀಲ ಪ್ರಭುಪಾದ ಪತ್ರ, 16 ಜೂನ್ 1972

1972ರ ಜೂನ್ನಲ್ಲಿ ಶ್ರೀಲ ಪ್ರಭುಪಾದರು "ನಾವು ಹಲವಾರು ಪುಸ್ತಕಗಳನ್ನು ಪಡೆದುಕೊಂಡಿದ್ದೇವೆ". "ಮುಂದಿನ 1,000 ವರ್ಷಗಳವರೆಗೆ" ಬೋಧಿಸಲು "ಸಾಕಷ್ಟು ಸಂಗ್ರಹವಿದೆ" ಎಂದು ಹೇಳಿದರು. ಆ ಸಮಯದಲ್ಲಿ, ಕೇವಲ 10 ಶೀರ್ಷಿಕೆಗಳನ್ನು ಮಾತ್ರ ಮುದ್ರಿಸಲಾಗಿತ್ತು, ಆದ್ದರಿಂದ ಶ್ರೀಲ ಪ್ರಭುಪಾದರು ಜುಲೈ 1972ರಿಂದ 1977ರ ನವೆಂಬರ್ ವರೆಗೆ ಪ್ರಕಟಿಸಿದ ಎಲ್ಲಾ ಹೆಚ್ಚುವರಿ ಪುಸ್ತಕಗಳೊಂದಿಗೆ, ವರ್ಷಗಳ ಸಂಖ್ಯೆಯನ್ನು ಸುಲಭವಾಗಿ 5,000ಕ್ಕೆ ವಿಸ್ತರಿಸಬಹುದು. ನಾವು ಅವರ ಮೌಖಿಕ ಸೂಚನೆಗಳು ಮತ್ತು ಅಕ್ಷರಗಳನ್ನು ಇದಕ್ಕೆ ಸೇರಿಸಿದರೆ, ಈ ಬಂಡಾರ 10,000 ವರ್ಷಗಳವರೆಗೆ ವಿಸ್ತರಿಸುತ್ತದೆ. ಈ ಎಲ್ಲಾ ಬೋಧನೆಗಳನ್ನು ಸುಲಭವಾಗಿ ಪಡೆಯುವಂತೆ, ಮತ್ತು ಸರಿಯಾಗಿ ಅರ್ಥಮಾಡಿಕೊಳ್ಳಲು ನಾವು ಕೌಶಲ್ಯದಿಂದ ಸಿದ್ಧಪಡಿಸಬೇಕು, ಇದರಿಂದಾಗಿ ಈ ಸಂಪೂರ್ಣ ಅವಧಿಗೆ "ಅದರಿಂದ ಬೋಧಿಸಬಹುದು".

ಶ್ರೀಲ ಪ್ರಭುಪಾದರು ಚೈತನ್ಯ ಮಹಾಪ್ರಭುರವರ ಸಂದೇಶವನ್ನು ಸಾರುವಲ್ಲಿ ನಿರಂತರ ಉತ್ಸಾಹ ಮತ್ತು ದೃಡನಿಶ್ಚಯವನ್ನು ಹೊಂದಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಅವರ ವಾಪು ನಮ್ಮನ್ನು ತೊರೆದಿದೆ ಎಂಬುದು ಮುಖ್ಯವಲ್ಲ. ಅವರು ತಮ್ಮ ಬೋಧನೆಗಳಲ್ಲಿ ಉಳಿದುಕೊಂಡಿದ್ದಾರೆ, ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ ಮೂಲಕ, ಅವರು ದೈಹಿಕವಾಗಿ ಹಾಜರಿದ್ದಕ್ಕಿಂತಲೂ ಈಗ ಹೆಚ್ಚು ವ್ಯಾಪಕವಾಗಿ ಬೋಧಿಸಬಹುದು. ಭಗವಾನ್ ಚೈತನ್ಯರ ಕರುಣೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿ, ನಾವು ಶ್ರೀಲ ಪ್ರಭುಪಾದರ ವಾಣಿ-ಧ್ಯೇಯವನ್ನು ಸ್ವೀಕರಿಸಿ, ಮತ್ತು ಹಿಂದೆಂದಿಗಿಂತಲೂ ಹೆಚ್ಚು ದೃಡನಿಶ್ಚಯದಿಂದ, 10,000 ವರ್ಷಗಳ ಕಾಲ ಉಪದೇಶಕ್ಕಾಗಿ ಅವರ ವಾಣಿಯನ್ನು ಉತ್ತಮವಾಗಿ ಸಿದ್ಧಪಡಿಸೋಣ.

ಕಳೆದ ಹತ್ತು ವರ್ಷಗಳಲ್ಲಿ ನಾನು ಚೌಕಟ್ಟನ್ನು ನೀಡಿದ್ದೇನೆ. ಈಗ ನಾವು ಬ್ರಿಟಿಷ್ ಸಾಮ್ರಾಜ್ಯಕ್ಕಿಂತ ದೊಡ್ಡದಾಗಿದ್ದೇವೆ. ಬ್ರಿಟಿಷ್ ಸಾಮ್ರಾಜ್ಯ ಕೂಡ ನಮ್ಮಷ್ಟು ವಿಸ್ತಾರವಾಗಿರಲಿಲ್ಲ. ಅವರು ಪ್ರಪಂಚದ ಒಂದು ಭಾಗವನ್ನು ಮಾತ್ರ ಹೊಂದಿದ್ದರು, ಮತ್ತು ನಾವು ವಿಸ್ತರಿಸುವುದನ್ನು ಇನ್ನು ಪೂರ್ಣಗೊಳಿಸಿಲ್ಲ. ನಾವು ಇನ್ನೂ ಹೆಚ್ಚು ಅನಿಯಮಿತವಾಗಿ ವಿಸ್ತರಿಸಬೇಕು. ಆದರೆ ನಾನು ಈಗ ಶ್ರೀಮದ್-ಭಾಗವತದ ಅನುವಾದವನ್ನು ಪೂರ್ಣಗೊಳಿಸಬೇಕು ಎಂದು ನಿಮಗೆ ನೆನಪಿಸಬೇಕು. ಇದು ದೊಡ್ಡ ಕೊಡುಗೆ; ನಮ್ಮ ಪುಸ್ತಕಗಳು ನಮಗೆ ಗೌರವಾನ್ವಿತ ಸ್ಥಾನವನ್ನು ನೀಡಿವೆ. ಈ ಚರ್ಚ್ ಅಥವಾ ದೇವಾಲಯದ ಆರಾಧನೆಯಲ್ಲಿ ಜನರಿಗೆ ನಂಬಿಕೆಯಿಲ್ಲ. ಆ ದಿನಗಳು ಕಳೆದುಹೋಗಿವೆ. ಸಹಜವಾಗಿ, ನಾವು ದೇವಾಲಯಗಳನ್ನು ಕಾಪಾಡಿಕೊಳ್ಳಬೇಕು ಏಕೆಂದರೆ ನಮ್ಮ ಉತ್ಸಾಹವನ್ನು ಉನ್ನತ ಮಟ್ಟದಲ್ಲಿರಿಸಿಕೊಳ್ಳಬೇಕು. ಕೇವಲ ಬೌದ್ಧಿಕತೆ ಸಾಕಾಗುವುದಿಲ್ಲ, ಪ್ರಾಯೋಗಿಕ ಶುದ್ಧೀಕರಣ ಇರಬೇಕು.

ಹಾಗಾಗಿ ಶ್ರೀಮದ್-ಭಾಗವತ ಅನುವಾದವನ್ನು ಪೂರ್ಣಗೊಳಿಸಲು ಸಾಧ್ಯವಾಗುವಂತೆ ನಿರ್ವಹಣಾ ಜವಾಬ್ದಾರಿಗಳಿಂದ ನನ್ನನ್ನು ಮುಕ್ತಗೊಳಿಸಲು ನಾನು ವಿನಂತಿಸುತ್ತೇನೆ. ನಾನು ಯಾವಾಗಲೂ ನಿರ್ವಹಣೆಯಲ್ಲಿದ್ದರೆ, ನನ್ನ ಪುಸ್ತಕಗಳ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಇದು ಒಂದು ದಾಖಲೆ, ನಾನು ಪ್ರತಿ ಪದವನ್ನು ಬಹಳ ನಿಧಾನವಾಗಿ ಆರಿಸಬೇಕಾಗುತ್ತದೆ. ನಾನು ನಿರ್ವಹಣೆಯ ಬಗ್ಗೆ ಯೋಚಿಸುತ್ತಿದ್ದರೆ ಇದನ್ನು ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರನ್ನು ಮೋಸಗೊಳಿಸಲು ಏನಾದರೂ ಕಟ್ಟುಕತೆಯನ್ನು ಪ್ರಸ್ತುತಪಡಿಸುವ ಈ ದೂರ್ತರಂತೆ ನಾನು ಇರಲು ಸಾಧ್ಯವಿಲ್ಲ. ಆದ್ದರಿಂದ ನನ್ನ ನಿಯೋಜಿತ ಸಹಾಯಕರು, ಜಿಬಿಸಿ, ದೇವಾಲಯದ ಅಧ್ಯಕ್ಷರು ಮತ್ತು ಸನ್ಯಾಸಿಗಳ ಸಹಕಾರವಿಲ್ಲದೆ ಈ ಕಾರ್ಯವು ಮುಗಿಯುವುದಿಲ್ಲ. ನನ್ನ ಅತ್ಯುತ್ತಮ ಜನರನ್ನು ಜಿಬಿಸಿ ಎಂದು ನಾನು ಆರಿಸಿದ್ದೇನೆ, ಮತ್ತು ಜಿಬಿಸಿಯು ದೇವಾಲಯದ ಅಧ್ಯಕ್ಷರಿಗೆ ಅಗೌರವ ತೋರಬೇಕೆಂದು ನಾನು ಬಯಸುವುದಿಲ್ಲ. ನೀವು ನನ್ನನ್ನು ಸಂಪರ್ಕಿಸಬಹುದು, ಆದರೆ ಮೂಲ ತತ್ವವು ದುರ್ಬಲವಾಗಿದ್ದರೆ, ವಿಷಯಗಳು ಹೇಗೆ ಮುಂದುವರಿಯುತ್ತವೆ? ಆದ್ದರಿಂದ ದಯವಿಟ್ಟು ನಿರ್ವಹಣೆಯಲ್ಲಿ ನನಗೆ ಸಹಾಯ ಮಾಡಿ, ಇದರಿಂದಾಗಿ ಶ್ರೀಮದ್-ಭಾಗವತವನ್ನು ಮುಗಿಸಲು ನಾನು ಮುಕ್ತನಾಗಿರುತ್ತೇನೆ, ಅದು ಜಗತ್ತಿಗೆ ನಮ್ಮ ಶಾಶ್ವತ ಕೊಡುಗೆಯಾಗಿದೆ. – ಎಲ್ಲಾ ಆಡಳಿತ ಮಂಡಳಿ ಆಯುಕ್ತರಿಗೆ ಶ್ರೀಲ ಪ್ರಭುಪಾದರ ಪತ್ರ, 19 ಮೇ 1976

