KN/Prabhupada 0009 - ಕಳ್ಳ ಭಕ್ತನಾದದ್ದು



Lecture on SB 1.2.12 -- Los Angeles, August 15, 1972

ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ: ನಾಹಂ ಪ್ರಕಾಶಃ ಸರ್ವಸ್ಯ ಯೋಗ-ಮಾಯಾ-ಸಮಾವೃತಃ (ಭ.ಗೀ 7.25): "ನಾನು ಯಾರಿಗೂ ಕಾಣಿಸುವುದ್ದಿಲ್ಲ. ಯೋಗಮಾಯ, ಯೋಗಮಾಯ ಆವರಿಸಿದ್ದಾಳೆ." ಆದ್ದರಿಂದ, ನೀವು ಭಗವಂತನನ್ನು ನೋಡುವುದು ಹೇಗೆ ಸಾಧ್ಯ? ಆದರೆ ಈ ಧೂರ್ತತನ ಮುಂದುವರೆಯುತ್ತಿದೆ. "ನೀವು ನನಗೆ ದೇವರನ್ನು ತೋರಿಸುತ್ತಿರಾ? ನೀವು ದೇವರನ್ನು ನೋಡಿದ್ದಿರಾ?" ದೇವರು ಕೇವಲ ಇವರಿಗೆ ಒಂದು ಆಟದ ವಸ್ತುವಾಗಿದ್ದಾನೆ, "ದೇವರು ಇಲ್ಲಿದ್ದಾನೆ. ಇವನು ದೇವರ ಅವತಾರ. "ನ ಮಾಮ್ ದುಷ್ಕೃತಿನೊ ಮೂಢಾಃ ಪ್ರಪದ್ಯಂತೆ ನರಾಧಮಾಃ (ಭ.ಗೀ 7.15). ಅವರು ಪಾಪತ್ಮರು, ಧೂರ್ತರು, ಮೂಢರು, ಕೀಳುಮಟ್ಟದ ಮನುಕುಲುದವರು. ಅವರು ಹೀಗೆ ಕೇಳುತ್ತಾರೆ: "ನೀವು ನನಗೆ ದೇವರನ್ನು ತೊರಿಸುತ್ತಿರಾ?" ನೀವು ದೇವರನು ಕಾಣಲು ಏನು ಅರ್ಹತೆಗಳಿಸಿದ್ದಿರಾ? ಇಲ್ಲಿದೆ ನೋಡಿ ಅದಕ್ಕೆ ಅರ್ಹತೆ. ಏನದು? ತಕ್ ಶ್ರದ್ದಧಾನಾ ಮುನಯಃ (ಶ್ರೀ.ಭಾ 1.2.12). ಎಲ್ಲದಕ್ಕಿಂತ ಮೊದಲು ಅವರು ನಂಬಿಕೆಯಿರುವವರಾಗಿರಬೇಕು. ನಂಬಿಕೆಯುಳ್ಳ. ಶ್ರದ್ದಧಾನಾಃ, ಅವನು ದೇವರನ್ನು ನೋಡಲು ಬಹಳ ಕಾತುರನಾಗಿರಬೇಕು, ವಾಸ್ತವವಾಗಿ. ಅದು ಒಂದು ಮನಬಂದಂತ, ಹುಡುಗಾಟದ ವಿಷಯ ಅಲ್ಲ, ಈ "ನೀವು ನನಗೆ ದೇವರನ್ನು ತೋರಿಸುತ್ತಿರಾ?" ಎಂದು ಕೇಳುವುದು. ಮಾಯಾಮಾಟ, ದೇವರು ಏನೋ ಒಂದು ಮಾಯಾಮಾಟದ ಹಾಗೆ. ಇಲ್ಲ. ಅವನು ಗಂಭೀರ ಪ್ರಯತ್ನ ಮಾಡಬೇಕು: ಹೌದು, ದೇವರು ಇದ್ದರೆ... ಅವನನ್ನು ನೋಡಿದ್ದಾರೆ, ನಮ್ಮಗೆ ದೇವರ ಬಗ್ಗೆ ಮಾಹಿತಿ ಇದೆ. ಆದ್ದರಿಂದ ನಾನು ನೋಡಬೇಕು."

