KN/Prabhupada 1073 - ನಾವು ಎಲ್ಲಿಯವರೆಗೂ ಭೌತಿಕ ಪ್ರಕೃತಿಯ ಮೇಲೆ ಯಜಮಾನಿಕೆಯ ಪ್ರವೃತ್ತಿಯನ್ನು ಬಿಡುವುದಿಲ್ಲವೋ



660219-20 - Lecture BG Introduction - New York

ಭಗವದ್ಗೀತೆಯ 15ನೇ ಅಧ್ಯಾಯದಲ್ಲಿ ಈ ಭೌತಿಕ ಪ್ರಪಂಚದ ನಿಜವಾದ ಚಿತ್ರವನ್ನು ಕೊಟ್ಟಿದೆ. ಅಲ್ಲಿ ಹೀಗೆ ಹೇಳಿದೆ - ಊರ್ಧ್ವ ಮೂಲಂ ಅಧಃ ಶಾಖಂ ಅಶ್ವತ್ಥಂ ಪ್ರಾಹುರವ್ಯಯಂ ಛ ಅಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದಾವಿತ್ (ಭ ಗೀತೆ 15.1) ಭಗವದ್ಗೀತೆಯ 15ನೇ ಅಧ್ಯಾಯದಲ್ಲಿ ಈ ಭೌತಿಕ ಪ್ರಪಂಚವನ್ನು ಮೇಲ್ಭಾಗದಲ್ಲಿ ಬೇರುಗಳು ಊರ್ಧ್ವ ಮೂಲಂ ಇರುವ ಮರವೆಂದು ವರ್ಣಿಸಿದ್ದಾರೆ. ಬೇರುಗಳು ಮೇಲಿರುವ ಮರದ ಅನುಭವ ನಿಮಗಿದೆಯೇ? ನಮಗೆ ಬೇರುಗಳು ಮೇಲಿರುವ ಈ ಮರದ ಅನುಭವ ಪ್ರತಿಬಿಂಬದಲ್ಲಿ ಆಗುತ್ತದೆ. ನಾವು ನದಿಯ ಅಥವಾ ಜಲಾಶಯದ ದಡದ ಮೇಲೆ ನಿಂತರೆ ನೀರಿನ ಪ್ರತಿಬಿಂಬದಲ್ಲಿ ಮರಗಳು ತಲೆಕೆಳಗಾಗಿರುವುದನ್ನು ಕಾಣುತ್ತೇವೆ. ಕೊಂಬೆಗಳು ಕೆಳಕ್ಕೆ ಹೋಗುತ್ತವೆ, ಬೇರುಗಳು ಮೇಲೆ ಹೋಗುತ್ತವೆ. ಇದೇ ರೀತಿಯಲ್ಲಿ ಈ ಐಹಿಕ ಪ್ರಪಂಚವು ಆಧ್ಯಾತ್ಮಿಕ ಪ್ರಪಂಚದ ಪ್ರತಿಬಿಂಬ. ಮರದ ಪ್ರತಿಬಿಂಬ ನೀರಿನಲ್ಲಿ ತಲೆಕೆಳಗಾಗಿ ಕಾಣುವಂತೆ ಈ ಐಹಿಕ ಜಗತ್ತು ಪ್ರತಿಬಿಂಬ ಮಾತ್ರ. ಪ್ರತಿಬಿಂಬದಲ್ಲಿ ವಾಸ್ತವಿಕತೆ ಇರಲು ಸಾಧ್ಯವಿಲ್ಲ ಆದರೆ ಪ್ರತಿಬಿಂಬದಿಂದ ವಾಸ್ತವಿಕತೆ ಇದೆ ಎಂದು