KN/681004 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣ- ಭಕ್ತಿ -ರಸ -ಭಾವಿತಾ ಮತಿಹ್. ಮತಿಹ್ ಎಂದರೆ ಬುದ್ಧಿವಂತಿಕೆ ಅಥವಾ ಮನಸ್ಸಿನ ಸ್ಥಿತಿ, ಅಂದರೆ 'ನಾನು ಕೃಷ್ಣನಿಗೆ ಸೇವೆ ಸಲ್ಲಿಸುತ್ತೇನೆ'. 'ಈ ಮನಸ್ಸಿನ ಸ್ಥಿತಿಯನ್ನು ನೀವು ಎಲ್ಲಿಯಾದರೂ ಖರೀದಿಸಬಹುದಾದರೆ, ದಯವಿಟ್ಟು ತಕ್ಷಣ ಖರೀದಿಸಿ.' ನಂತರ ಮುಂದಿನ ಪ್ರಶ್ನೆ, 'ಸರಿ, ನಾನು ಖರೀದಿಸುತ್ತೇನೆ. ಬೆಲೆ ಏನು? ನಿಮಗೆ ಗೊತ್ತಾ?' 'ಹೌದು, ಬೆಲೆ ಏನು ಎಂದು ನನಗೆ ತಿಳಿದಿದೆ'. 'ಆ ಬೆಲೆ ಏನು?' ಲೌಲ್ಯಮ್, 'ಸರಳವಾಗಿ ನಿಮ್ಮ ತವಕ, ಅಷ್ಟೆ'. ಲೌಲ್ಯಮ್ ಏಕಂ ಮೂಲ್ಯಮ್. 'ಆಹ್, ನಾನು ಅದನ್ನು ಹೊಂದಬಹುದು.' ಇಲ್ಲ. ನಾ ಜನ್ಮಾ ಕೋಟಿಭಿಸ್ ಸುಕೃತಿಭಿರ್ ಲಭ್ಯತೆ(ಚೈ. ಚ ಮದ್ಯ ೮.೭೦). ಈ ಅತ್ಯಾಸಕ್ತಿ, 'ನಾನು ಕೃಷ್ಣನನ್ನು ಹೇಗೆ ಪ್ರೀತಿಸಬಹುದು ?' ಇದು ಅನೇಕ, ಅನೇಕ ಜನನಗಳ ನಂತರವೂ ಲಭ್ಯವಿಲ್ಲ. ಆ ಆತಂಕದ ಒಂದು ಚಿಟಿಕೆ ಸಹ ನಿಮ್ಮಲ್ಲಿದ್ದರೆ, 'ನಾನು ಕೃಷ್ಣನಿಗೆ ಹೇಗೆ ಸೇವೆ ಸಲ್ಲಿಸಬಹುದು?' ನೀವು ಅತ್ಯಂತ ಅದೃಷ್ಟಶಾಲಿ ಎಂದು ನೀವು ತಿಳಿದಿರಬೇಕು. ಒಂದು ಚಿಟಿಕೆಯಷ್ಟು ಮಾತ್ರ, ಲೌಲ್ಯ, ಈ ಆತಂಕ, 'ನಾನು ಕೃಷ್ಣನಿಗೆ ಹೇಗೆ ಸೇವೆ ಸಲ್ಲಿಸಬಹುದು?' ಅದು ತುಂಬಾ ಚೆನ್ನಾಗಿದೆ. ಆಗ ಕೃಷ್ಣನು ನಿಮಗೆ ಬುದ್ಧಿವಂತಿಕೆಯನ್ನು ನೀಡುತ್ತಾನೆ."
681004 - ಉಪನ್ಯಾಸ - ಸಿಯಾಟಲ್