ಇಲ್ಲಿ ಶ್ರೀಲ ಪ್ರಭುಪಾದರು ಹೇಳುತ್ತಿದ್ದಾರೆ, "ನನ್ನ ನಿಯೋಜಿತ ಸಹಾಯಕರ ಸಹಕಾರವಿಲ್ಲದೆ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದಿಲ್ಲ." "ಜಗತ್ತಿಗೆ ನಮ್ಮ ಶಾಶ್ವತ ಕೊಡುಗೆ" ನೀಡಲು ನಿಮ್ಮ ಸಹಾಯ ಬೇಕು. ಶ್ರೀಲ ಪ್ರಭುಪಾದರ "ಪುಸ್ತಕಗಳೆ ನಮಗೆ ಗೌರವಾನ್ವಿತ ಸ್ಥಾನವನ್ನು ನೀಡಿದೆ" ಮತ್ತು ಅವು "ಜಗತ್ತಿಗೆ ನೀಡಿದ ದೊಡ್ಡ ಕೊಡುಗೆ."

ಹಲವು ವರ್ಷಗಳಿಂದ, ಬಿಬಿಟಿ ಭಕ್ತರು, ಪುಸ್ತಕ ವಿತರಕರು, ಬೋಧಕರು, ಶ್ರೀಲ ಪ್ರಭುಪಾದರ ಮಾತನ್ನು ದೃಡವಾಗಿ ನಂಬಿರುವವರು, ಮತ್ತು ಅವರ ವಾಣಿಯನ್ನು ಒಂದಲ್ಲ ಇನ್ನೊಂದು ರೀತಿಯಲ್ಲಿ ವಿತರಿಸಲು ಮತ್ತು ಸಂರಕ್ಷಿಸಲು ಸಮರ್ಪಿತರಾದ ಇತರ ಭಕ್ತರು ವಣಿಸೇವೆಯನ್ನು ಎಷ್ಟೋ ಮಾಡಿದ್ದಾರೆ. ಆದರೆ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಬ್ರಹತ್-ಬ್ರಹತ್-ಬ್ರಹತ್ ಮೃದಂಗ (ವರ್ಲ್ಡ್ ವೈಡ್ ವೆಬ್) ತಂತ್ರಜ್ಞಾನಗಳ ಮೂಲಕ ಒಟ್ಟಾಗಿ ಕೆಲಸ ಮಾಡಿ, ಶ್ರೀಲ ಪ್ರಭುಪಾದರ ವಾಣಿಯ ಸಾಟಿಯಿಲ್ಲದ ಅಭಿವ್ಯಕ್ತಿಯನ್ನು ಬಹಳ ಕಡಿಮೆ ಅವಧಿಯಲ್ಲಿ ನಿರ್ಮಿಸಲು ನಮಗೆ ಈಗ ಅವಕಾಶವಿದೆ. ನಮ್ಮ ಪ್ರಸ್ತಾಪವು ವಾಣಿಸೇವೆಯಲ್ಲಿ ಒಗ್ಗೂಡಿ 2027ರ ನವೆಂಬರ್ 4 ರೊಳಗೆ ಪೂರ್ಣಗೊಳ್ಳಲು ಒಂದು ವಾಣಿ-ದೇವಾಲಯವನ್ನು ನಿರ್ಮಿಸುವುದು. ಆ ಸಮಯದಲ್ಲಿ ನಾವೆಲ್ಲರೂ 50ನೇ ವಾರ್ಷಿಕೋತ್ಸವವನ್ನು ಆಚರಿಸುತ್ತೇವೆ. ಶ್ರೀಲ ಪ್ರಭುಪಾದರ ವಿಯೋಗದಲ್ಲಿ ಸೇವೆ ಸಲ್ಲಿಸಿದ 50 ವರ್ಷಗಳು. ಇದು ಶ್ರೀಲ ಪ್ರಭುಪಾದರಿಗೆ ಅತ್ಯಂತ ಸೂಕ್ತವಾದ ಮತ್ತು ಸುಂದರವಾದ ಪ್ರೀತಿಯ ಅರ್ಪಣೆಯಾಗಿರುತ್ತದೆ. ಅವರ ಭಕ್ತರ ಮುಂದಿನ ಎಲ್ಲಾ ಪೀಳಿಗೆಗೆ ಅದ್ಭುತವಾದ ಕೊಡುಗೆಯಾಗಿದೆ.

