KN/670122 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಸಂಪೂರ್ಣವಾಗಿ ನೀವು ಧ್ಯಾನ ಮಾಡಬೇಕು. ನಂತರ ಧ್ಯಾನ ಮಾಡಿ, ನೀವು ಹಠ -ಯೋಗವನ್ನು ಅಭ್ಯಾಸ ಮಾಡಬೇಕು. ಈ ಹಠ-ಯೋಗದ ಅಭ್ಯಾಸವು ದೇಹಕ್ಕೆ ಹೆಚ್ಚು ಗೀಳು ಹೊಂದಿರುವ ವ್ಯಕ್ತಿಗಳಿಗೋಸ್ಕರವಾಗಿದೆ. ಯಾರೊಬ್ಬರು "ನಾನು ಈ ದೇಹ," ಎಂದು ಬಹಳ ಬಲವಾಗಿ ವಿಶ್ವಾಸ ಹೊಂದಿರುವವರೋ, ಅಂತಹವರಿಗೆ, ಅಂತಹ ಮೂರ್ಖ ಜೀವಿಗಳಿಗೆ "ನೀವು ವ್ಯಾಯಾಮ ಮಾಡಿ ಮತ್ತು ನಿಮ್ಮೊಳಗೆ ಏನಿದೆಯೆಂದು ನೋಡಲು ಪ್ರಯತ್ನಿಸಿ" ಎಂದು ಶಿಫಾರಸು ಮಾಡಲಾಗಿದೆ. ಧ್ಯಾನ. ಆದರೆ ಯಾರೊಬ್ಬನು "ನಾನು ಈ ದೇಹವಲ್ಲ" ಎಂದು ತಿಳಿದಿರುವವನೋ ಅವನು ಅದನ್ನು ತಕ್ಷಣ ಪ್ರಾರಂಭಿಸುತ್ತಾನೆ "ನಾನು ಈ ದೇಹವಲ್ಲ; ನಾನು ಶುದ್ಧ ಆತ್ಮ, ಮತ್ತು ನಾನು ಸರ್ವೋಚ್ಚ ಭಗವಂತನ ಭಾಗ ಮತ್ತು ಅಂಶವಾಗಿದ್ದೇನೆ". ಆದ್ದರಿಂದ ನನ್ನ ಕರ್ತವ್ಯವು ಸರ್ವೋಚ್ಚ ಭಗವಂತನ ಸೇವೆ ಮಾಡುವುದು. ಇದು ಅತಿ ಸರಳವಾದ ಸತ್ಯ.
670122 - ಉಪನ್ಯಾಸ ಚೈ. ಚ. ಮಧ್ಯ ೨೫.೩೧-೩೮ - ಸ್ಯಾನ್ ಫ್ರಾನ್ಸಿಸ್ಕೋ