KN/760214 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಗುರು ಯಾರು, ಚೈತನ್ಯ ಮಹಾಪ್ರಭು ಸೂಚಿಸಿದಂತೆ, ಅದು ತುಂಬಾ ಕಷ್ಟವಲ್ಲ, ಯಾರು ಗುರು ಎಂಬುದು. ಚೈತನ್ಯ ಮಹಾಪ್ರಭು ಹೇಳಿದರು:
ಆಮಾರ ಆಜ್ಞಾಯ ಗುರು ಹನಾ ತಾರ ಏ ದೇಶ
ಯಾರೇ ದೇಖ, ತಾರೇ ಕಹ ಕೃಷ್ಣ ಉಪದೇಶ
(ಚೈ.ಚ ಮಧ್ಯ 7.128)

ಅವನು ಗುರು. ಚೈತನ್ಯ ಮಹಾಪ್ರಭು ಅವರ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವವನು, ಮತ್ತು ಅವರನ್ನು ಅನುಸರಿಸುತ್ತ, ಕೃಷ್ಣನ ಬೋಧನೆಗಳನ್ನು, ಅವನು ಹೇಳಿರುವಂತೆ, ಇತರರಿಗೆ ತಲುಪಿಸಿದರೆ ಆಗ ಅವನೂ ಗುರುವಾಗುತ್ತಾನೆ. ಇದು ಕಷ್ಟವೇನಲ್ಲ. ಚೈತನ್ಯ ಮಹಾಪ್ರಭು ಎಲ್ಲರಿಗೂ ಆದೇಶಿಸಿದ್ದಾರೆ. ಆದ್ದರಿಂದ, ನಮ್ಮ ಪ್ರಕ್ರಿಯೆಯು ಚೈತನ್ಯ ಮಹಾಪ್ರಭುವನ್ನು ಅನುಸರಿಸುವುದು, ತದನಂತರ ಕೃಷ್ಣನ ಆದೇಶವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು.

760214 - ಉಪನ್ಯಾಸ SB 07.09.07 - ಮಾಯಾಪುರ್