ನಿಮ್ಮ ಮುದ್ರಣಾಲಯಕ್ಕೆ ನೀವು ರಾಧಾ ಪ್ರೆಸ್ ಎಂದು ಹೆಸರಿಟ್ಟಿದ್ದಕ್ಕೆ ನನಗೆ ಸಂತೋಷವಾಗಿದೆ. ಇದು ತುಂಬಾ ಸಂತೋಷಕರವಾಗಿದೆ. ನಮ್ಮ ಎಲ್ಲಾ ಪುಸ್ತಕಗಳು ಮತ್ತು ಸಾಹಿತ್ಯವನ್ನು ಜರ್ಮನ್ ಭಾಷೆಯಲ್ಲಿ ಪ್ರಕಟಿಸುವಲ್ಲಿ ನಿಮ್ಮ ರಾಧಾ ಪ್ರೆಸ್ ಸಮೃದ್ಧವಾಗಲಿ. ಇದು ತುಂಬಾ ಒಳ್ಳೆಯ ಹೆಸರು. ರಾಧರಣಿ ಕೃಷ್ಣನ ಅತ್ಯುತ್ತಮ, ಉನ್ನತ ಸೇವಕಿ, ಮತ್ತು ಕೃಷ್ಣನಿಗೆ ಸೇವೆ ಸಲ್ಲಿಸಲು ಈಗ ಮುದ್ರಣ ಯಂತ್ರವು ದೊಡ್ಡ ಮಾಧ್ಯಮವಾಗಿದೆ. ಆದ್ದರಿಂದ, ಇದು ನಿಜವಾಗಿಯೂ ಶ್ರೀಮತಿ ರಾಧರಣಿಯ ಪ್ರತಿನಿಧಿ. ಈ ವಿಚಾರವನ್ನು ನಾನು ತುಂಬಾ ಇಷ್ಟಪಡುತ್ತೇನೆ. – ಶ್ರೀಲ ಪ್ರಭುಪಾದರು ಜಯ ಗೋವಿಂದ ದಾಸ್ (ಪುಸ್ತಕ ನಿರ್ಮಾಣ ವ್ಯವಸ್ಥಾಪಕ)ಗೆ ಬರೆದ ಪತ್ರ, 4 ಜುಲೈ 1969

20ನೇ ಶತಮಾನದ ಬಹಳಷ್ಟು ದಶಕಗಳು, ಮುದ್ರಣಾಲಯವು ಅನೇಕ ಗುಂಪುಗಳಿಂದ ಯಶಸ್ವಿ ಪ್ರಚಾರಕ್ಕಾಗಿ ಸಾಧನಗಳನ್ನು ಒದಗಿಸಿತು. ಅವರು ವಿತರಿಸಿದ ಕರಪತ್ರಗಳು ಮತ್ತು ಪುಸ್ತಕಗಳ ಮೂಲಕ ಕಮ್ಯುನಿಸ್ಟರು ಭಾರತದಲ್ಲಿ ತಮ್ಮ ಪ್ರಭಾವವನ್ನು ಹರಡಲು ಎಷ್ಟು ಪರಿಣತರಾಗಿದ್ದಾರೆ ಎಂದು ಶ್ರೀಲ ಪ್ರಭುಪಾದರು ಹೇಳಿದ್ದಾರೆ. ಶ್ರೀಲ ಪ್ರಭುಪಾದರು ತಮ್ಮ ಪುಸ್ತಕಗಳನ್ನು ಪ್ರಪಂಚದಾದ್ಯಂತ ವಿತರಿಸುವ ಮೂಲಕ ಕೃಷ್ಣ ಪ್ರಜ್ಞೆಗಾಗಿ ಒಂದು ದೊಡ್ಡ ಪ್ರಚಾರ ಕಾರ್ಯಕ್ರಮವನ್ನು ಹೇಗೆ ಮಾಡಬೇಕೆಂದು ವ್ಯಕ್ತಪಡಿಸಲು ಈ ಉದಾಹರಣೆಯನ್ನು ಬಳಸಿದರು.