ಈ ಸಂಬಂಧವಾಗಿ ಒಂದು ಕಥೆ ಇದೆ. ಇದು ಬಹಳ ಬೋಧಪ್ರದವಾಗಿದೆ; ಕೇಳಲು ಪ್ರಯತ್ನಿಸಿ. ಒಬ್ಬ ವೃತ್ತಿಪರ ವಾಚಕ, ಭಾಗವತಂ ಬಗ್ಗೆ ಪ್ರವಚನ ಮಾಡುತ್ತಿದ್ದರು, ಮತ್ತು ಅವರು ಕೃಷ್ಣನನ್ನು ವಿವರಿಸುತ ಹೀಗೆ ಹೇಳಿದರು, ಅತ್ಯಂತ ಹೆಚ್ಚಾಗಿ ಎಲ್ಲಾ ಆಭರಣಗಳಿಂದ ಅಲಂಕರಿಸಿದ್ದಾನೆ, ಅವನನ್ನು ಹಸುಗಳನ್ನು ಮೇಯಿಸಲು ಕಾಡಿಗೆ ಕಳುಹಿಸುತ್ತಾರೆ ಎಂದು. ಆ ಸಭೆಯಲ್ಲಿ ಒಬ್ಬ ಕಳ್ಳ ಇದ್ದ. ಆಗ ಅವನು ಯೋಚಿಸಿದ, "ಏಕೆ ನಾನು ವೃಂದಾವನಕ್ಕೆ ಹೋಗಿ ಆ ಹುಡುಗನನ್ನು ಲೂಟಿ ಮಾಡಬಾರದು? ಅವನು ಅನೇಕ ಬೆಲೆಬಾಳುವ ಒಡವೆಗಳೊಂದಿಗೆ ಅರಣ್ಯದಲ್ಲಿದ್ದಾನೆ. ನಾನು ಅಲ್ಲಿಗೆ ಹೋಗಿ ಆ ಹುಡುಗನನ್ನು ಹಿಡಿದುಕೊಂಡು ಅವನ ಎಲ್ಲಾ ಆಭರಣಗಳನ್ನು ತೆಗೆದುಕೊಳ್ಳುವೆ." ಇದು ಅವನ ಉದ್ದೇಶವಾಗಿತ್ತು. ಆದ್ದರಿಂದ, ಅವನು ಬಹಳ ಗಂಭೀರವಾಗಿ, "ನಾನು ಆ ಹುಡುಗನನ್ನು ಹುಡುಕಬೇಕು. ಆಗ ನಾನು ಒಂದೇ ರಾತ್ರಿಯಲ್ಲಿ ಕೋಟ್ಯದಿಪತಿ ಆಗುತ್ತೇನೆ. ಏಷ್ಟೊಂದು ಆಭರಣಗಳು." ಆದ್ದರಿಂದ, ಅವನು ಅಲ್ಲಿಗೆ ಹೋದ, ಆದರೆ ಅವನ ಅರ್ಹತೆ ಏನೆಂದರೆ "ನಾನು ಕೃಷ್ಣನನ್ನು ನೋಡಬೇಕು. ನಾನು ಕೃಷ್ಣನನ್ನು ನೋಡಬೇಕು." ಆ ಆತಂಕ, ಆ ತವಕದಿಂದ, ಅವನಿಗೆ ವೃಂದಾವನದಲ್ಲಿ ಕೃಷ್ಣನನ್ನು ನೋಡಲು ಸಾಧ್ಯವಾಯಿತು. ಭಾಗವತ ಪ್ರವಚಕ ಹೇಗೆ ಕೃಷ್ಣನನ್ನು ವರ್ಣಿಸಿದನೋ ಹಾಗೆಯೇ ಇದ್ದ ಕೃಷ್ಣನನ್ನು ನೋಡಿದ. ಆಮೇಲೆ ಅವನು, "ನೀನು ಎಷ್ಟು ಒಳ್ಳೆಯ ಹುಡುಗ, ಕೃಷ್ಣ", ಎಂದು ಮಾತನಾಡಿಸಿದ. ಅವನು ಹೊಗಳಲು ಶುರುಮಾಡಿದ. ಅವನು ಹೀಗೆ ಯೋಚಿಸಿದ, "ಹೊಗಳುವ ಮೂಲಕ ನಾನು ಎಲ್ಲಾ ಆಭರಣಗಳನ್ನು ತೆಗೆದುಕೊಳ್ಳುವೆ." ಅವನು ತನ್ನ ನಿಜವಾದ ಕಾರ್ಯೋದ್ದೇಶವನ್ನು ಪ್ರಸ್ತಾಪಿಸಿದ: "ಆದ್ದರಿಂದ, ನಾನು ನಿನ್ನ ಈ ಆಭರಣಗಳನ್ನು ತೆಗೆದುಕೊಳ್ಳಲೆ? ನೀನು ಬಹಳ ಶ್ರೀಮಂತ." "ಇಲ್ಲ, ಇಲ್ಲ, ಇಲ್ಲ. ನನ್ನ ತಾಯಿ ಕೋಪಗೊಳ್ಳುತ್ತಾಳೆ. ನಾನು ಕೊಡಲಾರೆ..." (ನಗು) ಕೃಷ್ಣ ಹೇಳಿದನು. ಆಗ ಅವನು ಕೃಷ್ಣನನ್ನು ಪಡೆಯಲು ತುಂಬಾ ತುಂಬಾ ಕಾತುರನಾದ. ಮತ್ತು ಈಗಾಗಲೇ ಕೃಷ್ಣನ ಸಂಘದಿಂದ ಅವನು ಪರಿಶದ್ಧನಾಗಿದನು. ಆಗ ಕೊನೆಯಲ್ಲಿ ಕೃಷ್ಣನು ಹೇಳಿದ: "ಸರಿ, ನೀನು ತೆಗೆದುಕೊಳ್ಳಬಹುದು." ಆಗ ಅವನು ತಕ್ಷಣವೆ ಭಕ್ತನಾದ. ಕೃಷ್ಣನ ಸಂಘದ ಕಾರಣವಾಗಿ...

ಆದ್ದರಿಂದ, ಒಂದಲ್ಲಾ ಒಂದು ರೀತಿಯಲ್ಲಿ, ನಾವು ಕೃಷ್ಣನ ಸಂಪರ್ಕದಲ್ಲಿ ಬರಬೇಕು. ಒಂದಲ್ಲಾ ಒಂದು ರೀತಿ. ಆಗ ನಾವು ಪರಿಶುದ್ಧರಾಗುತ್ತೇವೆ.