KN/Prabhupada 0007 - ಕೃಷ್ಣನ ಪಾಲನೆ ಬರುತ್ತದೆ



Lecture on SB 1.5.22 -- Vrndavana, August 3, 1974

ಬ್ರಹ್ಮಾನಂದ: ಬ್ರಾಹ್ಮಣನು ಯಾವುದೇ ತರಹದ ಉದ್ಯೋಗ ಸ್ವೀಕರಿಸುವಂತ್ತಿಲ್ಲ.

ಪ್ರಭುಪಾದ: ಇಲ್ಲ. ಅವನು ಉಪವಾಸದಿಂದ ಸಾಯುತ್ತಾನೆ, ಆದರೆ ಯಾವುದೇ ತರಹದ ಉದ್ಯೋಗ ಸ್ವೀಕರಿಸುವುದಿಲ್ಲ. ಅವನೇ ಬ್ರಹ್ಮಾಣ. ಕ್ಷತ್ರಿಯನು ಸಹ ಹಾಗೆ, ಮತ್ತು ವೈಶ್ಯನು ಸಹ ಹಾಗೆ. ಶೂದ್ರನು ಮಾತ್ರ ಹಾಗಲ್ಲ. ಒಬ್ಬ ವೈಶ್ಯ ಯಾವುದಾದರು ವ್ಯಾಪಾರನ್ನು ಹುಡುಕಿಕೊಳ್ಳುತ್ತಾನೆ. ಅವನು ಯಾವುದಾದರು ವ್ಯಾಪಾರವನ್ನು ಕಂಡುಹಿಡಿಯುತ್ತಾನೆ. ಒಂದು ನಿಜ ಘಟನೆಯಿದೆ. ಬಹಳ ಹಿಂದೆ ಕಲಕ್ಕತ್ತದಲ್ಲಿ, ನಂದಿ ಎಂಬ ವ್ಯಕ್ತಿಯು ಅವನ ಒಬ್ಬ ಸೇಹಿತನ ಬಳಿ ಹೋಗಿ,

"ನೀನು ನನಗೆ ಸ್ವಲ್ಪ ಹಣ ಕೊಟ್ಟರೆ, ನಾನು ಒಂದು ವ್ಯಾಪಾರ ಶುರು ಮಾಡುತ್ತೇನೆ", ಎಂದನು.

ಆಗ ಅವನು ಹೇಳಿದ, "ನೀನು ವೈಶ್ಯನೆ? ವಾಣಿಜ್ಯ?

"ಹೌದು".

"ಓ, ನೀನು ನನ್ನ ಹತ್ತಿರ ಹಣ ಕೇಳುತ್ತಿದ್ದಿಯಾ? ಹಣವು ರಸ್ತೆಯಲಿದೆ. ನೀನು ಹುಡುಕಬಹುದು."

ಆಗ ನಂದಿ ಹೇಳಿದ, "ನನಗೆ ಕಾಣಿಸುತ್ತಿಲ್ಲ."

"ನಿನಗೆ ಕಾಣಿಸುತ್ತಿಲ್ಲವೆ? ಏನದು?

"ಅದು, ಅದು ಒಂದು ಸತ್ತ ಇಲಿ."

"ಅದೇ ನಿನ್ನ ಬಂಡವಾಳ."

ನೋಡಿದಿರಾ?

ಆ ದಿನಗಳಲ್ಲಿ ಕಲಕ್ಕತ್ತದಲ್ಲಿ ಪ್ಲೆಗ್ ರೋಗ ಹರಡಿತ್ತು. ಆದ್ದರಿಂದ, ಪುರಸಭೆಯ ಘೋಷಣೆ ಪ್ರಕಾರ ಯಾವುದಾದರು ಸತ್ತ ಇಲಿಯನ್ನು ಪುರಸಭೆ ಕಚೇರಿಗೆ ತಂದು ಕೊಟ್ಟರೆ ಅವರಿಗೆ ಎರಡು ಅಣೆಗಳನ್ನು ಕೊಡಲಾಗುತ್ತಿತ್ತು. ಆಗ ಅವನು ಆ ಸತ್ತ ಇಲಿಯ ದೇಹವನ್ನು ತೆಗದುಕೊಂಡು ಪುರಸಭೆ ಕಚೇರಿಗೆ ಕೊಂಡುಹೋದನು. ಆಗ ಅವನಿಗೆ ಎರಡು ಅಣೆ ಕೊಟ್ಟರು. ಅವನು ಆ ಎರಡು ಅಣೆಯಿಂದ ಕೊಳತ ಅಡಿಕೆಯನ್ನು ಕೊಂಡುಕೊಂಡು, ಅದನ್ನು ತೊಳೆದು, ಅದನ್ನು ನಾಲ್ಕು ಅಣೆ, ಅಥವಾ ಐದು ಅಣೆಗಳಿಗೆ ಮಾರಿದ. ಇದೇ ರೀತಿಯಲ್ಲಿ, ಮತ್ತೆ, ಮತ್ತೆ, ಹೀಗೆ ವ್ಯಾಪಾರದಿಂದ ನಂದಿ ಶ್ರೀಮಂತನಾದ. ಅವನ ಕುಟುಂಬದ ಒಬ್ಬ ಸದಸ್ಯರು ನನ್ನ ದೇವಸಹೋದರ. ನಂದಿ ಕುಟುಂಬ. ಆ ನಂದಿ ಕುಟುಂಬ ಈಗಲು ಸಹ ಪ್ರತಿದಿನ ನಾನೂರು, ಐನೂರು ಜನರಿಗೆ ಆಹಾರ ನೀಡುತ್ತಾರೆ. ಅದು ಒಂದು ದೊಡ್ಡ ಶೀಮಂತ ಕುಟುಂಬ ಮತ್ತು ಆ ಕುಟುಂಬದ ನಿಯಮವೇನೆಂದರೆ, ಒಂದು ಗಂಡು ಅಥವಾ ಹೆಣ್ಣು ಮಗುವಿನ ಜನನದ ನಂತರ, ಐದು ಸಾವಿರ ರೂಪಾಯಿಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡುತ್ತಿದ್ದರು. ಮತ್ತು ಮದುವೆಯ ಸಮಯದಲ್ಲಿ, ಆ ಐದು ಸಾವಿರ ರೂಪಾಯಿಗಳು ಬಡ್ಡಿ ಸಮೇತ ಅವನು/ಅವಳು ತೆಗೆದುಕೊಳ್ಳಬಹುದು. ಇದನ್ನು ಬಿಟ್ಟು ಬಂಡವಾಳದಲ್ಲಿ ಬೇರೆ ಯಾವುದೇ ಪಾಲು ಇಲ್ಲ. ಮತ್ತು ಆ ಕುಟುಂಬದಲ್ಲಿ ವಾಸಿಸುವರೆಲ್ಲರಿಗು ಆಹಾರ ಮತ್ತು ವಸತಿ ಸಿಗುತ್ತದೆ. ಇದು ಅವರ.... ಆದರೆ ಆ ಮೂಲ, ನಾನು ಹೇಳುವ ಅರ್ಥವೇನೆಂದರೆ, ಆ ಕುಟುಂಬದ ಸ್ಥಾಪಕ, ನಂದಿ, ಅವನು ಈ ವ್ಯಾಪರವನ್ನು ಪ್ರಾರಂಭಿಸಿದ್ದು ಒಂದು ಸತ್ತ ಇಲಿಯಿಂದ.