ಈಗ, 21 ನೇ ಶತಮಾನದಲ್ಲಿ, ಶ್ರೀಲ ಪ್ರಭುಪಾದರ ಹೇಳಿಕೆಯು "ಕೃಷ್ಣನಿಗೆ ಸೇವೆ ಸಲ್ಲಿಸುವ ಈಗಿನ ಅತಿದೊಡ್ಡ ಮಾಧ್ಯಮವಾಗಿದೆ" ನಿಸ್ಸಂದೇಹವಾಗಿ ಇಂಟರ್ನೆಟ್ ಪ್ರಕಾಶನ ಮತ್ತು ವಿತರಣೆಯ ಘಾತೀಯ ಮತ್ತು ಸಾಟಿಯಿಲ್ಲದ ಶಕ್ತಿಗೆ ಅನ್ವಯಿಸಬಹುದು. ವಾಣಿಪೀಡಿಯಾದಲ್ಲಿ, ಈ ಆಧುನಿಕ ಸಾಮೂಹಿಕ ವಿತರಣಾ ವೇದಿಕೆಯಲ್ಲಿ ಸರಿಯಾದ ಪ್ರಾತಿನಿಧ್ಯಕ್ಕಾಗಿ ನಾವು ಶ್ರೀಲ ಪ್ರಭುಪಾದರ ಬೋಧನೆಗಳನ್ನು ಸಿದ್ಧಪಡಿಸುತ್ತಿದ್ದೇವೆ. ಶ್ರೀಲ ಪ್ರಭುಪಾದರು ಜರ್ಮನಿಯಲ್ಲಿರುವ ತಮ್ಮ ಭಕ್ತರ ರಾಧಾ ಪ್ರೆಸ್ "ನಿಜವಾಗಿಯೂ ಶ್ರೀಮತಿ ರಾಧರಣಿಯ ಪ್ರತಿನಿಧಿ" ಎಂದು ಹೇಳಿದ್ದಾರೆ. ಆದ್ದರಿಂದ ಅವರು ವಾಣಿಪೀಡಿಯಾವನ್ನು ಕೂಡ ಶ್ರೀಮತಿ ರಾಧರಾಣಿಯ ಪ್ರತಿನಿಧಿಯೆಂದು ಪರಿಗಣಿಸುತ್ತಾರೆ ಎಂದು ನಮಗೆ ಖಚಿತವಾಗಿದೆ.

ಇಸ್ಕಾನ್ ಭಕ್ತರು ಈಗಾಗಲೇ ಅನೇಕ ಸುಂದರವಾದ ವಾಪು-ದೇವಾಲಯಗಳನ್ನು ನಿರ್ಮಿಸಿದ್ದಾರೆ - ಈಗ ನಾವು ಕನಿಷ್ಠ ಒಂದು ಅದ್ಭುತವಾದ ವಾಣಿ-ದೇವಾಲಯವನ್ನು ನಿರ್ಮಿಸೋಣ. ವಾಪು-ದೇವಾಲಯಗಳು ಭಗವಂತನ ರೂಪಗಳಿಗೆ ಪವಿತ್ರ ದರ್ಶನಗಳನ್ನು ನೀಡುತ್ತವೆ, ಮತ್ತು ಶ್ರೀಲ ಪ್ರಭುಪಾದರು ಮಂಡಿಸಿದಂತೆ ವಾಣಿ-ದೇವಾಲಯವು ಭಗವಂತ ಮತ್ತು ಅವರ ಶುದ್ಧ ಭಕ್ತರ ಬೋಧನೆಗಳಿಗೆ ಪವಿತ್ರ ದರ್ಶನ ನೀಡುತ್ತದೆ. ಶ್ರೀಲ ಪ್ರಭುಪಾದರ ಬೋಧನೆಗಳು ಅವರ ಸರಿಯಾದ, ಪೂಜನೀಯ ಸ್ಥಾನದಲ್ಲಿದ್ದಾಗ ಇಸ್ಕಾನ್ ಭಕ್ತರ ಕೆಲಸ ಸಹಜವಾಗಿಯೇ ಹೆಚ್ಚು ಯಶಸ್ವಿಯಾಗುತ್ತದೆ. ಈಗ ಅವರ ಎಲ್ಲಾ "ನಿಯೋಜಿತ ಸಹಾಯಕರು" ಅವರ ವಾಣಿ-ದೇವಾಲಯವನ್ನು ನಿರ್ಮಿಸುವ ವಾಣಿ-ಧ್ಯೇಯವನ್ನು ಸ್ವೀಕರಿಸಲು, ಮತ್ತು ಇಡೀ ಚಳವಳಿಯನ್ನು ಭಾಗವಹಿಸಲು ಪ್ರೇರೇಪಿಸವ ಅದ್ಭುತ ಅವಕಾಶವಿದೆ.

ಶ್ರೀಧಾಮ್ ಮಾಯಾಪುರದ ಗಂಗಾ ತೀರದಿಂದ ಏರುತ್ತಿರುವ ಅಗಾಧ ಮತ್ತು ಸುಂದರವಾದ ವಾಪು-ದೇವಾಲಯವು ಚೈತನ್ಯ ಮಹಾಪ್ರಭುಗಳ ಕರುಣೆಯನ್ನು ಪ್ರಪಂಚದಾದ್ಯಂತ ಹರಡಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಹಾಗೆಯೇ ಶ್ರೀಲ ಪ್ರಭುಪಾದರ ಬೋಧನೆಗಳ ವಾಣಿ-ದೇವಾಲಯವು ಅವರ ಇಸ್ಕಾನ್ ಧ್ಯೇಯವನ್ನು ಪ್ರಪಂಚದಾದ್ಯಂತ ಹರಡಲು ಬಲಪಡಿಸುತ್ತದೆ, ಮತ್ತು ಮುಂಬರುವ ಸಾವಿರಾರು ವರ್ಷಗಳು ಶ್ರೀಲ ಪ್ರಭುಪಾದರ ಸಹಜ ಸ್ಥಾನವನ್ನು ಸ್ಥಾಪಿಸುತ್ತದೆ.

