KN/Prabhupada 1072 - ಈ ಭೌತಿಕ ಪ್ರಪಂಚವನ್ನು ಬಿಡುವುದು ಮತ್ತು ಆಧ್ಯಾತ್ಮಿಕ ಪ್ರಪಂಚದಲ್ಲಿ ಶಾಶ್ವತ ಜೀವನವನ್ನು ಪಡೆಯುವುದು



660219-20 - Lecture BG Introduction - New York

ಭಗವಂತ ಕಾರಣಾರಹಿತ ಕೃಪೆಯಿಂದ ತನ್ನ ಶ್ಯಾಮಸುಂದರ ರೂಪವನ್ನು ತೋರಿಸುತ್ತಾನೆ ದುರಾದೃಷ್ಟವಶಾತ್ ಕಡಿಮೆ ಬುದ್ಧಿಯುಳ್ಳ ಜನರು ಅವಜಾನಂತಿ ಮಾಂ ಮೂಢ (ಭ ಗೀತೆ 9.11) ಭಗವಂತನು ನಮ್ಮಲ್ಲಿ ಒಬ್ಬನಾಗಿ ಮಾನವನಂತೆ ಲೀಲೆಗಳನ್ನು ಮೆರೆಯುವುದರಿಂದ ಹಾಸ್ಯ ಮಾಡುತ್ತಾರೆ. ಆದರೆ ನಾವು ಅವನು ನಮ್ಮಲ್ಲಿ ಒಬ್ಬನು ಎಂದು ಪರಿಗಣಿಸಬಾರದು. ಅವನು ಸರ್ವಶಕ್ತನಾದ್ದರಿಂದಲೇ ನಮ್ಮ ಮುಂದೆ ತನ್ನ ನಿಜವಾದ ರೂಪವನ್ನು ಮೆರೆದು ತನ್ನ ಲೀಲೆಗಳನ್ನು ತೋರುತ್ತಾನೆ. ಇವು ಅವನ ನಿವಾಸದಲ್ಲಿನ ಲೀಲೆಗಳ ಪ್ರತಿರೂಪಗಳಾಗಿರುತ್ತವೆ. ಭಗವಂತನ ನಿವಾಸದಲ್ಲಿ (ಬ್ರಹ್ಮ ಜ್ಯೋತಿ) ಅಸಂಖ್ಯಾತ ಗ್ರಹಗಳಿವೆ. ಇದು ಸೂರ್ಯನ ಕಿರಣಗಳಲ್ಲಿ ಅಸಂಖ್ಯಾತ ಗ್ರಹಗಳು ತೇಲುತ್ತಿರುವಂತೆಯೇ. ಆಧ್ಯಾತ್ಮಿಕ ಗಗನದ ಪ್ರಜ್ವಲಿಸುವ ಕಿರಣಗಳಲ್ಲಿ ಅಸಂಖ್ಯಾತ ಗ್ರಹಗಳು ತೇಲುತ್ತಿರುತ್ತವೆ. ಆನಂದ ಚಿನ್ಮಯ ರಸಪ್ರತಿಭಾವಿತಾಭಿಸ್ (ಬ್ರ ಸಂ 5.37) ಬ್ರಹ್ಮಜ್ಯೋತಿಯು ಪರಮ ನಿವಾಸವಾದ ಕೃಷ್ಣಲೋಕದಿಂದ ಹೊರಸೂಸುತ್ತದೆ. ಅವು ಆನಂದ ಚಿನ್ಮಯ, ಜಡ ಗ್ರಹಗಳಲ್ಲ. ಆದ್ದರಿಂದ ಭಗವಂತ ನ ತದ್ ಭಾಸಯತೆ ಸೂರ್ಯೋ ನ ಶಶಾಂಕೊ ನ ಪಾವಕಃ ಯದ್ ಗತ್ವಾ ನಾ ನಿವರ್ತಾಂತೆ ತದ್ ಧಾಮ ಪರಮಂ ಮಮ ಎಂದು ಹೇಳುತ್ತಾನೆ. ಈ ಆಧ್ಯಾತ್ಮಿಕ ಗಗನವನ್ನು ಸೇರಬಲ್ಲ ಯಾರೇ ಆದರೂ ಮರಳಿ ಭೌತಿಕ ಗಗನಕ್ಕೆ ಬರಬೇಕಾಗಿಲ್ಲ. ನಾವು ಎಲ್ಲಿಯವರೆಗೆ ಐಹಿಕ ಗಗನದಲ್ಲಿರುವೆವೋ, ಅದು ಚಂದ್ರ ಗ್ರಹವೇ ಆಗಿದ್ದರೂ (ಚಂದ್ರ ಅತ್ಯಂತ ಹತ್ತಿರವಾದ ಗ್ರಹ) , ಅತ್ಯುನ್ನತ ಗ್ರಹವಾದ ಬ್ರಹ್ಮಲೊಕವಾಗಿದ್ದರೂ, ಅಲ್ಲಿಯೂ ಕೂಡಾ ಭೌತಿಕ ಕಷ್ಟಗಳಾದ ಹುಟ್ಟು, ಸಾವು, ಮುಪ್ಪು, ಮತ್ತು ರೋಗಗಳನ್ನು ಕಾಣುತ್ತೇವೆ. ಐಹಿಕ ವಿಶ್ವದ ಯಾವ ಗ್ರಹಗಳೂ ಈ ನಾಲ್ಕು ಕಷ್ಟಗಳಿಂದ ಹೊರತಾಗಿಲ್ಲ. ಭಗವಂತ ಭಗವದ್ಗೀತೆಯಲ್ಲಿ ಆಬ್ರಹ್ಮ ಭುವನಾರ್ ಲೋಕ ಪುನರಾವರ್ತೀನೋ ಅರ್ಜುನ (ಭ ಗೀತೆ 8.16) ಎಂದು ಹೇಳುತ್ತಾನೆ. ಜೀವಿಗಳು ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಪ್ರಯಾಣಿಸುತ್ತಿದ್ದಾರೆ. ನಾವು ಸ್ಪುಟ್ನಿಕ್ ನಂತಹ ಯಾಂತ್ರಿಕ ಏರ್ಪಾಟಿನಿಂದ ಬೇರೆ ಗ್ರಹಕ್ಕೆ ಹೋಗಬಹುದು ಎಂದೇನೂ ಅಲ್ಲ. ಬೇರೆ ಗ್ರಹಗಳಿಗೆ ಹೋಗಲು ಇಚ್ಛಿಸುವವರಿಗೆ ಒಂದು ಕ್ರಮವಿದೆ ಯಾಂತಿ ದೇವಾವ್ರತಾ ದೇವಾನ್ ಪಿತೃನ ಯಾಂತಿ ಪಿತೃವ್ರತಾಹ (ಭ ಗೀತೆ 9.25) ನಾವು ಬೇರೆ ಗ್ರಹಗಳಿಗೆ ಹೋಗಲು ಇಚ್ಚಿಸಿದರೆ (ಚಂದ್ರ ಗ್ರಹ), ಸ್ಪುಟ್ನಿಕ್ ನಿಂದ ಹೋಗುವ ಅಗತ್ಯವಿಲ್ಲ. ಗೀತೆ ಯಾಂತಿ ದೇವಾವ್ರತಾ ದೇವಾನ್ ಆದೇಶಿಸುತ್ತದೆ. ಸೂರ್ಯ, ಚಂದ್ರ, ಅಥವಾ ಉನ್ನತ ಗ್ರಹಗಳಿಗೆ ಸ್ವರ್ಗಲೋಕವೆಂದು ಹೆಸರು. ಗ್ರಹಗಳಲ್ಲಿ ಭೂಲೋಕ, ಭುವರ್ ಲೋಕ, ಸ್ವರ್ಗ ಲೋಕ ಎಂಬ ಹಂತಗಳಿವೆ. ದೇವಲೋಕ, ದೇವಲೋಕಕ್ಕೆ ಪ್ರಯಾಣಮಾಡುವುದು ಹೇಗೆಂಬುವುದನ್ನು ಗೀತೆ ಸರಳ ಸೂತ್ರದಿಂದ ತಿಳಿಸುತ್ತದೆ. ಯಾಂತಿ ದೇವಾ ವ್ರತಾ ದೇವಾನ್ , ಯಾಂತಿ ದೇವಾ ವ್ರತಾ ದೇವಾನ್ ದೇವಾವ್ರತಾ, ನಾವು ನಿರ್ದಿಷ್ಟ ಗ್ರಹದ ದೇವತೆಯನ್ನು ಪೂಜಿಸಿದರೆ ಆ ನಿರ್ದಿಷ್ಟ ಗ್ರಹಕ್ಕೆ ಹೋಗಬಹುದು. ನಾವು ಸೂರ್ಯ ಗ್ರಹಕ್ಕೋ, ಚಂದ್ರ ಗ್ರಹಕ್ಕೋ, ಅಥವಾ ಸ್ವರ್ಗಲೋಕಕ್ಕೋ ಹೋಗಬಹುದು. ಆದರೆ ಗೀತೆಯು ಐಹಿಕ ಪ್ರಪಂಚದ ಈ ಯಾವುದೇ ಗ್ರಹಗಳಿಗೆ ಹೋಗಲು ಪ್ರೇರೇಪಿಸುವುದಿಲ್ಲ. ನಾವು ಅತ್ಯುನ್ನತವಾದ ಬ್ರಹ್ಮಲೊಕಕ್ಕೆ ಹೋದರೂ ಆಧುನಿಕ ವಿಜ್ಞಾನಿಗಳು ಬ್ರಹ್ಮಲೋಕವನ್ನು ಸ್ಪುಟ್ನಿಕ್ ನಿಂದ 40000 ವರ್ಷಗಳು ಪ್ರಯಾಣಿಸಿದರೆ ಸಿಗುತ್ತದೆ ಎಂದು ಲೆಕ್ಕಹಾಕಿದ್ದಾರೆ. ಯಾರಿಗೂ 40000 ವರ್ಷಗಳು ಬದುಕಲು ಸಾಧ್ಯವಿಲ್ಲ. ಆದರೆ ಒಬ್ಬ ಭಕ್ತ ನಿರ್ದಿಷ್ಟ ದೇವತೆಯನ್ನು ಪೂಜಿಸಿ ನಿರ್ದಿಷ್ಟ ಗ್ರಹಕ್ಕೆ ಹೋಗಬಹುದು. ಗೀತೆಯಲ್ಲಿ ಹೇಳಿದಂತೆ ಯಾಂತಿ ದೇವಾವ್ರತಾ ದೇವಾನ್ ಪಿತೃನ ಯಾಂತಿ ಪಿತೃವ್ರತಾಹ ಅದೇ ರೀತಿಯಲ್ಲಿ ಪಿತೃ ಲೋಕವಿದೆ. ಆದರೆ ಕೃಷ್ಣನ ಲೋಕ ಪರಮ ಉನ್ನತವಾದದ್ದು. ಆಧ್ಯಾತ್ಮಿಕ ಗಗನದಲ್ಲಿ ಅಸಂಖ್ಯಾತ ಸನಾತನ ಗ್ರಹಗಳಿವೆ. ಶಾಶ್ವತ ಗ್ರಹಗಳಿವೆ, ಅವು ಎಂದಿಗೂ ನಾಶವಾಗುವುದಿಲ್ಲ. ಆದರೆ ಈ ಎಲ್ಲಾ ಆಧ್ಯಾತ್ಮಿಕ ಗ್ರಹಗಳಲ್ಲಿ ಗೋಲೋಕ ವೃಂದಾವನವೆಂಬ ಮೂಲಗ್ರಹವು ಪರಮೋನ್ನತವಾದದ್ದು. ಗೀತೆಯಲ್ಲಿ ಈ ಎಲ್ಲಾ ಮಾಹಿತಿಗಳಿವೆ ಮತ್ತು ಇದನ್ನು ಉಪಯೋಗಿಸಿಕೊಂಡು ನಾವು ಅಶಾಶ್ವತ ಭೌತಿಕ ಪ್ರಪಂಚದಿಂದ ಶಾಶ್ವತವಾದ ಧಾಮದಲ್ಲಿ ಶಾಶ್ವತವಾದ ಜೀವನವನ್ನು ಪಡೆಯುವ ಅವಕಾಶ ಕೂಡ ನಮಗೆ ಕೊಟ್ಟಿದ್ದಾರೆ.