ಇದು ನಿಜ, ಒಬ್ಬ ಸ್ವತಂತ್ರನಾಗಿ ಬದುಕಲು ಬಯಸಿದರೆ... ನಾನು ಇದನ್ನು ಕಲಕತ್ತದಲ್ಲಿ ನೋಡಿದ್ದೇನೆ. ಬಡ ವೈಶ್ಯರು ಸಹ, ಬೆಳಗ್ಗೆ, ಅವರು ಸ್ವಲ್ಪ ಬೇಳೆ ತೆಗೆದುಕೊಂಡು, ಒಂದು ಚೀಲ ಬೇಳೆ, ಬಾಗಿಲಿಂದ ಬಾಗಿಲಿಗೆ... ಎಲ್ಲೆಡೆ ಬೇಳೆಯ ಅಗತ್ಯವಿದೆ. ಆದ್ದರಿಂದ, ಅವನು ಬೆಳಗ್ಗೆ ಬೇಳೆ ವ್ಯಾಪರ ಮಾಡುತ್ತಾನೆ, ಮತ್ತು ಸಂಜೆ ಒಂದು ಡಬ್ಬಿಯಲ್ಲಿ ಸೀಮೆಎಣ್ಣೆ ತಂದು ವ್ಯಪಾರ ಮಾಡುತ್ತಾನೆ. ಸಾಯಂಕಾಲ ಎಲ್ಲರಿಗೂ ಅದರ ಅಗತ್ಯವಿರುತ್ತದೆ. ಈಗಲು ನೀವು ಭಾರತದಲ್ಲಿ ಕಾಣಬಹುದು, ಅವರು.... ಯಾರೂ ಸಹ ಉದ್ಯೋಗ ಹುಡುಕುತ್ತಿರಲ್ಲಿಲ್ಲ. ಒಂದು ಸ್ವಲ್ಪ ಅವರಿಗೆ ಏನು ಸಿಗುತ್ತಿತೊ, ಆ ಕಡಲೇಕಾಯಿ ಅಥವಾ ನೆಲಗಡಲೆ, ಮಾರಿ ಅವರು ಏನೊ ಒಂದು ಮಾಡುತ್ತಿದ್ದರು. ಏನೇ ಆದರು ಕೃಷ್ಣನು ಎಲ್ಲರಿಗೂ ಪೋಷಣೆ ನೀಡುತ್ತಿದ್ದಾನೆ. "ಈ ವ್ಯಕ್ತಿ ನನ್ನನು ಪೋಷಿಸುತ್ತಿದ್ದಾನೆ", ಎಂದು ಯೋಚಿಸುವುದು ತಪ್ಪು. ಇಲ್ಲ. ಶಾಸ್ತ್ರ ಹೇಳುತ್ತದೆ, ಏಕೋ ಯೋ ಬಹುನಾಂ ವಿಧಧಾತಿ ಕಾಮಾನ್. ಇದು ಕೃಷ್ಣನಲ್ಲಿ ಇರುವ ನಂಬಿಕೆ: "ಕೃಷ್ಣ ನನಗೆ ಜೀವ ನೀಡಿದ್ದಾನೆ, ಕೃಷ್ಣ ನನ್ನನು ಇಲ್ಲಿ ಕಳುಹಿಸಿದ್ದಾನೆ. ಆದ್ದರಿಂದ, ಅವನೇ ನನ್ನನು ಪೋಷಿಸುತ್ತಾನೆ. ಆದ್ದರಿಂದ, ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನು ಏನಾದರೂ ಮಾಡುತ್ತೇನೆ, ಮತ್ತು ಅದರ ಮೂಲಕ ಕೃಷ್ಣನ ಪೋಷಣೆ ದೊರಕುತ್ತದೆ."