ವಾಣಿಸೇವಾ - ಸೇವೆ ಮಾಡಲು ಪ್ರಾಯೋಗಿಕ ಕ್ರಮ ತೆಗೆದುಕೊಳ್ಳುವುದು

  • ವಾಣಿಪೀಡಿಯಾವನ್ನು ಪೂರ್ಣಗೊಳಿಸುವುದು ಎಂದರೆ ಶ್ರೀಲ ಪ್ರಭುಪಾದರ ಬೋಧನೆಗಳನ್ನು ಯಾವುದೇ ಆಧ್ಯಾತ್ಮಿಕ ಗುರುವಿನ ಕಾರ್ಯಗಳಿಗಾಗಿ ಯಾರೂ ಮಾಡದ ರೀತಿಯಲ್ಲಿ ಪ್ರಸ್ತುತಪಡಿಸುವುದು. ಈ ಪವಿತ್ರ ಕಾರ್ಯಾದಲ್ಲಿ ಭಾಗವಹಿಸಲು ನಾವು ಎಲ್ಲರನ್ನು ಆಹ್ವಾನಿಸುತ್ತೇವೆ. ಒಟ್ಟಾಗಿ ನಾವು ಶ್ರೀಲ ಪ್ರಭುಪಾದರಿಗೆ ವೆಬ್ ಮೂಲಕ ಮಾತ್ರ ಸಾಧ್ಯವಿರುವ ಪ್ರಮಾಣದಲ್ಲಿ ಜಗತ್ತಿನ ಒಂದು ಅನನ್ಯ ಅನುಭವವನ್ನು ನೀಡುತ್ತೇವೆ.
  • ಅನೇಕ ಭಾಷೆಗಳಲ್ಲಿ ಶ್ರೀಲ ಪ್ರಭುಪಾದರ ಬೋಧನೆಗಳ ವಾಣಿಪೀಡಿಯಾವನ್ನು ಅಗ್ರ ವಿಶ್ವಕೋಶವನ್ನಾಗಿ ಮಾಡುವುದು ನಮ್ಮ ಆಸೆ. ಅನೇಕ ಭಕ್ತರ ಪ್ರಾಮಾಣಿಕ ಬದ್ಧತೆ, ತ್ಯಾಗ, ಮತ್ತು ಬೆಂಬಲದಿಂದ ಮಾತ್ರ ಇದು ಸಂಭವಿಸುತ್ತದೆ. ಇಲ್ಲಿಯವರೆಗೆ, 1,220ಕ್ಕೂ ಹೆಚ್ಚು ಭಕ್ತರು 93 ಭಾಷೆಗಳಲ್ಲಿ ವಾಣಿಸೋರ್ಸ್ ಮತ್ತು ವಾಣಿ-ಕೋಟ್ಸ್, ಮತ್ತು ಅನುವಾದಗಳನ್ನು ನಿರ್ಮಿಸುವಲ್ಲಿ ಭಾಗವಹಿಸಿದ್ದಾರೆ. ಈಗ ವಾಣಿ-ಕೋಟ್ಸ್ಗಳನ್ನು ಪೂರ್ಣಗೊಳಿಸಲು, ಮತ್ತು ವಾಣಿಪೀಡಿಯಾ ಲೇಖನಗಳು, ವಾಣಿ-ಬುಕ್ಸ್, ವಾಣಿಮೀಡಿಯಾ ಮತ್ತು ವಾಣಿವರ್ಸಿಟಿ ಕೋರ್ಸ್ಗಳನ್ನು ನಿರ್ಮಿಸಲು ಈ ಕೆಳಗಿನ ಕೌಶಲ್ಯಗಳನ್ನು ಹೊಂದಿರುವ ಭಕ್ತರಿಂದ ನಮಗೆ ಹೆಚ್ಚಿನ ಬೆಂಬಲ ಬೇಕು:
• ಆಡಳಿತ
• ಸಂಕಲನೆ
• ಪಠ್ಯಕ್ರಮ ರಚನೆ
• ವಿನ್ಯಾಸ ಮತ್ತು ಪ್ರದರ್ಶನ
• ಹಣಕಾಸು
• ನಿರ್ವಹಣೆ
• ಪ್ರಚಾರ
• ಸಂಶೋಧನೆ
• ಸರ್ವರ್ ನಿರ್ವಹಣೆ
• ಸೈಟ್ ಅಭಿವೃದ್ಧಿ
• ಸಾಫ್ಟ್ವೇರ್ ಪ್ರೊಗ್ರಾಮಿಂಗ್
• ಬೋಧನೆ
• ತಾಂತ್ರಿಕ ಸಂಪಾದನೆ
• ತರಬೇತಿ
• ಅನುವಾದ
• ಬರವಣಿಗೆ
  • ವಾಣಿಸೇವಕರು ತಮ್ಮ ಮನೆಗಳು, ದೇವಾಲಯಗಳು, ಮತ್ತು ಕಚೇರಿಗಳಿಂದ ತಮ್ಮ ಸೇವೆಯನ್ನು ನೀಡುತ್ತಾರೆ, ಅಥವಾ ಅವರು ಶ್ರೀಧಮ್ ಮಾಯಾಪುರ ಅಥವಾ ರಾಧದೇಶದಲ್ಲಿ ಕೆಲವು ಅವಧಿಗೆ ಪೂರ್ಣ ಸಮಯ ನಮ್ಮೊಂದಿಗೆ ಸೇರಬಹುದು.

