KN/680616c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಚಿನ್ನದ ಪಂಜರದಲ್ಲಿ, ಒಂದು ಪಕ್ಷಿ ಇದೆ. ನೀವು ಪಕ್ಷಿಗೆ ಯಾವುದೇ ಆಹಾರವನ್ನು ನೀಡದಿದ್ದರೆ ಮತ್ತು ಪಂಜರವನ್ನು ಸುಮ್ಮನೆ ಬಹಳ ಚೆನ್ನಾಗಿ ತೊಳೆ್ದರೆ, ಓಹ್, ಅಲ್ಲಿ ಯಾವಾಗಲೂ, (ಪಕ್ಷಿಯನ್ನು ಅನುಕರಿಸುತ್ತಾ) 'ಚಿ ಚಿ ಚಿ ಚಿ'. ಏಕೆ ? ನಿಜವಾದ ಪಕ್ಷಿಯನ್ನು ನಿರ್ಲಕ್ಷಿಸಲಾಗಿದೆ. ಪಂಜರವು ಸುಮ್ಮನೆ ಹೊರಗಿನ ಹೊದಿಕೆ. ಅದೇ ರೀತಿ, ನಾನು ಜೀವಾತ್ಮ. ಅದನ್ನು ನಾನು ಮರೆತಿದ್ದೇನೆ. ಅಹಂ ಬ್ರಹ್ಮಾಸ್ಮಿ, ನಾನು ಬ್ರಹ್ಮನ್. ನಾನು ಈ ದೇಹವಲ್ಲ, ಮನಸ್ಸಲ್ಲ. ಮೊದಲನೆಯದಾಗಿ ಅವರು ದೇಹವನ್ನು ಸುಂದರವಾಗಿ ಇಡಲು ಪ್ರಯತ್ನಿಸುತ್ತಾರೆ.ಇದು ವಸ್ತು ನಾಗರಿಕತೆ. ಬಹಳ ಸುಂದರವಾದ ಬಟ್ಟೆ, ತುಂಬಾ ಸುಂದರವಾದ ಆಹಾರ, ಬಹಳ ಸುಂದರವಾದ ಮನೆ, ಬಹಳ ಸುಂದರವಾದ ಕಾರು ಅಥವಾ ಬಹಳ ಸುಂದರವಾದ ಇಂದ್ರಿಯ ಭೋಗ-ಎಲ್ಲವೂ ತುಂಬಾ ಚೆನ್ನಾಗಿದೆ. ಆದರೆ ಅವೆಲ್ಲ ಈ ದೇಹಕ್ಕೆ. ಮತ್ತು ಒಬ್ಬನು ಯಾವಾಗ ಈ ಸುಂದರವಾದ ವ್ಯವಸ್ಥೆಗಳಿಂದ ನಿರಾಶೆಗೊಳ್ಳುತ್ತಾನೋ, ಆಗ ಅವನು ಮನಸ್ಸಿನ ಶಾಂತಿಯನ್ನು ಹುಡುಕುತ್ತಾನೆ : ಕವನ, ಮಾನಸಿಕ ಊಹಾಪೋಹ, ಎಲ್ಎಸ್ಡಿ, ಗಾಂಜಾ, ಕುಡಿಯುವುದು ಮತ್ತು ಅನೇಕ ವಿಷಯಗಳು. ಇವೆಲ್ಲವೂ ಮಾನಸಿಕವಾಗಿವೆ. ವಾಸ್ತವವಾಗಿ, ಸಂತೋಷವು ದೇಹದ್ಲಲೂ ಇಲ್ಲ, ಅಥವಾ ಮನಸ್ಸಿನಲ್ಲೂ ಇಲ್ಲ. ನಿಜವಾದ ಸಂತೋಷವು ಆತ್ಮದಲ್ಲಿದೆ.
680616 - ಉಪನ್ಯಾಸ ಶ್ರೀ.ಭಾ. ೦೭.೦೬.೦೩ - ಮಾಂಟ್ರಿಯಲ್