KN/Prabhupada 0010 - ಕೃಷ್ಣನನ್ನು ಅನುಕರಿಸಬೇಡಿ



Lecture on SB 7.9.9 -- Mayapur, February 16, 1976

ಕೃಷ್ಣ... ಈ ಹದಿನಾರು ಸಾವಿರ ಪತ್ನಿಯರು, ಹೇಗೆ ಅವರ ಪತ್ನಿಯರಾದರು? ನಿಮ್ಮಗೆ ಈ ಕಥೆ ಗೊತ್ತಿದೆ. ಅತ್ಯಂತ ಸುಂದರಿಯರು, ಹದಿನಾರು ಸಾವಿರ ಸುಂದರಿಯರನ್ನು, ರಾಜಕುಮಾರಿಯರನ್ನು ಒಬ್ಬ ಅಸುರ ಅಪಹರಿಸಿದ. ಆ ಅಸುರನ ಹೆಸರೇನು? ಭೌಮಾಸುರ, ಅಲ್ಲವೇ? ಹೌದು, ಆಗ ಅವರು ಕೃಷ್ಣನನ್ನು ಹೀಗೆ ಪ್ರಾರ್ಥಿಸಿದರು: "ಈ ಅಯೋಗ್ಯನಿಂದ ಅಪಹರಿಸಲ್ಪಟ್ಟು ನಾವು ಬಹಳ ನರಳುತ್ತಿದ್ದೇವೆ. ದಯವಿಟ್ಟು ನಮ್ಮನು ಕಾಪಾಡು", ಎಂದು. ಆಗ ಅವರನ್ನು ಕಾಪಾಡಲು ಕೃಷ್ಣನು ಬಂದ, ಭೌಮಾಸುರನನ್ನು ಕೊಂದು ಎಲ್ಲಾ ಹುಡುಗಿಯರನ್ನು ಬಿಡುಗಡೆ ಮಾಡಿದ. ಆದರೆ ಬಿಡಿಗಡೆಯ ನಂತರವು ಅವರು ಅಲ್ಲಿಯೆ ನಿಂತ್ತಿದ್ದರು. ಆಗ ಕಷ್ಣನು ಅವರನ್ನು ಕೇಳಿದ, "ಈಗ ನೀವು ನಿಮ್ಮ ತಂದೆಯ ಬಳಿ ಮನೆಗೆ ಹೋಗ ಬಹುದು." ಅವರು ಹೇಳಿದರು, "ನಮ್ಮನು ಅಪಹರಿಸಲ್ಪಟ್ಟಿರುವವರು, ನಮಗೆ ಮದುವೆಯಾಗಲು ಸಾಧ್ಯವಿಲ್ಲ." ಈಗಲು ಭಾರತದಲ್ಲಿ ಈ ನಿಯಮವಿದೆ. ಒಂದು ಹೆಣ್ಣು, ಯುವತಿ, ಮನೆಯಿಂದ ಒಂದು ಅಥವಾ ಎರಡು ದಿನಗಳು ಹೊರಹೋದರೆ, ಯಾರೂ ಅವಳನ್ನು ಮದುವೆಯಾಗುವುದಿಲ್ಲ. ಯಾರೂ ಅವಳನ್ನು ಮದುವೆಯಾಗುವುದ್ದಿಲ್ಲ. ಅವಳು ಹಾಳಾಗಿದ್ದಾಳೆ ಎಂದು ಪರಿಗಣಿಸುತ್ತಾರೆ. ಇದು ಈಗಲು ಭಾರತದ ಪದ್ಧತಿ. ಅವರನ್ನು ಅನೇಕ ದಿನಗಳು ಅಥವಾ ಹಲವು ವರುಷಗಳು ಅಪಹರಿಸಲಾಗಿತ್ತು, ಆದ್ದರಿಂದ ಅವರು ಕಷ್ಣನನ್ನು ಮನವಿ ಮಾಡಿಕೊಂಡರು. "ನಮ್ಮ ತಂದೆಯು ನಮ್ಮನು ಸ್ವೀಕರಿಸುವುದ್ದಿಲ್ಲ, ಮತ್ತು ನಮ್ಮನು ಯಾರು ಮದುವೆಯಾಗುವುದಿಲ್ಲ." ಆಗ ಕಷ್ಣನಿಗೆ ಅರ್ಥವಾಯಿತು, "ಇವರ ಸ್ಥಾನ ಅನಿಶ್ಚಿತ. ಅವರು ಬಿಡುಗಡೆಯಾದರೂ ಎಲ್ಲೂ ಹೋಗಲು ಸಾಧ್ಯವಿಲ್ಲ." ಆಗ ಕಷ್ಣ... ಅವನು ಬಹಳ ಕರುಣಾಮಯಿ, ಭಕ್ತ-ವತ್ಸಲ ಅವನು ವಿಚಾರಿಸಿದ, "ನಿಮ್ಮಗೆ ಏನು ಬೇಕು?" ಅವರು ಹೇಳಿದರು, "ನೀನು ನಮ್ಮನು ಸ್ವೀಕರಿಸು. ಇಲ್ಲದಿದ್ದರೆ ನಾವು ಉಳಿಯಲು ಬೇರೆ ಯಾವುದೇ ದಾರಿಯಿಲ್ಲ." ಕಷ್ಣ ತಕ್ಷಣವೇ ಹೇಳಿದ: "ಹೌದು, ಬನ್ನಿ." ಇದು ಕಷ್ಣ. ಮತ್ತು ಅವರ ಹದಿನಾರು ಸಾವಿರ ಹೆಂಡತಿಯರು ಒಂದು ಶಿಬಿರದಲ್ಲಿ ಕೇಂದ್ರೀಕರಿಸಲಾಯಿತು ಎಂದು ಅಲ್ಲ. ಅವನು ತಕ್ಷಣವೇ ಹದಿನಾರು ಸಾವಿರ ಅರಮನೆಗಳನ್ನು ಕಟ್ಟಿಸಿದ. ಅವನು ಅವರನ್ನು ಪತ್ನಿಯಂದು ಸ್ವೀಕರಿಸಿದ ಕಾರಣ, ಅವರನ್ನು ತನ್ನ ಪತ್ನಿಯಂತೆ, ಅವನ ರಾಣಿಯ ಹಾಗೆ ನಿರ್ವಹಣೆ ಮಾಡಬೇಕೆ ಹೊರತು "ಅವರಿಗೆ ಬೇರೆ ಯಾವ ದಾರಿಯೂ ಇಲ್ಲ, ಅವರು ನನ್ನ ಆಶ್ರಯಕ್ಕೆ ಬಂದಿದ್ದಾರೆ. ನಾನು ಅವರನ್ನು ಹೇಗೋ ಇಟ್ಟರೆ ಸಾಕು" ಎಂದಲ್ಲ. ಬಹಳ ಗೌರವದಿಂದ ರಾಣಿಯಂತೆ, ಕಷ್ಣನ ರಾಣಿಯಂತೆ ಇರಿಸಿದೆ. ಮತ್ತೆ ಯೋಚಿಸಿದ, "ಹದಿನಾರು ಸಾವಿರ ಪತ್ನಿಯರು...ನಾನು ಮಾತ್ರ ಒಬ್ಬನೆ ಇದ್ದರೆ, ಒಂದು ವ್ಯಕ್ತಿ, ಆಗ ನನ್ನ ಪತ್ನಿಯರಿಗೆ ನನನ್ನು ಸಂಪರ್ಕಿಸಲು ಸಾದ್ಯವಿಲ್ಲ. ಆಗ ಎಲ್ಲರು ಹದಿನಾರು ಸಾವಿರ ದಿನಗಳು ಕಾಯಬೇಕು ತಮ್ಮ ಪತಿಯನ್ನು ನೋಡಲು. ಇಲ್ಲ." ಆಗ ಅವನು ಹದಿನಾರು ಸಾವಿರ ಕಷ್ಣನಾಗಿ ವಿಸ್ತರಿಸಿಕೊಂಡ. ಇದುವೇ ಕಷ್ಣ. ಆ ಅಯೋಗ್ಯರು, ಕಷ್ಣನನ್ನು ಹೆಣ್ಣುಮರುಳ ಎಂದು ದೂರುತ್ತಾರೆ. ಅವನು ನಿಮ್ಮ ತರಹ ಅಲ್ಲ. ನಿಮಗೆ ಒಂದು ಹೆಂಡತಿಯನ್ನು ನಿರ್ವಹಿಸಲು ಸಾದ್ಯವಿಲ್ಲ, ಆದರೆ ಅವನು ಹದಿನಾರು ಸಾವಿರ ಪತ್ನಿಯರನ್ನು ಹದಿನಾರು ಸಾವಿರ ಅರಮನೆಗಳಲ್ಲಿ ನಿರ್ವಹಿಸಿದ ಮತ್ತು ಹದಿನಾರು ಸಾವಿರ ರೂಪ ವಿಸ್ತರಣೆಯಲ್ಲಿ. ಪ್ರತಿಯೊಬ್ಬರಿಗೂ ಸಂತಸವಾಯಿತು. ಇದು ಕೃಷ್ಣ. ಕೃಷ್ಣ ಯಾರೆಂದು ನಾವು ಅರ್ಥ ಮಾಡಿಕೊಳ್ಳಬೇಕು. ಕೃಷ್ಣನನ್ನು ಅನುಕರಿಸಲು ಪ್ರಯತ್ನಿಸಬೇಡಿ. ಎಲ್ಲಕಿಂತ ಮೊದಲು ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.