ದಾನ

  • ಕಳೆದ 12 ವರ್ಷಗಳಿಂದ ವಾಣಿಪೀಡಿಯಾವನ್ನು ಪ್ರಧಾನವಾಗಿ ಭಕ್ತಿವೇದಾಂತ ಗ್ರಂಥಾಲಯದ ಪುಸ್ತಕ ವಿತರಣೆಯಿಂದ ಹಣಕಾಸು ಒದಗಿಸಲಾಗಿದೆ. ಅದರ ನಿರ್ಮಾಣವನ್ನು ಮುಂದುವರಿಸಲು, ವಾಣಿಪೀಡಿಯಾಗೆ ಬಿ.ಎಲ್.ಎಸ್ ನ ಪ್ರಸ್ತುತ ಸಾಮರ್ಥ್ಯವನ್ನು ಮೀರಿ ಹಣದ ಅಗತ್ಯವಿದೆ. ಒಮ್ಮೆ ಪೂರ್ಣಗೊಂಡ ನಂತರ, ವಾಣಿಪೀಡಿಯಾದ ಅನೇಕ ತೃಪ್ತಿಕರ ಸಂದರ್ಶಕರ ಸಣ್ಣ ದೇಣಿಗೆಗಳಿಂದ ಉಳಿಸಲ್ಪಡುತ್ತದೆ. ಆದರೆ ಸದ್ಯಕ್ಕೆ, ಈ ಉಚಿತ ವಿಶ್ವಕೋಶವನ್ನು ನಿರ್ಮಿಸುವ ಆರಂಭಿಕ ಹಂತಗಳನ್ನು ಪೂರ್ಣಗೊಳಿಸಲು, ಹಣಕಾಸಿನ ನೆರವು ನೀಡುವ ಸೇವೆ ನಿರ್ಣಾಯಕವಾಗಿದೆ.
  • ವಾಣಿಪೀಡಿಯಾ ಬೆಂಬಲಿಗರು ಈ ಕೆಳಗಿನ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು

ಪ್ರಾಯೋಜಕರು: ಒಬ್ಬ ವ್ಯಕ್ತಿ ಅವನು ಬಯಸುವ ಯಾವುದೇ ಮೊತ್ತ ದಾನ ಮಾಡುತ್ತಾನೆ

ಬೆಂಬಲಿಸುವ ಪೋಷಕ: ಕನಿಷ್ಠ 81 ಯುರೋಗಳನ್ನು ದಾನ ಮಾಡುವ ಒಬ್ಬ ವ್ಯಕ್ತಿ ಅಥವಾ ಕಾನೂನು ಘಟಕವು

ಆಧಾರ ಪೋಷಕ: 90 ಯುರೋಗಳ 9 ಮಾಸಿಕ ಪಾವತಿಗಳನ್ನು ಮಾಡುವ ಸಾಧ್ಯತೆಯೊಂದಿಗೆ ಕನಿಷ್ಠ 810 ಯುರೋಗಳನ್ನು ದಾನ ಮಾಡುವ ಒಬ್ಬ ವ್ಯಕ್ತಿ ಅಥವಾ ಕಾನೂನು ಘಟಕವು

ಅಭಿವೃದ್ಧಿ ಪೋಷಕ: 900 ಯುರೋಗಳ 9 ವಾರ್ಷಿಕ ಪಾವತಿಗಳನ್ನು ಮಾಡುವ ಸಾಧ್ಯತೆಯೊಂದಿಗೆ ಕನಿಷ್ಠ 8100 ಯುರೋಗಳನ್ನು ದಾನ ಮಾಡುವ ಒಬ್ಬ ವ್ಯಕ್ತಿ ಅಥವಾ ಕಾನೂನು ಘಟಕವು

ಸ್ಥಾಪನಾ ಪೋಷಕ: 9000 ಯುರೋಗಳ 9 ವಾರ್ಷಿಕ ಪಾವತಿಗಳನ್ನು ಮಾಡುವ ಸಾಧ್ಯತೆಯೊಂದಿಗೆ ಕನಿಷ್ಠ 81000 ಯುರೋಗಳನ್ನು ದಾನ ಮಾಡುವ ಒಬ್ಬ ವ್ಯಕ್ತಿ ಅಥವಾ ಕಾನೂನು ಘಟಕವು

  • ದೇಣಿಗೆಗಳನ್ನು received online ಮೂಲಕ, ಅಥವಾ ನಮ್ಮ PayPal ಖಾತೆ [email protected] ಮೂಲಕ ನೀಡಬಹುದು. ನೀವು ಇನ್ನೊಂದು ವಿಧಾನವನ್ನು ಬಯಸಿದರೆ, ಅಥವಾ ದಾನ ಮಾಡುವ ಮೊದಲು ಏನಾದರು ಪ್ರಶ್ನೆಗಳಿದ್ದರೆ, ನಮಗೆ [email protected] ಗೆ ಇಮೇಲ್ ಮಾಡಿ.