ಅರ್ಥಮಾಡಿಕೊಳ್ಳಬಹುದು. ಉದಾಹರಣೆಗೆ ಮರಳುಗಾಡಿನಲ್ಲಿ ನೀರಿಲ್ಲ. ಆದರೆ ಮರೀಚಿಕೆಯು ನೀರು ಎನ್ನುವ ವಸ್ತು ಉಂಟು ಎನ್ನುವುದನ್ನು ಸೂಚಿಸುತ್ತದೆ.. ಹಾಗೆಯೇ ಆಧ್ಯಾತ್ಮಿಕ ಜಗತ್ತಿನ ಪ್ರತಿಬಿಂಬವಾದ ಐಹಿಕ ಜಗತ್ತಿನಲ್ಲಿ ಖಂಡಿತವಾಗಿಯೂ ನೀರಿಲ್ಲ (ಆನಂದವಿಲ್ಲ) ಆದರೆ ನಿಜವಾದ ಆನಂದ (ನೀರು) ಆಧಾತ್ಮಿಕ ಜಗತ್ತಿನಲ್ಲುಂಟು. ನಾವು ಆಧ್ಯಾತ್ಮಿಕ ಜಗತ್ತನ್ನು ಈ ರೀತಿ ಸೇರಬೇಕೆಂದು ಭಗವಂತ ಸೂಚಿಸುತ್ತಾನೆ. ನಿರ್ಮಾಣ ಮೋಹಾ ಜಿತ ಸಂಗ ದೋಷಾ ಆಧ್ಯಾತ್ಮ ನಿತ್ಯಾ ವಿನಿವೃತ್ತ ಕಾಮಾಃ ದ್ವನ್ದ್ವೈ ವಿಮುಕ್ತಾಹ ಸುಖ ದುಃಖ ಸಂಗೈರ್ ಗಚ್ಚಂತ್ಯ ಮೂಢಾಃ ಪದಮವ್ಯಯಂ ತತ್ (ಭ ಗೀತೆ 15.5) ನಿರ್ಮಾಣಾ ಮೋಹ ಆದವನು ಪದಂ ಅವ್ಯಯಂ ಅನ್ನು ಎಂದರೆ ಸನಾತನ ರಾಜ್ಯವನ್ನು ಸೇರಬಲ್ಲ. ನಿರ್ಮಾಣಾ ಮೋಹ. ನಿರ್ಮಾಣಾ ಎಂದರೆ ನಾವು ಸ್ಥಾನಗಳ ಹಿಂದೆ ಬಿದ್ದಿದ್ದೇವೆ. ಕೃತಕವಾಗಿ ನಮಗೆ ಸ್ಥಾನ ಬೇಕು. ಒಬ್ಬನಿಗೆ ಸರ್ ಆಗುವ ಆಸೆ. ಇನ್ನೊಬ್ಬನಿಗೆ ದೇವರಾಗುವ ಆಸೆ, ಮತ್ತೊಬ್ಬನಿಗೆ ಅಧ್ಯಕ್ಷನಾಗುವ, ಶ್ರೀಮಂತನಾಗುವ, ಅಥವಾ ರಾಜನಾಗುವ ಇಲ್ಲವೇ ಬೇರೇನೋ ಆಗುವ ಬಯಕೆ. ನಾವು ಎಲ್ಲಿಯವರೆಗೂ ಈ ಸ್ಥಾನ ಮಾನಗಳಿಗೆ ಆಂಟಿಕೊಂಡಿರುತ್ತೇವೋ ಈ ಸ್ಥಾನಗಳು ದೇಹಕ್ಕೆ ಸೇರಿದವು, ಆದರೆ ನಾವು ಈ ದೇಹಗಳಲ್ಲ. ಇದರ ಅರಿವೇ ಆಧ್ಯಾತ್ಮಿಕ ಸಾಕ್ಷಾತ್ಕಾರದಲ್ಲಿ ಮೊದಲ ಹೆಜ್ಜೆ. ಯಾರಿಗೆ ಸ್ಥಾನಗಳ ಮೋಹವಿಲ್ಲವೋ ಮತ್ತು ಜಿತ ಸಂಗ ದೋಷರಾಗಿದ್ದಾರೋ, ಸಂಗ ದೋಷ ಎಂದರೆ ನಮಗೆ ತ್ರಿವಿಧ ಪ್ರಕೃತಿ ಗುಣಗಳ ಸಂಭಂಧವಿದೆ. ನಾವು ಯಾವಾಗ ಭಗವಂತನ ಭಕ್ತಿಸೇವೆಯಿಂದ ತ್ರಿಗುಣಗಳಿಂದ ದೂರವಾದಾಗ ಎಲ್ಲಿಯವರೆಗೂ ಭಗವಂತನ ಭಕ್ತಿ ಸೇವೆಯ ಮೇಲೆ ಆಕರ್ಷಣೆ ಉಂಟಾಗುವುದಿಲ್ಲವೋ ಅಲ್ಲಿಯವರೆಗೆ ಭೌತಿಕ ಪ್ರಕೃತಿಯ ತ್ರಿಗುಣಗಳಿಂದ ದೂರವಾಗಲು ಸಾಧ್ಯವಿಲ್ಲ. ಆದ್ದರಿಂದ ಭಗವಂತ ವಿನಿರ್ವೃತ್ತ ಕಾಮಾಃ ಎನ್ನುತ್ತಾನೆ. ಈ ಸ್ಥಾನಾಮಾನಗಳಿಗೂ ಮೋಹಗಳಿಗೂ ನಮ್ಮ ಕಾಮ ಮತ್ತು ಅಪೇಕ್ಷೆಗಳೇ ಕಾರಣ. ನಾವು ಪ್ರಕೃತಿಯ ಮೇಲೆ ಯಜಮಾನಿಕೆ ತೋರಬಯಸುತ್ತೇವೆ. ಆದ್ದರಿಂದ ನಾವು ಎಲ್ಲಿಯವರೆಗೆ ಈ ಯಜಮಾನಿಕೆಯ ಪ್ರವೃತ್ತಿಯನ್ನು ಬಿಡುವುದಿಲ್ಲವೋ ಅಲ್ಲಿಯವರೆಗೂ ನಾವು ಭಗವಂತನ ಧಾಮವಾದ ಸನಾತನ ಧಾಮಕ್ಕೆ ಹೋಗಲು ಸಾಧ್ಯವಿಲ್ಲ. ದ್ವನ್ದ್ವೈ ವಿಮುಕ್ತಾಹ ಸುಖ ದುಃಖ ಸಂಗೈರ್ ಗಚ್ಚಂತ್ಯ ಮೂಢಾಃ ಪದಮವ್ಯಯಂ ತತ್ (ಭ ಗೀತೆ 15.5) ಆ ಶಾಶ್ವತ ರಾಜ್ಯ (ಯಾವುದು ಐಹಿಕ ಪ್ರಪಂಚದ ಹಾಗೆ ನಾಶ ಹೊಂದುವುದಿಲ್ಲವೋ ಅದು) ವನ್ನು ಅಮೂಢರು ಮಾತ್ರ ಸೇರಬಹುದು. ಅಮೂಢ ಎಂದರೆ ದಿಗ್ಭ್ರಮೆಯಾಗದವನು. ಹುಸಿ ಐಹಿಕ ಭೋಗಗಳು ಆಕರ್ಷಣೆಯಿಂದ ದಿಗ್ಭ್ರಮೆಯಾಗದವನು ಮಾತ್ರ ಭಗವಂತನ ಸೇವೆಯಲ್ಲಿ ನಿಷ್ಠನಾದವನು ಮಾತ್ರ ಸನಾತನ ರಾಜ್ಯವನ್ನು ಸೇರಲು ಅರ್ಹ. ಆ ಸನಾತನ ರಾಜ್ಯಕ್ಕೆ ಸೂರ್ಯ, ಚಂದ್ರ, ವಿದ್ಯುತ್ತಿನ ಅಗತ್ಯವಿಲ್ಲ. ಇದು ಶಾಶ್ವತವಾದ ರಾಜ್ಯವನ್ನು ಸೇರಲು ಇರುವ ಸುಳಿವು.