ನಾವು ಕೃತಜ್ಞರು - ಪ್ರಾರ್ಥನೆಗಳು

ನಾವು ಕೃತಜ್ಞರು

ಶ್ರೀಲ ಪ್ರಭುಪಾದ, ನಿಮಗೆ ಧನ್ಯವಾದಗಳು
ನಿಮ್ಮ ಸೇವೆ ಮಾಡಲು ನಮಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ.
ನಿಮ್ಮ ಧ್ಯೇಯದಲ್ಲಿ ನಿಮ್ಮನ್ನು ಮೆಚ್ಚಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ.
ನಿಮ್ಮ ಬೋಧನೆಗಳು ಲಕ್ಷಾಂತರ ಅದೃಷ್ಟಶಾಲಿ ಆತ್ಮಗಳಿಗೆ ಆಶ್ರಯ ನೀಡಲಿ.
ಆತ್ಮೀಯ ಶ್ರೀಲ ಪ್ರಭುಪಾದ,
ದಯವಿಟ್ಟು ನಮ್ಮನ್ನು ಸಬಲೀಕರಿಸಿ
ಎಲ್ಲಾ ಉತ್ತಮ ಗುಣಗಳು ಮತ್ತು ಸಾಮರ್ಥ್ಯಗಳೊಂದಿಗೆ
ಮತ್ತು ನಮಗೆ ದೀರ್ಘಾವಧಿ, ನಿಷ್ಠಾವಂತ ಭಕ್ತರು ಮತ್ತು ಸಂಪನ್ಮೂಲಗಳನ್ನು
ಕಳುಹಿಸುವುದನ್ನು ಮುಂದುವರಿಸಿ
ನಿಮ್ಮ ಅದ್ಭುತವಾದ ವಾಣಿ-ದೇವಾಲಯವನ್ನು ಯಶಸ್ವಿಯಾಗಿ ನಿರ್ಮಿಸಲು
ಎಲ್ಲರ ಅನುಕೂಲಕ್ಕಾಗಿ.
ಆತ್ಮೀಯ ಶ್ರೀ ಶ್ರೀ ಪಂಚ ತತ್ವ,
ದಯವಿಟ್ಟು ಶ್ರೀ ಶ್ರೀ ರಾಧಾ ಮಾಧವ ಅವರ ಆತ್ಮೀಯ ಭಕ್ತರಾಗಲು ನಮಗೆ ಸಹಾಯ ಮಾಡಿ
ಮತ್ತು ಶ್ರೀಲ ಪ್ರಭುಪಾದ ಮತ್ತು ನಮ್ಮ ಗುರು ಮಹಾರಾಜರ ಆತ್ಮೀಯ ಶಿಷ್ಯರಾಗಲು
ಕಠಿಣ ಮತ್ತು ಚುರುಕಾಗಿ ಕೆಲಸ ಮಾಡಲು ಅನುಕೂಲವಾಗುವಂತೆ ಮುಂದುವರಿಸುವುದರ ಮೂಲಕ
ಶ್ರೀಲ ಪ್ರಭುಪಾದರ ಧ್ಯೇಯದಲ್ಲಿ
ತನ್ನ ಭಕ್ತರ ಸಂತೋಷಕ್ಕಾಗಿ.

ಈ ಪ್ರಾರ್ಥನೆಗಳನ್ನು ಸ್ವೀಕರಿಸಿದ್ದಕ್ಕಾಗಿ ಧನ್ಯವಾದಗಳು.

ಟಿಪ್ಪಣಿ

ಶ್ರೀಲ ಪ್ರಭುಪಾದ, ಶ್ರೀ ಶ್ರೀ ಪಂಚ ತತ್ತ್ವ, ಮತ್ತು ಶ್ರೀ ಶ್ರೀ ರಾಧಾ ಮಾಧವ ಅವರ ಸಶಕ್ತ ಕೃಪೆಯಿಂದ ಮಾತ್ರ ನಾವು ಈ ಕಠಿಣ ಕಾರ್ಯವನ್ನು ಸಾಧಿಸಬಹುದೆಂದು ಆಶಿಸಬಹುದು. ಹೀಗೆ ನಾವು ಅವರ ಕರುಣೆಗಾಗಿ ನಿರಂತರವಾಗಿ ಪ್ರಾರ್ಥಿಸುತ್ತೇವೆ.


ಇತರ ಸಂಪನ್ಮೂಲಗಳು

hare kṛṣṇa hare kṛṣṇa - kṛṣṇa kṛṣṇa hare hare - hare rāma hare rāma - rāma rāma hare hare